ರಾಜ್ಯ

ಕೊಡಗು ಪ್ರವಾಹದಿಂದ ಬರೋಬ್ಬರೀ 2,500 ಕೋಟಿ ರು ನಷ್ಟ!

Shilpa D
ಮಡಿಕೇರಿ/ಬೆಂಗಳೂರು: ಕೊಡಗಿನಲ್ಲಿ ಸುರಿದ ಮಹಾಮಳೆ, ಪ್ರವಾಹ ಹಾಗೂ ಭೂ ಕುಸಿತದಿಂದ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು, ಸರಿ ಸುಮಾರು 2,500 ಕೋಟಿ ರು ಗಳಷ್ಟು ನಷ್ಟ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. 
ಜಿಲ್ಲೆಯಲ್ಲಿ 51 ನಿರಾಶ್ರಿತರ ಪರಿಹಾರ ಕೇಂದ್ರ ತೆರದಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿಗೆ ವಸತಿ ನೀಡಲಾಗಿದೆ.
ಮಳೆಗೆ ತತ್ತರಿಸಿರುವ ಕೊಡಗನ್ನು ಪುನರ್ ನಿರ್ಮಿಸಲು  ಕೇಂದ್ರಕ್ಕೆ 2,000 ಕೋಟಿ ರು ಪರಿಹಾರ ಹಣ ನೀಡುವಂತೆ ಮನವಿ ಮಾಡುವುದಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಹೇಳಿದ್ದಾರೆ.
ಇಂದು ಕೊಡಗಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿದ್ದು, ಕೊಡಗು ಜಿಲ್ಲಾಡಳಿತದ ಜೊತೆ ಸಭೆ ನಡೆಸಲಿದ್ದಾರೆ. 
SCROLL FOR NEXT