ಕಾಡುವ ಕಿರಂ: ಕಾವ್ಯದ ಕುರಿತೇ ಕೊನೆಯುಸಿರಾಡಿ ಲೀನರಾದ ಕಾವ್ಯಾತ್ಮರು ಕೀರಂ.. 
ರಾಜ್ಯ

ಕಾಡುವ ಕಿರಂ: ಕಾವ್ಯದ ಕುರಿತೇ ಕೊನೆಯುಸಿರಾಡಿ ಲೀನರಾದ ಕಾವ್ಯಾತ್ಮರು ಕೀರಂ..

ಹಿರಿಯ ವಿಮರ್ಶಕ, ಚಿಂತಕ ಕಿರಂ ಅವರ ಸ್ಮರಣೆಯ ಅಂಗವಾಗಿ ಆ.07 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಹೋರಾತ್ರಿ ವಿವಿಧ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಆ.08 ರ ಬೆಳಿಗ್ಗೆ 6 ಗಂಟೆವರೆಗೆ ...

ಹಿರಿಯ ವಿಮರ್ಶಕ, ಚಿಂತಕ ಕಿರಂ ಅವರ ಸ್ಮರಣೆಯ ಅಂಗವಾಗಿ ಆ.07 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಹೋರಾತ್ರಿ ವಿವಿಧ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಆ.08 ರ ಬೆಳಿಗ್ಗೆ 6 ಗಂಟೆವರೆಗೆ ನಡೆಯಲಿದೆ. 
ಆ.07 ರಂದು ಸಂಜೆ 6 ರಿಂದ ಕಾಡುವ ಕಿರಂ ಕಾರ್ಯಕ್ರಮ ಆಯೋಜನೆಗೊಂಡಿದ್ದು ಕಿರಂ ಪುರಸ್ಕಾರ, ಗಾಯನ, ಪುಸ್ತಕ ಬಿಡುಗಡೆ, ಕಾವ್ಯವಾಚನ ಕಾರ್ಯಕ್ರಮಗಳು ನಡೆಯಲಿವೆ. ಅಹೋರಾತ್ರಿ ನಡೆಯುವ ಈ ಅಪರೂಪದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾಹಿತ್ಯಾಸಕ್ತತು, ಕಾವ್ಯ ವಾಚಕರು ಆಗಮಿಸಲಿದ್ದಾರೆ. ಕನ್ನಡ ಸಾರಸ್ವತ ಲೋಕದ ಹಿರಿಯ ವಿಮರ್ಶಕ, ಚಿಂತಕ ಕಿರಂ ಎಂದೇ ಖ್ಯಾತರಾಗಿದ್ದ ಪ್ರೊ.ಕಿತ್ತಾನೆ ರಂಗಣ್ಣ ನಾಗರಾಜ್ ಅವರ 8 ನೇ ಪುಣ್ಯಸ್ಮರಣೆಯ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
ಕಾವ್ಯದ ಕುರಿತೇ  ಕೊನೆಯುಸಿರಾಡಿ ಲೀನರಾದ ಕಾವ್ಯಾತ್ಮರು ಕೀರಂ...
ನನ್ನನ್ನು ಕೀರಂ ಕಾಡುತ್ತಿಲ್ಲ. ತಾನು ಕೊಟ್ಟದ್ದರ ಸ್ಮರಣೆಯ ರೂಪದಲ್ಲಿ ಋಣ ತೀರಿಸಿ ಅಂತ ಪೀಡಿಸುತ್ತಲೂ ಇಲ್ಲ. 
*
ಕೀರಂ ಕಾವ್ಯವನ್ನು, ಒಟ್ಟು ಸಾಹಿತ್ಯವನ್ನು ಪ್ರೀತಿಸಿದ ರೀತಿಯ ಅರಿವೇ ಒಂದು ಬೆಳಕು.  
*
ಸನ್ಮಾನ, ಪ್ರಶಸ್ತಿಪದಗಳ 
ಸೆಳವಿಗೆ ಸಿಕ್ಕಲಿಲ್ಲ. 
ಕೇಳುವ ಕಿವಿಗಳು, ಸ್ಪಂದಿಸುವ ಅಲೌಕಿಕ ಲೋಲುಪ 
ಸಹ ಹೃದಯಗಳು ಸಿಕ್ಕಷ್ಟೂ ಸಂತಸ ಉಕ್ಕಿಹರಿಯುತ್ತಿದ್ದ ಉಪನ್ಯಾಸೋತ್ಸಾಹ
ಕೀರಂ-ದು.
*
ಕೀರಂ ನೆನಪನ್ನು
ಅವರ ಕಾವ್ಯ ಪ್ರೇಮದ ಉತ್ಕಟತೆಯನ್ನು ಆವಾಹಿನಿಸಿಕೊಂಡು ಆ ಅನುಭವದಲ್ಲಿ 
ಪರವಶವಾಗುವ ದಿವ್ಯ ಅನುಭಾವವಾಗಿ ಮಾತ್ರ 
ಕೀರಂ ನೆನಪು ನನ್ನದು.
*
ಕೀರಂ ಅವರು ಸಿಜಿಕೆ ಕೈಗೆ ಕೊಟ್ಟ ಕಾಲಜ್ಞಾನಿ ಕನಕ ಆ ಕಾಲಕ್ಕೆ
ಬೆಳಕಿನ ಕಿಂಡಿ.
*
ನ್ಯಾಶನಲ್ ಕಾಲೇಜಿಗೆ ವಿದ್ಯಾರ್ಥಿಯಾವುದೇ ವಿಷಯ ಕಲಿಯಲು ಸೇರಿರಲಿ, ಅಲ್ಲಿ ಪಠ್ಯಕ್ಕೆ ಮೀರಿದ ಕನ್ನಡ ಕಾವ್ಯ  ಪರಿಚಯ, ಸಂಸ್ಕಾರ ಕೀರಂ ರಿಂದ  ದೊರಕಿತೆಂದು ನೆನೆಯುವವರು ಈಗ ಯಾವಾವ ದೇಶದಲ್ಲೋ ಇದ್ದಾರೆ.
*
ಕನ್ನಡ ಸಾಹಿತ್ಯವನ್ನುಉನ್ನತ ಅಧ್ಯಯನದ ಮಟ್ಟದಲ್ಲಿ ಬೋಧಿಸಲು,ವಿಶ್ವ
ವಿದ್ಯಾಲಯದತ್ತ ನಡೆದದ್ದೇ ಕಿರಂ ಅವರ ಹೆಬ್ಬಯಕೆಯ ಸಾಧನೆ.
*
ಕೀರಂ ಕಾಡುವುದಿಲ್ಲ, 
ಮನ್ನಣೆಯನ್ನೇನೂ ಬಯಸಲಿಲ್ಲ, ಬೇಡಲಿಲ್ಲ.
ಕಾವ್ಯಉದ್ಯಾನ ಲೀಲರಾಗಿ
ಕಾವ್ಯದ ಕುರಿತೇ  ಕೊನೆಯುಸಿರಾಡಿ ಲೀನರಾದ
ಕಾವ್ಯಾತ್ಮರು ಕೀರಂ..
-ಎಂ.ಜಯರಾಮ ಅಡಿಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಪಕ್ಷಗಳ ಗದ್ದಲದ ನಡುವೆ ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಡೆ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ!

