ಯು. ಟಿ. ಖಾದರ್ 
ರಾಜ್ಯ

60 ಸಾವಿರ ಮನೆಗಳಲ್ಲಿ 22 ಸಾವಿರ ಮನೆಗಳು ಉತ್ತರ ಕರ್ನಾಟಕಕ್ಕೆ ಮೀಸಲು- ಯು. ಟಿ. ಖಾದರ್

60 ಸಾವಿರ ಮನೆಗಳ ಪೈಕಿ 22 ಸಾವಿರ ಮನೆಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಮೀಸಲಿರಿಸಲಾಗುವುದು ಎಂದು ವಸತಿ ಸಚಿವ ಯು. ಟಿ . ಖಾದರ್ ತಿಳಿಸಿದ್ದಾರೆ.

ಬೆಂಗಳೂರು: ಮುಂದಿನ ವರ್ಷದೊಳಗೆ  ಪ್ರಧಾನಮಂತ್ರಿ ಅವಾಸ್ ಯೋಜನೆಯನ್ನು ಮುಖ್ಯಮಂತ್ರಿ ವಸತಿ ಯೋಜನೆ ಎಂದು ಮರುನಾಮಕರಣಗೊಳಿಸಿ  ನಗರ ಪ್ರದೇಶದ ಬಡವರಿಗಾಗಿ 60 ಸಾವಿರ ಮನೆಗಳನ್ನು ನಿರ್ಮಿಸಲು  ಸಿದ್ದತೆ ನಡೆಸಲಾಗಿದೆ.

ಜೆಡಿಎಸ್ -ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ವಸತಿ ಯೋಜನೆ ಜಾರಿಗೊಳಿಸಲಾಗುತ್ತಿದ್ದು. 60 ಸಾವಿರ ಮನೆಗಳ   ಪೈಕಿ 22 ಸಾವಿರ ಮನೆಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಮೀಸಲಿರಿಸಲಾಗುವುದು ಎಂದು ವಸತಿ ಸಚಿವ ಯು. ಟಿ . ಖಾದರ್ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಜಾರಿಗೊಳಿಸಲಾಗಿದ್ದ ಅನಿಲ ಭಾಗ್ಯ ಯೋಜನೆಯನ್ನು ಉಜ್ವಲಾ ಯೋಜನೆ ಎಂದು  ಕೇಂದ್ರದ ಬಿಜೆಪಿ ಸರ್ಕಾರ ಹೆಸರು ಬದಲಾಯಿಸಿದೆ ಎಂದು ಹೇಳಿದ ಅವರು, ಮನೆಗಳ ನಿರ್ಮಾಣಕ್ಕೆ ರಾಜ್ಯಸರ್ಕಾರ ಹೆಚ್ಚಿನ  ಅನುದಾನ ನೀಡುತ್ತಿದ್ದು, ಮುಖ್ಯಮಂತ್ರಿಗಳ ವಸತಿ ಯೋಜನೆ ಎಂದು ಏಕೆ ಮರುನಾಮಕರಣ ಮಾಡಬಾರದು ಎಂದು ಖಾದರ್ ಪ್ರಶ್ನಿಸಿದ್ದಾರೆ.

 ರಾಜೀವ್ ಗಾಂಧಿ ಅವಾಸ್  ಯೋಜನೆಯನ್ನು ಪ್ರಧಾನಮಂತ್ರಿ ಅವಾಸ್ ಯೋಜನೆ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳ ವಸತಿ ಯೋಜನೆಯಡಿ ನಗರ ಪ್ರದೇಶದ ಬಡವರ ವಸತಿ ನಿರ್ಮಾಣಕ್ಕಾಗಿ ಕೇಂದ್ರ  ಹಾಗೂ ರಾಜ್ಯಸರ್ಕಾರ ಶೇ, 30 ರಷ್ಟು ಅನುದಾನ ನೀಡಲಿವೆ. ಶೇ.10 ರಷ್ಟನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ. ಉಳಿದ ಶೇ.30 ರಷ್ಟನ್ನು  ಬ್ಯಾಂಕುಗಳು ಸಾಲ ನೀಡಲಿವೆ ಎಂದು ಖಾದರ್ ತಿಳಿಸಿದರು.

ಈ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅರ್ಜಿದಾರರಿಗೆ ಕೇಂದ್ರಸರ್ಕಾರ 1.5 ಲಕ್ಷ ನೆರವಿನ ಹಣ ನೀಡಿದ್ದರೆ, ರಾಜ್ಯಸರ್ಕಾರ 2 ಲಕ್ಷ ನೀಡಲಿದೆ. ಸಾಮಾನ್ಯ ವರ್ಗದವರಿಗೆ  ಕೇಂದ್ರಸರ್ಕಾರ 1.2 ಲಕ್ಷ ನೀಡಿದ್ದರೆ  ರಾಜ್ಯಸರ್ಕಾರ 1.5 ಲಕ್ಷ ನೀಡಲಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT