ರಾಜ್ಯ

ಬಳ್ಳಾರಿ: ಮನೆಯ ಮೇಲ್ಛಾವಣಿ ಕುಸಿತ, ತಾಯಿ-ಮಗ ಸಾವು

Raghavendra Adiga
ಬಳ್ಳಾರಿ: ಮನೆಯ ಮೇಲ್ಛಾವಣಿ ಕುಸಿದು ಓರ್ವ ಮಹಿಳೆ ಹಾಗೂ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಬಳ್ಳಾರಿಯ ರೇಡಿಯೊ ಪಾರ್ಕ್ ಪ್ರದೇಶದಲ್ಲಿರುವ ಮನೆಯ ಛಾವಣಿ ಭಾನುವಾರ ಬೆಳಗಿನ ಜಾವ ಕುಸಿದಿದ್ದು ಹೇಮಲತಾ(42), ಮತ್ತು ಆಕೆಯ ಪುತ್ರ ದರ್ಶನ್(14) ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಹೇಮಾ ಅವರ ಇನ್ನೋರ್ವ ಪುತ್ರ ವಿನೋದ್​ (16) ಗಂಭೀರವಾಗಿ ಗಾಯಗೊಂಡಿದ್ದಾರೆ.ಗಾಯಾಳು ವಿನೋದ್ ನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.
ಹಳೆಯ ಜಂತಿಮನೆಯಲ್ಲಿ ವಾಸವಿದ್ದ ಹೇಮಾ  ಜಂತಿ ಸೋರುತ್ತಿದ್ದ ಕಾರಣ ಕೆಲವು ದಿನಗಳ ಹಿಂದೆ ಛಾವಣಿ ಮೇಲೆ ಎರಡು ಲೋಡ್ ಮಣ್ಣು ಸುರಿದು ಸಮತಟ್ಟು ಮಾಡಲಾಗಿತ್ತು. ಆದರೆ ಅತಿಯಾದ ಮಣ್ಣಿನ ಭಾರ ತಾಳಲಾರದೆ ಮನೆ ಕುಸಿದಿದೆ.
ಘಟನಾ ಸ್ಥಳಕ್ಕೆ ಕೌಲ್​ ಬಜಾರ್​ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
SCROLL FOR NEXT