ರಾಜ್ಯ

ಭಾರೀ ಮಳೆ: ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ

Nagaraja AB

ಬೆಂಗಳೂರು: ಕೊಡಗು, ದಕ್ಷಿಣ ಕನ್ನಡ, ಹಾಸನ,  ಚಿಕ್ಕಮಗಳೂರು, ಶಿವಮೊಗ್ಗ  ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ .

ಕೊಡಗು ಜಿಲ್ಲೆಯ ಕುಶಾಲನಗರ ರಸ್ತೆಗಳು, ಪ್ರಮುಖ ವೃತ್ತಗಳು, ಮನೆಗಳು  ನೀರಿನಿಂದ ಮುಳುಗಡೆಯಾಗಿದ್ದು, ಜನರು ತೀವ್ರ ರೀತಿಯ ತೊಂದರೆ ಎದುರಿಸುವಂತಾಗಿದೆ.  ಪ್ರವಾಸಿ ಕೇಂದ್ರ ದುಬಾರೆಯೂ ಕೂಡಾ ನೀರಿನಿಂದ ಆವೃತ್ತವಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲೆಯ ನೀರಿನಿಂದ ಆವೃತ್ತಗೊಂಡಿದ್ದ  ಬರಡಿ ಗ್ರಾಮದಲ್ಲಿ ತೆಪ್ಪದಲ್ಲಿ ನಿಂತು ತ್ರಿವರ್ಣ ಧ್ವಜ ಹಾರಿಸಲಾಯಿತು.
SCROLL FOR NEXT