ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ 
ರಾಜ್ಯ

ಕಾಳಿ ಹುಲಿ ಸಂರಕ್ಷಿತ ಅರಣ್ಯದ 300 ಕಾವಲುಗಾರರಿಗೆ ವೇತನ ವಿಳಂಬ!

ಕಾಳಿ ಹುಲಿ ಸಂರಕ್ಷಿತ ಅರಣ್ಯದ ಸುಮಾರು 300 ಕಾವಲುಗಾರರ ವೇತನ ಎರಡು ವರ್ಷಗಳಿಂದ ಅನಿಯಮಿತವಾಗಿದ್ದು, ಮಾಸಿಕ ವೇತನಕ್ಕಾಗಿ ಕಾಯುತ್ತಿದ್ದಾರೆ.

ಬೆಂಗಳೂರು: ಕಾಳಿ ಹುಲಿ ಸಂರಕ್ಷಿತ ಅರಣ್ಯದ  ಸುಮಾರು 300 ಕಾವಲುಗಾರರ ವೇತನ ಎರಡು ವರ್ಷಗಳಿಂದ ಅನಿಯಮಿತವಾಗಿದ್ದು, ಮಾಸಿಕ ವೇತನಕ್ಕಾಗಿ ಕಾಯುತ್ತಿದ್ದಾರೆ.

ಈ ಹಿಂದೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ ಟಿಸಿ) ತನಿಖಾ ವರದಿ ಹಿನ್ನೆಲೆಯಲ್ಲಿ  ಸರಿಕಾಯಾಗಿ ಕೆಲಸ ಮಾಡದ ಹಾಗೂ ಐವರು ಕಾವಲುಗಾರರು ಬೇಟೆಗಾರರ ತಂಡ ಸೇರಿದ ಹಿನ್ನೆಲೆಯಲ್ಲಿ ವೇತನ ಪಾವತಿಯಲ್ಲಿ ವಿಳಂಬ ಮಾಡಲಾಗಿತ್ತು.

ಸಾವಿರಾರು ಎಕರೆ ಅರಣ್ಯ ಪ್ರದೇಶ ಕಾಯುವ ಕಾವಲುಗಾರರು ತಮ್ಮ ಕುಟುಂಬಗಳಿಂದ ಹಲವು ದಿನಗಳವರೆಗೂ ದೂರ ಉಳಿಯುವುದರಿಂದ ಬೇಟೆಗಾರರೊಂದಿಗೆ  ಸಂಪರ್ಕ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ.

ಕಾಳಿ ಹುಲಿ ಸಂರಕ್ಷಿತ ಅರಣ್ಯದ ಕುಲ್ಗಿ, ಅಂಶಿ, ಪಾಂಸೊಲಿ, ಮತ್ತಿತರ ನಾಲ್ಕು ವಲಯಗಳಲ್ಲಿ  ಒಟ್ಟು 300 ಕಾವಲುಗಾರರು ಕೆಲಸ ಮಾಡುತ್ತಾರೆ. 11 ವರ್ಷಗಳಿಂದಲೂ ಇವರು ಕೆಲಸ ಮಾಡುತ್ತಾ ಬಂದಿದ್ದು, ಪ್ರತಿ ತಿಂಗಳು 9, 500 ವೇತನ ನೀಡಲಾಗುತ್ತದೆ. ಆದರೆ, ಎರಡು ತಿಂಗಳಿನಿಂದಲೂ ವೇತನ ಬಂದಿಲ್ಲ. ಪಾವತಿಯು ಪ್ರತಿ ಎರಡು ಮೂರು ತಿಂಗಳ ವಿಳಂಬವಾಗುತ್ತದೆ. ಕಳೆದ ಎರಡು ಮೂರು ವರ್ಷಗಳಿಂದಲೂ ಇದೇ ರೀತಿ ನಡೆದುಕೊಂಡು ಬಂದಿದು, ಈ  ಬಾರಿ  ಅಸಹನೀಯವಾಗಿದೆ ಎಂದು ಅಶ್ವತ್  (ಹೆಸರು ಬದಲಾಯಿಸಲಾಗಿದೆ) ಅಳಲು ತೋಡಿಕೊಂಡಿದ್ದಾರೆ.

ಕಳ್ಳ ಬೇಟೆಗಾರರು  ತಂಡಗಳು 24 ಗಂಟೆಯೂ ಕೆಲಸ ಮಾಡುತ್ತವೆ. ಸರ್ಕಾರ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತದೆ. ಆದರೆ. ನಮ್ಮಂತಹ ಬಡವರಿಗೆ ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲ. ಸಂಬಳ ಇಲ್ಲದೆ ಹೇಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯ ಎಂದು ಮತ್ತೊಬ್ಬರು  ಪ್ರಶ್ನಿಸುತ್ತಾರೆ.

ರಾಜ್ಯ ಸರ್ಕಾರ ಕಾವಲುಗಾರರ ಸಂಬಳವನ್ನು ಬಿಡುಗಡೆ ಮಾಡಿಲ್ಲ. ಕಳೆದ ವರ್ಷ ಹುಲಿ ಸಂರಕ್ಷಿತ ಪ್ರದೇಶ ಪೌಂಢೇಷನ್ ನಿಧಿಯಿಂದ ಭರಿಸಲಾಗಿತ್ತು, ನಂತರ ಸರ್ಕಾರದಿಂದ ಮರುಪಾವತಿ ಮಾಡಲಾಗಿತ್ತು. ಆದರೆ . ಈ ವರ್ಷ ಈ ಹಣವನ್ನು ಕಾವಲುಗಾರರು ವೇತನಕ್ಕೆ ಬಳಸದಂತೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ಹಿರಿಯ ಅರಣ್ಯಾಧಿಕಾರಿಗಳು ಹೇಳುತ್ತಾರೆ.

ಕೇಂದ್ರ ಸರ್ಕಾರದಿಂದ ಕಾಳಿ ಹುಲಿ ಸಂರಕ್ಷಣೆಯ ನಿಧಿಯನ್ನು ಹಂಚಲಾಗುತ್ತದೆ. ರಾಜ್ಯಸರ್ಕಾರ ಕಾವಲುಗಾರರಿಗೆ ವೇತನ ಬಿಡುಗಡೆ ಮಾಡುತ್ತದೆ. ಬಂಡೀಪುರ  ಮತ್ತು ನಾಗರಹೊಳೆಗೆ ಹೋಲಿಸಿದ್ದರೆ ಪ್ರವಾಸೋದ್ಯಮ ಮೂಲಕ ಉತ್ತಮ ನಿಧಿ ಹೊಂದಿದ್ದೇವೆ. 1.5 ರಿಂದ 2 ಕೋಟಿ ರೂಪಾಯಿಯಷ್ಟು ನಿಧಿ ಸಂಗ್ರಹವಿದೆ ಎಂದು  ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT