ರಾಜ್ಯ

ಸಿಂಧನೂರು: ಭೀಕರ ಅಪಘಾತಕ್ಕೆ ಐದು ಬಲಿ

Raghavendra Adiga
ಸಿಂಧನೂರು: ಟಂಟಂ ಹಾಗೂ ಮಿನಿ ಐಶರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸೇರಿ,ಒಟ್ಟು ಐದು ಮಂದಿ ಮೃತಪಟ್ಟಿದ್ದಾರೆ.
ರಾಯಚೂರು ಜಿಲ್ಲೆ ಸಿಂಧನೂರಿನ ಏಳುರಾಗಿ ಕ್ಯಾಂಪ್ ಬಳಿ ಈ ದುರಂತ ಸಂಭವಿಸಿದೆ.
ಮೃತರನ್ನು ಈರಯ್ಯ ಸ್ವಾಮಿ (50) , ಚಾಲಕ ಶಾಮಿದ್ (35), ಸಬ್ಜಲಿ ಸಾಬ್ (40), ಖಾಜಮ್ಮ( 65), ಲಾಲ್ ಬೀ ಸಬ್ಜಲಿ ಸಾಬ್ (12) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಬೂತಲದಿನ್ನಿ ಗ್ರಾಮದವರಾಗಿದ್ದು ಸಿಂಧನೂರಿನಲ್ಲಿ ಸಂತೆ ಮುಗಿಸಿ ವಾಪಸ್ ಗ್ರಾಮಕ್ಕೆ ತೆರಳು ವೇಳೆ ಅಪಘಾತ ಸಂಬವಿಸಿದೆ.ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡೀ ಪರಿಶೀಲಿಸಿದ್ದಾರೆ
SCROLL FOR NEXT