ಗುಡಗೇರಿ ಪೊಲೀಸ್ ಠಾಣೆ 
ರಾಜ್ಯ

ಭಾರತದ ಟಾಪ್ 10 ಪೊಲೀಸ್ ಠಾಣೆಗಳು: ಧಾರವಾಡ ಗುಡಗೇರಿಗೆ 5ನೇ ಸ್ಥಾನ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣೆ ಭಾರತದ 10 ಉತ್ತಮ ಪೊಲೀಸ್ ಸ್ಟೇಷನ್ ಗಳಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. ..

ಧಾರವಾಡ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣೆ ಭಾರತದ 10 ಉತ್ತಮ ಪೊಲೀಸ್ ಸ್ಟೇಷನ್ ಗಳಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. 
ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಭಾರತದ ಉತ್ತಮವಾಗಿ ಕಾರ್ಯ ನಿರ್ವಹಿಸುವ ಪೊಲೀಸ್ ಠಾಣೆಗಳಲ್ಲಿ ಕರ್ನಾಟಕದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣೆ 5ನೇ ಸ್ಥಾನ ಪಡೆದಿದೆ.
ಇದೇ ಮೊದಲ ಬಾರಿಗೆ ಟಾಪ್ 10 ಪೊಲೀಸ್ ಠಾಣೆಗಳಲ್ಲಿ ಗುಡಗೇರಿ ಠಾಣೆ ಸ್ಥಾನ ಪಡೆದುಕೊಂಡಿದೆ. ಸೆಪ್ಟಂಬರ್ 23 ರಂದು ಮೌಲ್ಯ ಮಾಪನ ತಂಡ ಇಲ್ಲಿಗೆ ಭೇಟಿ ನೀಡಿತ್ತು. ಇಲ್ಲಿನ ಅಪರಾಧ ಪ್ರಕರಣಗಳು ಹಾಗೂ ಸಾರ್ವಜನಿಕರೊಂದಿಗಿನ ಸ್ನೇಹ  ಮೂಲಭೂತ ಸೌಕರ್ಯಗಳು ಸೇರಿದಂತೆ ವಿವಿಧ ಮಾನದಂಡಗಳ ಆಧಾರದ ಮೇಲೆ ಸ್ಥಾನ ನೀಡಲಾಗಿದೆ ಎಂದು ದಾರವಾಡ ಎಸ್ ಪಿ ಸಂಗೀತಾ ಹೇಳಿದ್ದಾರೆ. 
ಸಾರ್ವಜನಿಕರೊಂದಿಗೆ ಪೊಲೀಸರು ಅಹಂಕಾರ ಹಾಗೂ ಒರಟಾಗಿ ವರ್ತಿಸುತ್ತಾರೆ ಎಂಬ ಕೆಟ್ಟ ಇಮೇಜ್ ಮೂಡಿದೆ. ಇದನ್ನು ಹೋಗಲಾಡಿಸಿ ಜನಸ್ನೇಹಿ ಪೊಲೀಸ್ ಠಾಣೆ ಆಗಬೇಕೆಂಬುದು ನನ್ನ ಬಯಕೆ ಎಂದು ಗುಡಗೇರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್, ನವೀನ್ ಜಕ್ಕಳ್ಲಿ ತಿಳಿಸಿದ್ದಾರೆ,
ರಾಜಸ್ತಾನ- ಕಾಲು,  ಅಂಡಮಾನ್ ನಿಕೋಬಾರ್ -ಕ್ಯಾಂಪ್ ಬೆಲ್ ಬೇ, ಪಶ್ಚಿಮ ಬಂಗಾಳ- ಫಾರಕ್ಕಾ, ಪುದುಚೆರಿ-ನೆಟ್ಟಪಾಕಂ, ಕರ್ನಾಟಕ- ಗುಡೇರಿ, ಹಿಮಾಚಲ ಪ್ರದೇಶ-ಚೋಪಾಲ್, ಲಖೇರಿ- ರಾಜಸ್ತಾನ, ಪೆರಿಯಾಕುಲಂ- ತಮಿಳುನಾಡು, ಮುನ್ಸಾರಿ-ಉತ್ತರ ಖಂಡ, ಚುರ್ ಚೋರಂ-ಗೋವಾ ಉತ್ತಮ ಪೊಲೀಸ್ ಠಾಣೆಗಳೆಂದು ಹೆಸರು ಪಡೆದಿವೆ. 
ಗುಜರಾತ್ ನಲ್ಲಿ ನಡೆಯುತ್ತಿರುವ ಡಿಜಿಪಿ ಮತ್ತು ಐಜಿಪಿಗಳ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪಟ್ಟಿ ಬಿಡುಗಡೆ ಮಾಡಿದ್ದಾರೆ, ಭಾರತದ ಪ್ರಮುಖ 10 ಪೊಲೀಸ್ ಠಾಣೆಗಳಲ್ಲಿ ಗುಜರಾತ್ ನ ಯಾವುದೇ ಒಂದು ಠಾಣೆ ಸ್ಥಾನ ಪಡೆದುಕೊಂಡಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT