ರಾಜ್ಯ

ಹೊಸದುರ್ಗ: ಕೆರೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು

Raghavendra Adiga
ಹೊಸದುರ್ಗ: ಹೊಸದುರ್ಗ ತಾಲ್ಲೂಕು ಹೆಗ್ಗೆರೆ ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ಸಾವನ್ನಪ್ಪಿದ್ದಾರೆ.
ಮೃತ ಬಾಲಕರನ್ನು ಕಾಂತರಾಜ್, ಮಹಂತೇಶ್ ಮತ್ತು ಕೆಂಪರಾಜು ಎಂದು ಗುರುತಿಸಲಾಗಿದೆ. ಮೂವರೂ ಹೊಸದುರ್ದ ಹೆಗ್ಗೆರೆ ಕೆಂಪಮ್ಮನ ಕೆರೆಯಲ್ಲಿ ಈಜಲು ತೆರಳಿ ದ್ದಾಗ  ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೂವರೂ 14 ವರ್ಷದವರಾಗಿದ್ದು ಹೆಗ್ಗೆರೆ ಗ್ರಾಮ  ಲಕ್ಷ್ಮಿ ರಂಗನಾಥ ಗ್ರಾಮಾಂತರ ಪ್ರೌಢ ಶಾಲೆಯ 9 ನೇ ತರಗತಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ನಿನ್ನೆ ಈಜಲು ತೆರಳಿದ್ದ ಬಾಲಕರು ಸಂಜೆ ಮನೆಗೆ ಹಿಂತಿರುಗಿರಲಿಲ್ಲ. ಬಾಲಕರು ನೀರಿನಲ್ಲಿ ಮುಳುಗಿರುವ ವಿಷಯ ಸಂಜೆ ಹೊತ್ತಿಗೆ ಗ್ರಾಮದ ಜನರಿಗೆ ತಿಳಿದಿದ್ದು ಅವರು ಪೋಲೀಸರಿಗೆ ಮಾಹಿತಿ ನೀದಿದ್ದಾರೆ. ಅಗ್ನಿಶಾಮಕ ದಳ ಮತ್ತು ಪೋಲೀಸರು ಬಾಲಕರಿಗಾಗಿ ಕೆರೆಯಲ್ಲಿ ಶೋಧ ಕಾರ್ಯ ಪ್ರಾರಂಭಿಸಿದರೂ ಕತ್ತಲಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
ಇಂದು ಬೆಳಗ್ಗೆ ಕಾರ್ಯಾಚರಣೆ‌ ಮುಂದುವರಿದಾಗ ಮೂವರು ಬಾಲಕರ ಶವಗಳು ಪತ್ತೆಯಾಗಿವೆ. ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
SCROLL FOR NEXT