ಕನಕಪುರ ಮುಖ್ಯ ರಸ್ತೆಯಲ್ಲಿರುವ ಗಂಟಕ ದೊಡ್ಡಿ ಸಮೀಪ ಕಗ್ಗಲಿಪುರ ಕೆರೆಯ ನೀರು ತುಂಬಿ ತುಳುಕಿ ರಸ್ತೆಗೆ ಬಂದಿರುವುದು, ನೀರಿನಲ್ಲಿ ಕೊಚ್ಚಿ ಹೋದ ಸಂತೋಷ್
ಬೆಂಗಳೂರು: ನಗರದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ಕನಕಪುರ ಮುಖ್ಯ ರಸ್ತೆಯಲ್ಲಿ ಆಟೋ ಚಾಲಕರೊಬ್ಬರು ಕೊಚ್ಚಿ ಹೋದ ಘಟನೆ ನಡೆದಿದೆ.
ಬನಶಂಕರಿ ನಿವಾಸಿಯಾಗಿರುವ ಆಟೋ ಚಾಲಕ ಸಂತೋಷ್ ಕನಕಪುರ ಮುಖ್ಯ ರಸ್ತೆಯಲ್ಲಿರುವ ಗಂಟಕ ದೊಡ್ಡಿ ಹತ್ತಿರ ಆಟೋ ಓಡಿಸುತ್ತಿದ್ದಾಗ ನೀರಿನಲ್ಲಿ ಆಟೋ ಕೊಚ್ಚಿ ಹೋಗಿದೆ. ಸಂತೋಷ್ ಕೂಡ ಕಾಣೆಯಾಗಿದ್ದಾರೆ. ಸಂತೋಷ್ ಹಾಗೂ ಇತರ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೋಗಿ ವಾಪಸಾಗುತ್ತಿದ್ದರು. ರಸ್ತೆ ಕಡೆ ಧಾರಾಕಾರವಾಗಿ ನೀರು ಸುರಿದಿದ್ದರಿಂದ ತುಂಬಿ ತುಳುಕುತ್ತಿತ್ತು. ಹೆಣ್ಣು ಮಕ್ಕಳಿಗೆ ದೇವಸ್ಥಾನದ ಸಮೀಪ ರಸ್ತೆ ಬದಿ ನಿಲ್ಲುವಂತೆ ತಾನು ಆಟೋವನ್ನು ಯು-ಟರ್ನ್ ತೆಗೆದುಕೊಂಡು ಬರುತ್ತೇನೆಂದು ಹೇಳಿದ್ದರು. ಆದರೆ ರಸ್ತೆಯಲ್ಲಿ ನೀರಿನ ಮಟ್ಟ ಅಧಿಕವಾಗಿ ಆಟೋ ಉರುಳಿ ಬಿತ್ತು.ಸಂತೋಷ್ ನೀರಿನಲ್ಲಿ ಕೊಚ್ಚಿ ಹೋದರು.
ಆಟೋದಲ್ಲಿದ್ದ ಮತ್ತೊಬ್ಬ ವಿಜಯ್ ನೀರಿನಲ್ಲಿ ಈಜಿ ಮರದ ರೆಂಬೆಯೊಂದನ್ನು ಹಿಡಿದು ರಾತ್ರಿಯಿಡೀ ನಿಂತಿದ್ದರು. ರಕ್ಷಣಾ ಪಡೆ ನಸುಕಿನ ಜಾವ ಬಂದು ಅಪಾಯದಿಂದ ಪಾರು ಮಾಡಿತು. ನಿನ್ನೆ ಸಾಯಂಕಾಲದವರೆಗೆ ಸಂತೋಷ್ ಗೆ ಹುಡುಕಾಟ ನಡೆಸಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos