ರಾಜ್ಯ

ಆಸ್ಪತ್ರೆಯಿಂದ ಎಚ್‌ಡಿಕೆ ಡಿಸ್ಚಾರ್ಜ್

Raghavendra Adiga
ಬೆಂಗಳೂರು: ಹೃದಯದ ಶಸ್ತ್ರಚಿಕಿತ್ಸೆಗಾಗಿ ಬೆಂಗ್ಳೂರು ಅಪೋಲೋ ಆಸ್ಪತ್ರೆ ಸೇರಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು ಡಿಸ್ಚಾರ್ಜ್ ಆಗಿದ್ದಾರೆ.
ಸೆ. 23ರಂದು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕುಮಾರಸ್ವಾಮಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 25 ದಿನಗಳ ಕಾಲ ವಿಶ್ರಂತಿಗೆ ಸೂಚಿಸಿರುವ ವೈದ್ಯರು ಕಾಲ ಕಾಲಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುವಂತೆ ಸಲಹೆ ಮಾಡಿದ್ದಾರೆ.
ನನಗೊಂದು ತಿಂಗಳು ವಿಶ್ರಾಂತಿ ಕೊಡಿ
"ನಿಮ್ಮ ಪ್ರೀತಿ, ಅಭಿಮಾನ ನಿಮ್ಮ ಹೃದಯದಲ್ಲಿರಲಿ, ನನ್ನ ಆರೋಗ್ಯ ಹಂತ ಹಂತವಾಗಿ  ಚೇತರಿಕೆ ಕಾಣುತ್ತಿದೆ. ನನಗೆ ಒಂದು ತಿಂಗಳ ಕಾಲ ವಿಶ್ರಾಂತಿ ಕೊಡುವಿರಾ?" ಎಂದು ಮಾಜಿ ಸಿಎಂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
SCROLL FOR NEXT