ಇನ್ನು ವಾರಾಂತ್ಯದಲ್ಲಿಯೂ ಹತ್ತು ನಿಮಿಷಕ್ಕೊಮ್ಮೆ ಓದಲಿದೆ ಮೆಟ್ರೋ ರೈಲು, ಬಿಎಂಆರ್ ಸಿ ಎಲ್ ಸ್ಪಷ್ಟನೆ 
ರಾಜ್ಯ

ಇನ್ನು ವಾರಾಂತ್ಯದಲ್ಲಿಯೂ ಹತ್ತು ನಿಮಿಷಕ್ಕೊಮ್ಮೆ ಓಡಲಿದೆ ಮೆಟ್ರೋ ರೈಲು, ಬಿಎಂಆರ್ ಸಿ ಎಲ್ ಸ್ಪಷ್ಟನೆ

ಬೆಂಗಳೂರು ಮೆಟ್ರೋ ರೈಲು ನಿಗಮವು ಸತತ ಎರಡನೇ ಭಾನುವಾರ ಸಹ ಕಡಿಮೆ ಸಮಯದ ಅಂತರದಲ್ಲಿ ರೈಲುಗಳನ್ನು ನಿರ್ವಹಿಸಿದೆ.

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮವು ಸತತ ಎರಡನೇ ಭಾನುವಾರ ಸಹ ಕಡಿಮೆ ಸಮಯದ ಅಂತರದಲ್ಲಿ ರೈಲುಗಳನ್ನು ನಿರ್ವಹಿಸಿದೆ. ಎರಡು ರೈಲುಗಳ ನಡುವಿನ ಸಮಯದ ಅಂತರವನ್ನು 15 ನಿಮಿಷದಿಂದ 10 ನಿಮಿಷಕ್ಕೆ ಕಡಿತಗೊಳಿಸಿದ್ದು ನಿಗಮವು ಇದೇ ವೇಳಾಪಟ್ಟಿಯನ್ನು ಮುಂದುವರಿಸಲು ತೀರ್ಮಾನಿಸಿದೆ..
ಬೆಳಗ್ಗೆ 8.45 ರಿಂದ 10.30 ರವರೆಗೆ, ನವೆಂಬರ್ 10 ಮತ್ತು ನವೆಂಬರ್ 26 ರಂದು 10 ನಿಮಿಷಗಳ ಅಂತರದಲ್ಲಿ ರೈಲುಗಳ ನಿರ್ವಹಣೆ ಮಾಡಲಾಗಿತ್ತು. ಭಾನುವಾರ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ಈಕ್ರಮ ಕೈಗೊಳ್ಳಲಾಗಿದೆ ಎಂದು  ಬಿಎಂಆರ್ ಸಿ ಎಲ್ ನ ಕಾರ್ಯಾಚರಣೆ ಹಾಗೂ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾದ ಎ.ಎಸ್. ಶಂಕರ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. "ಭಾನುವಾರ ರಸ್ತೆಗಳು ಖಾಲಿಯಾಗಿರುತ್ತದೆ. ಖಾಸಗಿ ವಾಹನಗಳ ಸಂಖ್ಯೆ ಕಡಿಮೆ ಇರುವ ಕಾರಣ ರೈಲುಗಳು ಹದಿನೈದು ನಿಷಕ್ಕೊಂದರಂತೆ ಓಡುವುದು ಜನರಿಗೆ ಅನಾಣುಕೂಲವಾಗಿ ಕಾಣಿಸಿದೆ. ಇದರಲ್ಲಿಯೂ ಯಾರಾದರೂ ಕೆಂಪೇಗೌಡ ನಿಲ್ದಾಣದಲ್ಲಿ ಇಳಿದು ಬೇರೆ ರೈಲಿಗೆ ಬದಲಾಯಿಸಬೇಕಾದರೆ ಅವರು ಅರ್ಧ ಗಂಟೆ ಕಾಯಬೇಕಾಗಬಹುದು. ಇದು ಪ್ರಯಾಣಿಕರಿಗೆ ತೀವ್ರ ಸಮಸ್ಯೆಯನ್ನು ತರಲಿದೆ." ಂದು ೀಅವರು ಹೇಳಿದರು.
