ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) 
ರಾಜ್ಯ

ಬೆಂಗಳೂರು ಕೆಐಎ ದೇಶದ ಮೊದಲ ಆಧಾರ್ ಸಶಕ್ತ ವಿಮಾನ ನಿಲ್ದಾಣ!

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) 2018 ರ ಅಂತ್ಯದ ವೇಳೆಗೆ ದೇಶದ ಮೊದಲ ಸಕ್ರಿಯ ಆಧಾರ್ ವಿಮಾನ ನಿಲ್ದಾಣ ಎನಿಸಲಿದೆ.

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) 2018 ರ ಅಂತ್ಯದ ವೇಳೆಗೆ ದೇಶದ ಮೊದಲ ಸಕ್ರಿಯ ಆಧಾರ್ ವಿಮಾನ ನಿಲ್ದಾಣ ಎನಿಸಲಿದೆ.
ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಅನ್ನು ಸಂಪೂರ್ಣವಾಗಿ ಆಧಾರ್ ನೊಂದಿಗೆ ಲಿಂಕ್ ಮಾಡಿಸುವುದಲ್ಲದೆ ಬಯೋಮೆಟ್ರಿಕ್ ಬೋರ್ಡಿಂಗ್ ವ್ಯವಸ್ಥೆಯನ್ನು ಮಾಡಲು ಉದ್ದೇಶಿಸಿದೆ.
ಈ ಉಪಕ್ರಮವು ಪ್ರಯಾಣಿಕರ ಪರಿಶೀಲನೆ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡಲು ಸಹಕಾರಿಯಾಗಲಿದೆ, ಪ್ರಸ್ತುತ ಪ್ರಯಾಣಿಕರ ಪರಿಶೀಲನೆ ಪ್ರಕ್ರಿಯೆಯು ಸರಾಸರಿ 25 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಬಿಐಎಎಲ್ ಈಗಿರುವ 25 ನಿಮಿಷಗಳ ಅವಧಿಯನ್ನು 10 ನಿಮಿಷಗಳಿಗೆ ಕಡಿತಗೊಳಿಸಲು ಯೋಜಿಸಿದೆ. ಈ ನೂತನ ಮಾದರಿಯಿಂದ, ಪ್ರತಿ ಚೆಕ್ ಪಾಯಿಂಟ್ ನಲ್ಲಿ 5 ಸೆಕೆಂಡುಗಳಲ್ಲಿ ಓರ್ವ ಪ್ರಯಾಣಿಕರನ್ನು ಪರಿಶೀಲಿಸಬಹುದು.
ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಆಧಾರ್ ನೊಂದಿಗೆ ಸಂಪರ್ಕಿಸಿಅಲು ಬಿಐಎಎಲ್ ಡಿಸೆಂಬರ್ 2018 ನ್ನು ಗಡುವು ಎಂದು ನಿರ್ಧರಿಸಿದೆ
ಮಾದ್ಯಮ ವರದಿಯ ಪ್ರಕಾರ, ಬಿಐಎಎಲ್  ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಹರಿ ಮಾರಾರ್ "ದಿನ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಏರುತ್ತಿದ್ದು ಪ್ರಯಾಣಿಕರ ಅನುಕೂಲಕ್ಕಾಗಿ, ಅವರ ತ್ವರಿತ ಆಗಮನ, ನಿರ್ಗಮನಕ್ಕಾಗಿ ಆಧಾರ್ ಸಂಪರ್ಕ ಯೋಜನೆ ಪ್ರಾರಂಭಿಸಲಾಗುತ್ತಿದೆ."
ಡಿಸೆಂಬರ್ 2018 ರ ಹೊತ್ತಿಗೆ ಪ್ರಯಾಣಿಕರು ಎಲ್ಲಾ ಚೆಕ್ ಪಾಯಿಂಟ್ ಗಳಲ್ಲಿ ವಿಳಂಬವಿಲ್ಲದೆ ಮುಕ್ತ ಪ್ರವೇಶವನ್ನು ಹೊಂದಲಿದ್ದಾರೆಂದು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT