ಸಂಗ್ರಹ ಚಿತ್ರ 
ರಾಜ್ಯ

ಕೊಡಗು ಕಾಡಲ್ಲಿ ಗುಂಡಿನ ಚಕಮಕಿ: ಬೇಟೆಗಾರ ಸಾವು

ಕಾಡುಪ್ರಾಣಿಗಳ ಬೇಟೆಗೆಂದು ಕೇರಳದಿಂದ ಕೊಡಗು ಜಿಲ್ಲಗ ಬಂದಿದ್ದ ಬೇಟೆಗಾರನೊಬ್ಬ ತಾನೇ ಬೇಟಯಾಗಿ ಹೋದ ಘಟನೆ ಭಾಗಮಂಡಲ ಪಂಚಾಯತಿ ವ್ಯಾಪ್ತಿಯ ಮುಂಡ್ರೋಟ್ ಅರಣ್ಯ ಪ್ರದೇಶದಲ್ಲಿ ಬುಧವಾರ ನಡೆದಿದೆ...

ಮಡಿಕೇರಿ: ಕಾಡುಪ್ರಾಣಿಗಳ ಬೇಟೆಗೆಂದು ಕೇರಳದಿಂದ ಕೊಡಗು ಜಿಲ್ಲಗ ಬಂದಿದ್ದ ಬೇಟೆಗಾರನೊಬ್ಬ ತಾನೇ ಬೇಟಯಾಗಿ ಹೋದ ಘಟನೆ ಭಾಗಮಂಡಲ ಪಂಚಾಯತಿ ವ್ಯಾಪ್ತಿಯ ಮುಂಡ್ರೋಟ್ ಅರಣ್ಯ ಪ್ರದೇಶದಲ್ಲಿ ಬುಧವಾರ ನಡೆದಿದೆ. 
ಕೇರಳ ಮೂಲದ ಎರಡು ಗುಂಪುಗಳು ಬೇಟೆಗೆಂದು ಕೇರಳ-ಕರ್ನಾಟಕ ಗಡಿಭಾಗವಾದ ಮುಂಡ್ರೋಟ್ ಅರಣ್ಯ ಪ್ರದೇಶಕ್ಕೆ ಬಂದಿವೆ. ನಿನ್ನೆ ಮುಂಜಾನೆ 2ರ ವೇಳೆಗ ಗುಂಪುಗಳ ನಡುವೆೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಕೇರಳದ ತಳಿಪರಂಬುವಿನ ಮೀನಂಕೇರಿ ನಿವಾಸಿ ಜಾರ್ಜ್ (50) ಎಂಬುವವರ ಎದೆಗೆ ಗುಂಡು ತಗುಲಿ, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. 
ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದ್ದು, ಎಲ್ಲರೂ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆದರ, ಯಾವ ಕಾರಣಕ್ಕೆ ಜಗಳ ಆರಂಭವಾಯಿತು, ಅವರು ಬೇಟೆಗೆದು ಪದೇ ಪದೇ ಈ ಭಾಗಕ್ಕೆ ಬರುತ್ತಿದ್ದರೇ ಎಂಬ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳ-ಕೊಡಗು ಗಡಿಭಾಗದಲ್ಲಿ ಇಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವ. ಅಪರೂಪಕ್ಕೆ ಅಲ್ಲೊಂದು, ಇಲ್ಲೊಂದು ಘಟನೆಗಳು ಬೆಳಕಿಗೆ ಬರುತ್ತಿವೆ. ಘಟನೆ ಸಂಬಂಧ ಮೃತ ಜಾರ್ಜ್'ನ ಪತನಿ ಭಾಗಮಂಡಲ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT