ಸಾಂದರ್ಭಿಕ ಚಿತ್ರ 
ರಾಜ್ಯ

ಕಲಬುರ್ಗಿ: ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನ, ದರೋಡೆಕೋರರ ಮೇಲೆ ಪೋಲೀಸ್ ಗುಂಡಿನ ದಾಳಿ

ಬಂಧಿಸಲು ತೆರಳಿದ್ದ ಪೋಲೀಸರಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ ಇಬ್ಬರು ದರೋಡೆಕೋರರ ಮೇಲೆ ಪೋಲೀಸರು ಗುಂಡು ಹಾರಿಸಿದ್ದಾರೆ.

ಕಲಬುರ್ಗಿ: ಬಂಧಿಸಲು ತೆರಳಿದ್ದ ಪೋಲೀಸರಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ ಇಬ್ಬರು ದರೋಡೆಕೋರರ ಮೇಲೆ ಪೋಲೀಸರು ಗುಂಡು ಹಾರಿಸಿದ್ದಾರೆ. 
ಗುರುವಾರ ಮುಂಜಾನೆ ಕಲಬುರ್ಗಿ ಹೊರವಲಯದಲ್ಲಿ ದರೋಡೆಕೋರರ ಮೇಲೆ ಪೋಲೀಸರು ಗುಂಡು ಹಾರಿಸಿದ್ದಾರೆ ಎಂದು ಕಲಬುರ್ಗಿ ಎಸ್ಪಿ ಶಶಿಕುಮಾರ್ ಹೇಳಿದರು.
ಪೊಲೀಸ್ ಉಪ-ತನಿಖಾಧಿಕಾರಿಗಳಾದ ಪರುಶುರಾಮ ಮತ್ತು ವಹೀದ್ ಕೋತ್ವಾಲ್, ಇತರ ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡ ಪೊಲೀಸ್ ತಂಡವು ದರೋಡೆಕೋರರನ್ನು ಬಂಧಿಸಲು ಕಲಬುರ್ಗಿ ಹೊರವಲಯದ ಆಶ್ರಯ ಕಾಲೊನಿಗೆ ತೆರಳಿತ್ತು.
ಆ ವೇಳೆ ಶೇಖರ್ ಹಾಗೂ ಅಜೀಮ್ ಎನ್ನುವ ದರೋಡೆಕೋರರು ಪೋಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನ  ನಡೆಸಿದ್ದಾರೆ. ಪಿಎಸ್ಐ ಪರಶುರಾಮ್ ಮತ್ತು ವಹೀದ್ ಕೋತ್ವಾಲ್ ದರೋಡೆಕೋರರ ಮೇಲೆ ಗುಂಡು ಹಾರಿಸುತ್ತಾರೆ. ಆಗ  ಶೇಖರ್ ಮತ್ತು ಅಜೀಮ್ ಅವರ ಕಾಲುಗಳಿಗೆ ಗುಂಡು ತಗುಲಿ ಗಾಯವಾಗುತ್ತದೆ. ಹಾಗೆ ಗಾಯಗೊಂಡ ದರೋಡೆಕೋರರನ್ನು ಪೋಲೀಸರು ಬಂಧಿಸಿ ಜಿಲ್ಲಾ ಶ್ಪತ್ರೆಗೆ ಚಿಕಿಯ್ಸೆಗಾಗಿ ದಾಖಲಿಸಿಇದ್ದಾರೆ.
ಆದರೆ ಇನ್ನೂ ಇಬ್ಬರು ದರೋಡೆಕೋರರು ತಪ್ಪಿಸಿಕೊಂಡಿದ್ದಾರೆ ಎಂದು ಎಸ್ಪಿ  ತಿಳಿಸಿದರು. 
ಬಂಧಿತ ದರೋಡೆಕೋರರಿಬ್ಬರೂ ಅಳಂದ ಚೆಕ್ ಪೋಸ್ಟ್ ನಿವಾಸಿಗಳಾಗಿದ್ದಾರೆ. ಅವರು ರೌಡಿ ಶೀಟರ್ ಮಾರ್ಕೆಟ್ ಸತೀಶ್ ಸಹಚರರು ಎಂದು ಪೋಲೀಸರು ಹೇಳಿದ್ದಾರೆ. ಮಾರ್ಕೆಟ್ ಸತೀಶ್ ಇದಾಗಲೇ ಕಂಬಿ ಹಿಂದೆ ಬಂಧಿಯಾಗಿದ್ದಾನೆ.
ಇದೇ ವೇಳೆ ದಾಳಿಯಲ್ಲಿ ಪೋಲೀಸ್ ಪೇದೆಗಳಾದ ಭೀಮಾ ನಾಯ್ಕ್ ಮತ್ತು ಬಂಡೇನಾವಾಸ್ ಎನ್ನುವವರಿಗೆ ಎದೆ ಭಾಗದಲ್ಲಿ ಗಾಯಗಳಾಗಿದೆ.ಅವರನ್ನು ಬಸವೇಶ್ವರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 
ಕಲಬುರ್ಗಿ ಎಸ್ಪಿ ಶಶಿಕುಮಾರ್, ಹೆಚ್ಚುವರಿ ಎಸ್ಪಿ ಜಯಪ್ರಕಾಶ್ ಮತ್ತು ಸಹಾಯಕ ಎಸ್ಪಿ ಲೋಕೇಶ್ ಅವರುಗಳು ಆಸ್ಪತ್ರೆಗೆ ತೆರಳಿ ಪೋಲೀಸ್ ಪೇದೆಗಳ ಆರೋಗ್ಯ ವಿಚಾರಿಸಿದ್ದಾರೆ.
ಘಟನೆ ಸಂಬಂಧ ಕಲಬುರ್ಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel