ಓಲಾ, ಉಬರ್'ಗೆ ಸೆಡ್ಡು: ನಗರದ ರಸ್ತೆಗಿಳಿದ 'ನಮ್ಮ ಟೈಗರ್' 
ರಾಜ್ಯ

'ನಮ್ಮ ಟೈಗರ್'ಗೆ ದೇವೇಗೌಡ ಚಾಲನೆ: 5 ಸಾವಿರ ಕ್ಯಾಬ್ ಗಳ ಸೇವೆ ಆರಂಭ

ಓಲಾ ಹಾಗೂ ಉಬರ್ ಕಂಪನಿಗಳಿಗೆ ಪರ್ಯಾಯವಾಗಿ ಚಾಲಕರು ಹಾಗೂ ಮಾಲೀಕರು ಹುಟ್ಟುಹಾಕಿರುವ ನೂತನ ಆ್ಯಪ್ 'ನಮ್ಮ ಟೈಗರ್' ಬುಧವಾರ ಲೋಕಾರ್ಪಣೆಗೊಂಡಿದೆ...

ಬೆಂಗಳೂರು: ಓಲಾ ಹಾಗೂ ಉಬರ್ ಕಂಪನಿಗಳಿಗೆ ಪರ್ಯಾಯವಾಗಿ ಚಾಲಕರು ಹಾಗೂ ಮಾಲೀಕರು ಹುಟ್ಟುಹಾಕಿರುವ ನೂತನ ಆ್ಯಪ್ 'ನಮ್ಮ ಟೈಗರ್' ಬುಧವಾರ ಲೋಕಾರ್ಪಣೆಗೊಂಡಿದೆ.
ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು 'ನಮ್ಮ ಟೈಗರ್'ಗೆ ಹಸಿರು ನಿಶಾನೆ ತೋರಿದರು. ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ನೂತನ ಸಂಸ್ಥೆಯನ್ನು ಆರಂಭಿಸಲಾಗಿದೆ. 
ಹುಲಿ ಟೆಕ್ನಾಲಜಿಸ್ ಕಂಪನಿ ಹೆಸರಿನಲ್ಲಿ ಕ್ಯಾಬ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಓಲಾ ಹಾಗೂ ಉಬರ್ ಕಂಪನಿಯ ಕಿರುಕುಳದಿಂದ ಬೇಸತ್ತಿದ್ದ ಚಾಲಕರು ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರದ ಮೊರೆ ಹೋಗಿದ್ದರು. ಆದರೆ, ಅದರಿಂದ ಪ್ರಯೋಜನವಾಗದಿದ್ದಾಗ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರ ಬಳಿ ಹೋಗಿ ಸಮಸ್ಯೆ ಹೇಳಿಕೊಂಡಿದ್ದರು. ಈ ವೇಳೆ ಚಾಲಕರು ಹಾಗೂ ಮಾಲೀಕರು ಸೇರಿ ಹೊಸ ಕ್ಯಾಬ್ ಸೇವೆ ಆರಂಭಿಸುವಂತೆ ಸಲಹೆ ನೀಡಿದ್ದರು. 
ಇದರಂತೆ ಕಳೆದ 6 ತಿಂಗಳಿಂದ ಸಿದ್ಧತಾ ಕಾರ್ಯ ಆರಂಭಿಸಿದ್ದ, ಚಾಲಕರು ಹಾಗೂ ಮಾಲೀಕರು ಕೊನೆಗೂ ನಮ್ಮ ಟೈಗರ್'ನ್ನು ನಗರ ರಸ್ತೆಗೆ ಬಿಟ್ಟಿದ್ದಾರೆ. ನಮ್ಮ ಟೈಗರ್ ಕ್ಯಾಬ್ ಸೇವೆಗಾಗಿ ಸುಮಾರು 10ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ ಕಲ್ಪಿಸುವ ಉದ್ದೇಶದಿಂದ ಸೇವೆಯನ್ನು ಆರಂಭಿಸಲಾಗಿದೆ. 
ಕ್ಯಾಬ್ ಚಾಲಕ ರಾಜು ಎಸ್. ಮಾತನಾಡಿ, ಹಲವು ತಿಂಗಳಿಂದಲೂ ನಮ್ಮ ಟೈಗರ್ ಆರಂಭಗೊಳ್ಳುತ್ತದೆ ಎಂದು ಹೇಳಲಾಗುತ್ತಿತ್ತು. ಈ ಸೇವೆ ಆರಂಭವಾಗುತ್ತದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಅನುಮಾನಗಳಿತ್ತು. ಕೊನೆಗೂ ನಮ್ಮ ಟೈಗರ್ ಆರಂಭಗೊಂಡಿದೆ. ಪ್ರಸ್ತುತ ನಮಗೆ ದೊರೆಯುತ್ತಿರುವ ಅನುಕೂಲಕ್ಕಿಂತಲೂ ನಮಮ ಟೈಗರ್ ನಲ್ಲು ಉತ್ತಮ ಲಾಭವಿದೆ. ಶುಲ್ಕವನ್ನು ನಿಗದಿ ಮಾಡಿರುವುದು ಉತ್ತಮವಾಗಿದೆ ಎಂದು ಹೇಳಿದ್ದಾರೆ. 
ನಮ್ಮ ಟೈಗರ್'ನಲ್ಲಿ ಸದ್ಯಕ್ಕೆ 2 ಬಗೆಯ ದರದ ಕ್ಯಾಬ್ ಗಳನನು ಪರಿಚಯಿಸಲಾಗಿದೆ. ಮಿನಿ ಕ್ಯಾಬ್'ಗೆ ಪ್ರತಿ ಕಿ.ಮೀಗೆ ರೂ.12.50 ಸೆಡಾನ್ ನಲ್ಲಿ ಪ್ರತಿ ಕಿ.ಮೀ. ರೂ. 14.50 ಇದೆ. ಮೊದಲ  4 ಕಿ.ಮೀಗೆ ಕ್ರಮವಾಗಿ 69.79 , ಮುಂದೆ ಎಸ್'ಯುವಿ ಪರಿಚಯಿಸಲಾಗುತ್ತಿದ್ದು, ರೂ.18.50 ಮತ್ತು 4 ಕಿಮೀಗೆ ರೂ.9 ದರ ನಿಗದಿ ಮಾಡಲು ಉದ್ದೇಶಿಸಲಾಗಿದೆ ಎಂದು ಚಾಲಕರ ಸಂಘ ಅಧ್ಯಕ್ಷ ತನ್ವೀರ್ ಪಾಷಾ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT