ರಾಜ್ಯ

ಮೈಸೂರು: ಗ್ರಾಮ ಪಂಚಾಯತ್ ಸದಸ್ಯನ ಕೊಲೆ

Sumana Upadhyaya

ಮೈಸೂರು: ಹುಣಸೂರು ತಾಲ್ಲೂಕಿನ ಗಡ್ಡಿಗೆ ಗ್ರಾಮದಲ್ಲಿ ಕರಿಮುದ್ದನಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ನಾಗರಾಜ್ ಅವರನ್ನು ಅವರ ಅಂಗಡಿಯಲ್ಲಿ ನಿನ್ನೆ ಕೊಲೆ ಮಾಡಲಾಗಿದೆ.

ನಿನ್ನೆ ಬೆಳಗ್ಗೆ 11.30ರ ಸುಮಾರಿಗೆ ನಾಗರಾಜ್ ತಮ್ಮ ಅಂಗಡಿಯಲ್ಲಿದ್ದಾಗ ಇಬ್ಬರು ಪರಿಚಿತ ವ್ಯಕ್ತಿಗಳು ಬಂದರು. ಅವರನ್ನು ಲೋಕೇಶ್ ಮತ್ತು ನಾಗರಾಜ್ ಅವರ ಬಾವ ಕಾರ್ತಿಕ್ ಎಂದು ಗುರುತಿಸಲಾಗಿದೆ. ಅಂಗಡಿಗೆ ಬಂದವರೇ ನಾಗರಾಜ್ ತಲೆಗೆ ಗ್ಯಾಸ್ ಸ್ಟೌವ್ ನಿಂದ ಹೊಡೆದು ಪರಾರಿಯಾದರು.

ನಾಗರಾಜ್ ಗೆ ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧವಿತ್ತು ಎಂದು ಹೇಳಲಾಗಿದ್ದು ಇದುವೇ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬಿಳಿಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

SCROLL FOR NEXT