ಹಿರಿಯ ವಿಮರ್ಶಕ, ಚಿಂತಕ ಕಿರಂ ಅವರ ಸ್ಮರಣೆಯ ಅಂಗವಾಗಿ ಆ.07 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಹೋರಾತ್ರಿ ವಿವಿಧ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಆ.08 ರ ಬೆಳಿಗ್ಗೆ 6 ಗಂಟೆವರೆಗೆ ನಡೆಯಲಿದೆ.
ಆ.07 ರಂದು ಸಂಜೆ 6 ರಿಂದ ಕಾಡುವ ಕಿರಂ ಕಾರ್ಯಕ್ರಮ ಆಯೋಜನೆಗೊಂಡಿದ್ದು ಕಿರಂ ಪುರಸ್ಕಾರ, ಗಾಯನ, ಪುಸ್ತಕ ಬಿಡುಗಡೆ, ಕಾವ್ಯವಾಚನ ಕಾರ್ಯಕ್ರಮಗಳು ನಡೆಯಲಿವೆ. ಅಹೋರಾತ್ರಿ ನಡೆಯುವ ಈ ಅಪರೂಪದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾಹಿತ್ಯಾಸಕ್ತತು, ಕಾವ್ಯ ವಾಚಕರು ಆಗಮಿಸಲಿದ್ದಾರೆ. ಕನ್ನಡ ಸಾರಸ್ವತ ಲೋಕದ ಹಿರಿಯ ವಿಮರ್ಶಕ, ಚಿಂತಕ ಕಿರಂ ಎಂದೇ ಖ್ಯಾತರಾಗಿದ್ದ ಪ್ರೊ.ಕಿತ್ತಾನೆ ರಂಗಣ್ಣ ನಾಗರಾಜ್ ಅವರ 8 ನೇ ಪುಣ್ಯಸ್ಮರಣೆಯ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾವ್ಯದ ಕುರಿತೇ ಕೊನೆಯುಸಿರಾಡಿ ಲೀನರಾದ ಕಾವ್ಯಾತ್ಮರು ಕೀರಂ...
ನನ್ನನ್ನು ಕೀರಂ ಕಾಡುತ್ತಿಲ್ಲ. ತಾನು ಕೊಟ್ಟದ್ದರ ಸ್ಮರಣೆಯ ರೂಪದಲ್ಲಿ ಋಣ ತೀರಿಸಿ ಅಂತ ಪೀಡಿಸುತ್ತಲೂ ಇಲ್ಲ.
ಕೀರಂ ಕಾವ್ಯವನ್ನು, ಒಟ್ಟು ಸಾಹಿತ್ಯವನ್ನು ಪ್ರೀತಿಸಿದ ರೀತಿಯ ಅರಿವೇ ಒಂದು ಬೆಳಕು.
ಕೇಳುವ ಕಿವಿಗಳು, ಸ್ಪಂದಿಸುವ ಅಲೌಕಿಕ ಲೋಲುಪ
ಸಹ ಹೃದಯಗಳು ಸಿಕ್ಕಷ್ಟೂ ಸಂತಸ ಉಕ್ಕಿಹರಿಯುತ್ತಿದ್ದ ಉಪನ್ಯಾಸೋತ್ಸಾಹ
ಅವರ ಕಾವ್ಯ ಪ್ರೇಮದ ಉತ್ಕಟತೆಯನ್ನು ಆವಾಹಿನಿಸಿಕೊಂಡು ಆ ಅನುಭವದಲ್ಲಿ
ಪರವಶವಾಗುವ ದಿವ್ಯ ಅನುಭಾವವಾಗಿ ಮಾತ್ರ
ಕೀರಂ ಅವರು ಸಿಜಿಕೆ ಕೈಗೆ ಕೊಟ್ಟ ಕಾಲಜ್ಞಾನಿ ಕನಕ ಆ ಕಾಲಕ್ಕೆ
ನ್ಯಾಶನಲ್ ಕಾಲೇಜಿಗೆ ವಿದ್ಯಾರ್ಥಿಯಾವುದೇ ವಿಷಯ ಕಲಿಯಲು ಸೇರಿರಲಿ, ಅಲ್ಲಿ ಪಠ್ಯಕ್ಕೆ ಮೀರಿದ ಕನ್ನಡ ಕಾವ್ಯ ಪರಿಚಯ, ಸಂಸ್ಕಾರ ಕೀರಂ ರಿಂದ ದೊರಕಿತೆಂದು ನೆನೆಯುವವರು ಈಗ ಯಾವಾವ ದೇಶದಲ್ಲೋ ಇದ್ದಾರೆ.
ಕನ್ನಡ ಸಾಹಿತ್ಯವನ್ನುಉನ್ನತ ಅಧ್ಯಯನದ ಮಟ್ಟದಲ್ಲಿ ಬೋಧಿಸಲು,ವಿಶ್ವ
ವಿದ್ಯಾಲಯದತ್ತ ನಡೆದದ್ದೇ ಕಿರಂ ಅವರ ಹೆಬ್ಬಯಕೆಯ ಸಾಧನೆ.
ಮನ್ನಣೆಯನ್ನೇನೂ ಬಯಸಲಿಲ್ಲ, ಬೇಡಲಿಲ್ಲ.
ಕಾವ್ಯದ ಕುರಿತೇ ಕೊನೆಯುಸಿರಾಡಿ ಲೀನರಾದ