ಗುಡಗೇರಿ ಪೊಲೀಸ್ ಠಾಣೆ 
ರಾಜ್ಯ

ಭಾರತದ ಟಾಪ್ 10 ಪೊಲೀಸ್ ಠಾಣೆಗಳು: ಧಾರವಾಡ ಗುಡಗೇರಿಗೆ 5ನೇ ಸ್ಥಾನ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣೆ ಭಾರತದ 10 ಉತ್ತಮ ಪೊಲೀಸ್ ಸ್ಟೇಷನ್ ಗಳಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. ..

ಧಾರವಾಡ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣೆ ಭಾರತದ 10 ಉತ್ತಮ ಪೊಲೀಸ್ ಸ್ಟೇಷನ್ ಗಳಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. 
ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಭಾರತದ ಉತ್ತಮವಾಗಿ ಕಾರ್ಯ ನಿರ್ವಹಿಸುವ ಪೊಲೀಸ್ ಠಾಣೆಗಳಲ್ಲಿ ಕರ್ನಾಟಕದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣೆ 5ನೇ ಸ್ಥಾನ ಪಡೆದಿದೆ.
ಇದೇ ಮೊದಲ ಬಾರಿಗೆ ಟಾಪ್ 10 ಪೊಲೀಸ್ ಠಾಣೆಗಳಲ್ಲಿ ಗುಡಗೇರಿ ಠಾಣೆ ಸ್ಥಾನ ಪಡೆದುಕೊಂಡಿದೆ. ಸೆಪ್ಟಂಬರ್ 23 ರಂದು ಮೌಲ್ಯ ಮಾಪನ ತಂಡ ಇಲ್ಲಿಗೆ ಭೇಟಿ ನೀಡಿತ್ತು. ಇಲ್ಲಿನ ಅಪರಾಧ ಪ್ರಕರಣಗಳು ಹಾಗೂ ಸಾರ್ವಜನಿಕರೊಂದಿಗಿನ ಸ್ನೇಹ  ಮೂಲಭೂತ ಸೌಕರ್ಯಗಳು ಸೇರಿದಂತೆ ವಿವಿಧ ಮಾನದಂಡಗಳ ಆಧಾರದ ಮೇಲೆ ಸ್ಥಾನ ನೀಡಲಾಗಿದೆ ಎಂದು ದಾರವಾಡ ಎಸ್ ಪಿ ಸಂಗೀತಾ ಹೇಳಿದ್ದಾರೆ. 
ಸಾರ್ವಜನಿಕರೊಂದಿಗೆ ಪೊಲೀಸರು ಅಹಂಕಾರ ಹಾಗೂ ಒರಟಾಗಿ ವರ್ತಿಸುತ್ತಾರೆ ಎಂಬ ಕೆಟ್ಟ ಇಮೇಜ್ ಮೂಡಿದೆ. ಇದನ್ನು ಹೋಗಲಾಡಿಸಿ ಜನಸ್ನೇಹಿ ಪೊಲೀಸ್ ಠಾಣೆ ಆಗಬೇಕೆಂಬುದು ನನ್ನ ಬಯಕೆ ಎಂದು ಗುಡಗೇರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್, ನವೀನ್ ಜಕ್ಕಳ್ಲಿ ತಿಳಿಸಿದ್ದಾರೆ,
ರಾಜಸ್ತಾನ- ಕಾಲು,  ಅಂಡಮಾನ್ ನಿಕೋಬಾರ್ -ಕ್ಯಾಂಪ್ ಬೆಲ್ ಬೇ, ಪಶ್ಚಿಮ ಬಂಗಾಳ- ಫಾರಕ್ಕಾ, ಪುದುಚೆರಿ-ನೆಟ್ಟಪಾಕಂ, ಕರ್ನಾಟಕ- ಗುಡೇರಿ, ಹಿಮಾಚಲ ಪ್ರದೇಶ-ಚೋಪಾಲ್, ಲಖೇರಿ- ರಾಜಸ್ತಾನ, ಪೆರಿಯಾಕುಲಂ- ತಮಿಳುನಾಡು, ಮುನ್ಸಾರಿ-ಉತ್ತರ ಖಂಡ, ಚುರ್ ಚೋರಂ-ಗೋವಾ ಉತ್ತಮ ಪೊಲೀಸ್ ಠಾಣೆಗಳೆಂದು ಹೆಸರು ಪಡೆದಿವೆ. 
ಗುಜರಾತ್ ನಲ್ಲಿ ನಡೆಯುತ್ತಿರುವ ಡಿಜಿಪಿ ಮತ್ತು ಐಜಿಪಿಗಳ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪಟ್ಟಿ ಬಿಡುಗಡೆ ಮಾಡಿದ್ದಾರೆ, ಭಾರತದ ಪ್ರಮುಖ 10 ಪೊಲೀಸ್ ಠಾಣೆಗಳಲ್ಲಿ ಗುಜರಾತ್ ನ ಯಾವುದೇ ಒಂದು ಠಾಣೆ ಸ್ಥಾನ ಪಡೆದುಕೊಂಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಜಲಪ್ರಳಯ ಸಾವಿನ ಸಂಖ್ಯೆ 359 ಕ್ಕೇರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ, ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತೀ ಹೆಚ್ಚು!

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಶಿವಕುಮಾರ್

CSK ಯಲ್ಲಿ ಶೇ. 25 ರಷ್ಟು ಪಾಲು ಕೇಳಿದ್ದಾರೆಯೇ ಧೋನಿ? 3,820 ಕೋಟಿ ರೂ ಕ್ಲೈಮ್ ಹಿಂದಿರುವ ಸತ್ಯವೇನು?

ವಿದ್ಯಾರ್ಥಿಗಳ ವಿರೋಧದ ಬೆನ್ನಲ್ಲೇ NLSIU ಘಟಿಕೋತ್ಸವ ರದ್ದು; ‘ಅನಿವಾರ್ಯ ಕಾರಣ’ ಎಂದ ವಿವಿ