ಎರಡನೆ ಶನಿವಾರ, ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ ಪೂರ್ಣ ಪ್ರಮಾಣದ ರೈಲು ಸಂಚಾರವು ಜೂನ್ 25 ರಿಂದ ಪ್ರಾರಂಭವಾಯಿತು. ತಿಂಗಳಿನಿಂದ ತಿಂಗಳಿಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರುತ್ತಲಿದ್ದ ಅಂಶ ಮೆಟ್ರೋ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಅದರಲ್ಲಿ ಸಹ ನವೆಂಬರ್ ವೇಳೆಗೆ ಅದೊಂದು ಸ್ಥಿರ ಸಂಖ್ಯೆಯನ್ನು ತಲುಪಿದೆ, ಮೆಟ್ರೋ ನಿಗಮದ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರು ಹೇಳುವಂತೆ ಕಳೆದ ಅಕ್ಟೋಬರ್ ನಲ್ಲಿದ್ದಷ್ಟೇ ಸಂಖ್ಯೆಯ ಪ್ರಯಾಣಿಕರು ನವೆಂಬರ್ ನಲ್ಲಿಯೂ ಮುಂದುವರಿದಿದ್ದಾರೆ ಹೊರತು ಇದರಲ್ಲಿ ಹೆಚ್ಚಳವಾಗಿಲ್ಲ "ಕಳೆದ ತಿಂಗಳ ಉತ್ತರಾರ್ಧದಲ್ಲಿ ಹಾಗೆಯೇ ಸಾಮಾನ್ಯವಾಗಿ ಅಕ್ಟೋಬರ್ ನಲ್ಲಿ ಪ್ರಯಾಣಿಕರ ಸಂಖ್ಯೆ ಅತಿ ಹೆಚ್ಚು ಇರುತ್ತದೆ. ಕಳೆದ ತಿಂಗಳು ನಾವು 4 ಲಕ್ಷ ಪ್ರಯಾಣಿಕರನ್ನು ಕಂಡಿದ್ದು ಮೆಟ್ರೋ ಪ್ರಯಾಣಿಕರ ಸಂಖ್ಯೆ ಒಟ್ಟು ನಾಲ್ಕು ಬಾರಿ 4 ಲಕ್ಷ ದ ಗಡಿ  ದಾಟಿತ್ತು. ಆದರೆ ನವೆಂಬರ್ ನಲ್ಲಿ ಅಷ್ಟೊಂದು ಜನದಟ್ಟಣೆ ಇರದಿದ್ದರೂ 3.7 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ." ಖರೋಲಾ ಹೇಳಿದರು.
ನವೆಂಬರ್ ನಲ್ಲಿ  ಇದುವರೆಗೆ ಒಂದೇ ದಿನ 3.8 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿರುವುದು ಉತ್ತಮ ದಾಖಲೆಯಾಗಿದೆ. ಇದೇ ಅಕ್ಟೋಬರ್ ನಲ್ಲಿ 4.12 ಮಂದಿ ಪ್ರಯಾಣ ಬೆಳೆಸಿದ್ದರು. ಕಳೆದ ತಿಂಗಳು ಮೆಟ್ರೋ ಪ್ರಯಾಣ ದರಗಳಿಂದ ಬಂದ ಆದಾಯ `90 ಲಕ್ಷವಾಗಿದ್ದು ಈ ತಿಂಗಳು ಸಹ ಅಷ್ಟೇ ಆದಾಯ ನಿರೀಕ್ಷಿಸಲಾಗಿದೆ ಎಂದು ಖರೋಲಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT