ಓಲಾ, ಉಬರ್'ಗೆ ಸೆಡ್ಡು: ನಗರದ ರಸ್ತೆಗಿಳಿದ 'ನಮ್ಮ ಟೈಗರ್' 
ರಾಜ್ಯ

'ನಮ್ಮ ಟೈಗರ್'ಗೆ ದೇವೇಗೌಡ ಚಾಲನೆ: 5 ಸಾವಿರ ಕ್ಯಾಬ್ ಗಳ ಸೇವೆ ಆರಂಭ

ಓಲಾ ಹಾಗೂ ಉಬರ್ ಕಂಪನಿಗಳಿಗೆ ಪರ್ಯಾಯವಾಗಿ ಚಾಲಕರು ಹಾಗೂ ಮಾಲೀಕರು ಹುಟ್ಟುಹಾಕಿರುವ ನೂತನ ಆ್ಯಪ್ 'ನಮ್ಮ ಟೈಗರ್' ಬುಧವಾರ ಲೋಕಾರ್ಪಣೆಗೊಂಡಿದೆ...

ಬೆಂಗಳೂರು: ಓಲಾ ಹಾಗೂ ಉಬರ್ ಕಂಪನಿಗಳಿಗೆ ಪರ್ಯಾಯವಾಗಿ ಚಾಲಕರು ಹಾಗೂ ಮಾಲೀಕರು ಹುಟ್ಟುಹಾಕಿರುವ ನೂತನ ಆ್ಯಪ್ 'ನಮ್ಮ ಟೈಗರ್' ಬುಧವಾರ ಲೋಕಾರ್ಪಣೆಗೊಂಡಿದೆ.
ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು 'ನಮ್ಮ ಟೈಗರ್'ಗೆ ಹಸಿರು ನಿಶಾನೆ ತೋರಿದರು. ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ನೂತನ ಸಂಸ್ಥೆಯನ್ನು ಆರಂಭಿಸಲಾಗಿದೆ. 
ಹುಲಿ ಟೆಕ್ನಾಲಜಿಸ್ ಕಂಪನಿ ಹೆಸರಿನಲ್ಲಿ ಕ್ಯಾಬ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಓಲಾ ಹಾಗೂ ಉಬರ್ ಕಂಪನಿಯ ಕಿರುಕುಳದಿಂದ ಬೇಸತ್ತಿದ್ದ ಚಾಲಕರು ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರದ ಮೊರೆ ಹೋಗಿದ್ದರು. ಆದರೆ, ಅದರಿಂದ ಪ್ರಯೋಜನವಾಗದಿದ್ದಾಗ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರ ಬಳಿ ಹೋಗಿ ಸಮಸ್ಯೆ ಹೇಳಿಕೊಂಡಿದ್ದರು. ಈ ವೇಳೆ ಚಾಲಕರು ಹಾಗೂ ಮಾಲೀಕರು ಸೇರಿ ಹೊಸ ಕ್ಯಾಬ್ ಸೇವೆ ಆರಂಭಿಸುವಂತೆ ಸಲಹೆ ನೀಡಿದ್ದರು. 
ಇದರಂತೆ ಕಳೆದ 6 ತಿಂಗಳಿಂದ ಸಿದ್ಧತಾ ಕಾರ್ಯ ಆರಂಭಿಸಿದ್ದ, ಚಾಲಕರು ಹಾಗೂ ಮಾಲೀಕರು ಕೊನೆಗೂ ನಮ್ಮ ಟೈಗರ್'ನ್ನು ನಗರ ರಸ್ತೆಗೆ ಬಿಟ್ಟಿದ್ದಾರೆ. ನಮ್ಮ ಟೈಗರ್ ಕ್ಯಾಬ್ ಸೇವೆಗಾಗಿ ಸುಮಾರು 10ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ ಕಲ್ಪಿಸುವ ಉದ್ದೇಶದಿಂದ ಸೇವೆಯನ್ನು ಆರಂಭಿಸಲಾಗಿದೆ. 
ಕ್ಯಾಬ್ ಚಾಲಕ ರಾಜು ಎಸ್. ಮಾತನಾಡಿ, ಹಲವು ತಿಂಗಳಿಂದಲೂ ನಮ್ಮ ಟೈಗರ್ ಆರಂಭಗೊಳ್ಳುತ್ತದೆ ಎಂದು ಹೇಳಲಾಗುತ್ತಿತ್ತು. ಈ ಸೇವೆ ಆರಂಭವಾಗುತ್ತದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಅನುಮಾನಗಳಿತ್ತು. ಕೊನೆಗೂ ನಮ್ಮ ಟೈಗರ್ ಆರಂಭಗೊಂಡಿದೆ. ಪ್ರಸ್ತುತ ನಮಗೆ ದೊರೆಯುತ್ತಿರುವ ಅನುಕೂಲಕ್ಕಿಂತಲೂ ನಮಮ ಟೈಗರ್ ನಲ್ಲು ಉತ್ತಮ ಲಾಭವಿದೆ. ಶುಲ್ಕವನ್ನು ನಿಗದಿ ಮಾಡಿರುವುದು ಉತ್ತಮವಾಗಿದೆ ಎಂದು ಹೇಳಿದ್ದಾರೆ. 
ನಮ್ಮ ಟೈಗರ್'ನಲ್ಲಿ ಸದ್ಯಕ್ಕೆ 2 ಬಗೆಯ ದರದ ಕ್ಯಾಬ್ ಗಳನನು ಪರಿಚಯಿಸಲಾಗಿದೆ. ಮಿನಿ ಕ್ಯಾಬ್'ಗೆ ಪ್ರತಿ ಕಿ.ಮೀಗೆ ರೂ.12.50 ಸೆಡಾನ್ ನಲ್ಲಿ ಪ್ರತಿ ಕಿ.ಮೀ. ರೂ. 14.50 ಇದೆ. ಮೊದಲ  4 ಕಿ.ಮೀಗೆ ಕ್ರಮವಾಗಿ 69.79 , ಮುಂದೆ ಎಸ್'ಯುವಿ ಪರಿಚಯಿಸಲಾಗುತ್ತಿದ್ದು, ರೂ.18.50 ಮತ್ತು 4 ಕಿಮೀಗೆ ರೂ.9 ದರ ನಿಗದಿ ಮಾಡಲು ಉದ್ದೇಶಿಸಲಾಗಿದೆ ಎಂದು ಚಾಲಕರ ಸಂಘ ಅಧ್ಯಕ್ಷ ತನ್ವೀರ್ ಪಾಷಾ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