ರಾಜ್ಯ

ಅಳಂದ: ಹೂತಿದ್ದ ಶವ ಹೊರಗೆಳೆದು ಚಿನ್ನಾಭರಣ ಕಳವು

Raghavendra Adiga
ಅಳಂದ( ಕಲ್ಬುರ್ಗಿ): ಕಲ್ಬುರ್ಗಿ ಜಿಲ್ಲೆ ಆಳಂದ ತಾಲ್ಲೂಕು ಖಜೂರಿ ಗ್ರಾಮದಲ್ಲಿ ಹೂತ ಶವ ಹೊರ ತೆಗೆದು  ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ.
ಪ್ರೇಮಾಬಾಯಿ ಡಗೆ (75) ಐದು ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮಕ್ಕಳಿರದ ಹಿನ್ನಲೆಯಲ್ಲಿ ಗ್ರಾಮಸ್ಥರೇ ಶವಸಂಸ್ಕಾರ ನಡೆಸಿದ್ದರು. ಮಹಿಳೆಯ ಮೈಮೇಲಿನ ಚಿನ್ನದ ಒಡವೆ ಸಮೇತ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. 
ನಿನ್ನೆ  ರಾತ್ರಿ ಸಮಾಧಿಯಿಂದ ಶವವನ್ನು ಹೊರತೆಗೆದ ಕಳ್ಳರು ಶವದ ಮೈಮೇಲಿನ 50ಗ್ರಾಂ ಗೂ ಅಧಿಕ  ಚಿನ್ನಾಭರಣಗಳನ್ನು ದೋಚಿದ್ದಾರೆ.  ಆಭರಣ ಕದ್ದ ದರೋಡೆಕೋರರು ಶವವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ ಸಮಾಧಿಯಿಂದ ಹೊರಗಿದ್ದ ಶವ ನೋಡಿ ಕುಟುಂಬಿಕರು, ಗ್ರಾಮಸ್ಥರು ಕಂಗಾಲಾಗಿದ್ದು ಪೋಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅಲಂದ ಪೋಲೀಸರು ಪರಿಶೀಲನೆ ನಡೆಸಿದ್ದಾರೆ.
SCROLL FOR NEXT