ಸಂಸತ್ತಿನಲ್ಲಿ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಚ್ ಕುರಿತು ಮಾತನಾಡಲು ಬಿಜೆಪಿ ಅವಕಾಶ ನೀಡಲಿಲ್ಲ: ಮೈಕ್ ಸ್ವಿಚ್ ಆಫ್ ಆಗಿತ್ತು! ರಾಹುಲ್ ಆರೋಪ

ಕಂಟೆಂಟ್ ಕ್ರಿಯೇಟರ್ ಆಗಲು ₹35 ಲಕ್ಷ ಸಂಬಳದ ಉದ್ಯೋಗ ತೊರೆದ ಟೆಕ್ಕಿ ದಂಪತಿ; ಒಂದೇ ವರ್ಷದಲ್ಲಿ ₹1 ಕೋಟಿಗೂ ಹೆಚ್ಚು ಆದಾಯ!

E20 ಇಂಧನದಿಂದ ವಾಹನಗಳ ಭಾಗಗಳಿಗೆ ಹಾನಿ?: ರಾಜ್ಯಸಭೆಯಲ್ಲಿ ಗಡ್ಕರಿ ಕೊಟ್ರು ಬಿಗ್ ಅಪ್ಡೇಟ್!

ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಬೆಳೆ ಹಾನಿ ಪರಿಶೀಲನೆ: ರೈತರ ಜಮೀನುಗಳಲ್ಲಿ ಸರ್ವೆಗೆ ಇಲ್ಲಿಯವರೆಗೂ ಯಾವುದೇ ಅಧಿಕಾರಿ ಬಂದಿಲ್ಲ- ಆರ್. ಅಶೋಕ್ ಕಿಡಿ!