ಕೆಆರ್​ಎಸ್ ವೀಕ್ಷಿಸುತ್ತಿರುವ ಮಹಾರಾಜ ಯದುವೀರ್ ದಂಪತಿ 
ರಾಜ್ಯ

ಕೆಆರ್‌ಎಸ್‌ ಭರ್ತಿ:ಸುಂದರ ದೃಶ್ಯಗಳ ಕಣ್ತುಂಬಿಕೊಂಡ ಅಂಬರೀಶ್, ಮೈಸೂರು ಮಹಾರಾಜ ಯದುವೀರ್

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ವಿಶ್ವ ವಿಖ್ಯಾತ ಕೃಷ್ಣರಾಜ ಸಾಗರ ( ಕೆಆರ್​ಎಸ್​) ಜಲಾಶಯ ಭರ್ತಿಯಾಗಿದ್ದು ಅಣೆಕಟ್ಟೆಯಿಂದ ನದಿಗೆ ನೀರು ಹೊರಬಿಡುವ ದೃಶ್ಯದ ಸೊಬಗನ್ನು.....

ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ವಿಶ್ವ ವಿಖ್ಯಾತ ಕೃಷ್ಣರಾಜ ಸಾಗರ ( ಕೆಆರ್​ಎಸ್​) ಜಲಾಶಯ ಭರ್ತಿಯಾಗಿದ್ದು ಅಣೆಕಟ್ಟೆಯಿಂದ ನದಿಗೆ ನೀರು ಹೊರಬಿಡುವ ದೃಶ್ಯದ ಸೊಬಗನ್ನು ನೋಡಲು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಮೈಸೂರಿನ ಮಹಾರಾಜ ಯದುವೀರ್ ಆಗಮಿಸಿದ್ದರು.
ಕೆಆರ್​ಎಸ್ ಅಣೆಕಟ್ಟೆ ಭರ್ತಿಯಾಗಿರುವ ಹಾಗು ಅಣೆಕಟ್ಟೆ ಗೇಟ್ ಗಳಿಂದ ನಿರು ಹೊರಬಿಡುತ್ತಿರುವ ದೃಶ್ಯಗಳನ್ನು ಮಾಜಿ ಸಚಿವ ಅಂಬರೀಶ್ ಮನದಣಿಯೆ ನೊಡೊ ಸಂಭ್ರಮಿಸಿದರು. ಅಲ್ಲದೆ ಜಲಾಶಯದ ಸಮೀಪ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಈ ವೇಳೆ ಅಂಬರೀಶ್ ಜತೆಯಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಹ ಹಾಜರಿದ್ದರು.
ನಾಲ್ವಡಿ ಕೃಷ್ಣರಾಜ ಒಡೆಯರ್​ ಕಟ್ಟಿಸಿದ ಕೆಆರ್​ಎಸ್​ ಜಲಾಶಯವನ್ನು ಇಂದಿನ ಮೈಸೂರು ಒಡೆಯರ್ ಯದುವೀರ್ ಪತ್ನಿ ತ್ರಿಷಿಕಾ ಜೊತೆಗೆ ಆಗಮಿಸಿ ವೀಕ್ಷಣೆ ನಡೆಸಿದ್ದರು.ತಮ್ಮ ವಂಶಜರು ಕಟ್ಟಿಸಿದ ಜಲಾಶಯ ಭರ್ತಿಯಾಗಿರುವುದು ನೋಡಬೇಕೆಂದು ರಾಣಿ ತ್ರಿಷಿಕಾ ಸಹ ಆಸೆ ವ್ಯಕ್ತಪಡಿಸಿದ್ದು ಅವರ ಆಸೆ ಈಡೇರಿಸುವ ಸಲುವಾಗಿ ಯದುವೀರ್ ದಂಪತಿ ಸಮೇತ ಕೆಆರ್​ಎಸ್ ಗೆ ಆಗಮಿಸಿದ್ದರು.
ಇದೇ ವೇಳೆ ಯದುವೀರ್ ನದಿಗೆ ಹರಿಯಬಿಡುತ್ತಿರುವ ಹೆಚ್ಚುವರಿ ನೀರಿನಿಂದ ಉಂತಾಗಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದಾರೆ.
ಮಡಿಕೇರಿಯಲ್ಲಿ ಭಾರೀ ಮಳೆಯಾಗಿರುವ ಕಾರಣ ಜಲಾಶಯಕ್ಕೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.ಅಣೆಕಟ್ಟೆಯಿಂದ ಒಂದು ಲಕ್ಷದ 20 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT