ಸಂಗ್ರಹ ಚಿತ್ರ 
ರಾಜ್ಯ

ಮೈಸೂರು ಮೃಗಾಲಯಕ್ಕೆ ನುಗ್ಗಿದ್ದ ಚಿರತೆ ಸೆರೆ

ಕರ್ನಾಟಕ ಖ್ಚಾತ ಪ್ರವಾಸಿ ಕೇಂದ್ರ ಮೈಸೂರಿನ ಮೃಗಾಯಲಯಕ್ಕೆ ಚಿರತೆಯೊಂದು ನುಗ್ಗಿ ಪ್ರವಾಸಿಗರ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಆ ಚಿರತೆಯನ್ನು ಮೃಗಾಲಯ ಸಿಬ್ಬಂದಿ ಸೆರೆ ಹಿಡಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಮೈಸೂರು: ಕರ್ನಾಟಕ ಖ್ಚಾತ ಪ್ರವಾಸಿ ಕೇಂದ್ರ ಮೈಸೂರಿನ ಮೃಗಾಯಲಯಕ್ಕೆ ಚಿರತೆಯೊಂದು ನುಗ್ಗಿ ಪ್ರವಾಸಿಗರ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಆ ಚಿರತೆಯನ್ನು ಮೃಗಾಲಯ ಸಿಬ್ಬಂದಿ ಸೆರೆ ಹಿಡಿದ್ದಿದ್ದಾರೆ ಎಂದು  ತಿಳಿದುಬಂದಿದೆ.
ಗುರುವಾರ ಬೆಳಗ್ಗೆ ಹೊತ್ತಿನಲ್ಲಿ ಚಿರತೆ ಚಾಮರಾಜೇಂದ್ರ ಮೃಗಾಲಯದ ಒಳಗೆ ನುಸುಳಿದ್ದು, ಇದೀಗ ಸತತ ಕಾರ್ಯಾಚರಣೆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮೃಗಾಲಯ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ.  ಮೃಗಾಲಯಕ್ಕೆ ಚಿರತೆ ನುಗ್ಗಿದ ವಿಚಾರ ತಿಳಿದ ಕೂಡಲೇ ಮೃಗಾಲಯದ ಆಡಳಿತ ಮಂಡಳಿ ಕೂಡಲೇ ಮೃಗಾಲಯದಿಂದ ಪ್ರವಾಸಿಗರನ್ನು ಹೊರಕ್ಕೆ ಕಳುಹಿಸಿದರು. ಅಲ್ಲದೆ ಮೃಗಾಲಯಕ್ಕೆ ಪ್ರವಾಸಿಗರ ಪ್ರವೇಶವನ್ನು  ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಬಳಿಕ ಕಾರ್ಯಾಚರಣೆ ನಡೆಸಿದ್ದ ಸಿಬ್ಬಂದಿ ಚಿರತೆ ಅವಿತಿರುವ ಪ್ರದೇಶವನ್ನು ಕಂಡು ಹಿಡಿದರು. ಮರವೇರಿ ಕುಳಿತಿದ್ದ ಚಿರತೆಯನ್ನು ಸಿಬ್ಬಂದಿಗಳು ಅರವಳಿಕೆ ನೀಡಿ ಬಳಿಕ ಸೆರೆ ಹಿಡಿದು ಬೋನಿಗೆ ಹಾಕಿದ್ದಾರೆ. 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೃಗಾಲಯದ ಅಧಿಕಾರಿಗಳು ಬಹುಶಃ ಚಾಮುಂಡಿ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶದಿಂದ ಚಿರತೆ ಆಕಸ್ಮಿಕವಾಗಿ ಮೃಗಾಲಯದೊಳಗೆ ಬಂದಿದೆ. ಪ್ರಸ್ತುತ ಚಿರತೆ ಸೆರೆಯಾಗಿದ್ದು, ಪ್ರವಾಸಿಗರು  ಆತಂಕ ಪಡುವ ಅಗತ್ಯವಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ ಸೆರಿ ಹಿಡಿಯಲಾದ ಚಿರತೆಯನ್ನು ಅರಣ್ಯಕ್ಕೆ ವಾಪಸ್ ಬಿಡಬೇಕೇ ಎಂಬ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT