ಕುಮಾರ್ ಅಜಿತಾಬ್ 
ರಾಜ್ಯ

ಟೆಕ್ಕಿ ನಾಪತ್ತೆ: ಸಿಮ್ ಕಾರ್ಡ್ ವಿತರಕರ ಬಂಧನ, ಶಂಕಿತ ಆರೋಪಿಗಳ ರೇಖಾಚಿತ್ರ ಬಿಡುಗಡೆ

ಓಎಲ್ ಎಕ್ಸ್ ನಲ್ಲಿ ಕಾರು ಮಾರಾಟಕ್ಕೆ ಜಾಹೀರಾತು ನೀಡಿದ್ದ ಟೆಕ್ಕಿ ಕುಮಾರ್ ಅಜಿತಾಬ್ ನ ನಾಪತ್ತೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ........

ಬೆಂಗಳೂರು: ಓಎಲ್ ಎಕ್ಸ್ ನಲ್ಲಿ ಕಾರು ಮಾರಾಟಕ್ಕೆ ಜಾಹೀರಾತು ನೀಡಿದ್ದ ಟೆಕ್ಕಿ ಕುಮಾರ್ ಅಜಿತಾಬ್ ನ ನಾಪತ್ತೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಕಾರ್ ಖರೀದಿಸುವುದಾಗಿ ಅಜಿತಾಬ್ ನನ್ನು ಕರೆಸಿಕೊಂಡಿದ್ದ ಶಂಕಿತ ವ್ಯಕ್ತಿಗಳ ರೇಕಾಚಿತ್ರವನ್ನು ಬಿಡುಗಡೆ ಮಾಡಿದೆ.
ನಕಲಿ ದಾಖಲೆಗಳನ್ನು ನೀಡಿ ಸಿಮ್ ಖರೀದಿಸಿದ್ದ ಶಂಕಿತರಿಗೆ ಸಿಮ್ ಮಾರಾಟ ಮಾಡಿದ್ದ ಜಿಯೋ ಸಿಮ್ ಕಾರ್ಡ್ ಮಾರಾಟಗಾರರಿಬ್ಬರನ್ನು ಪೋಲೀಸರು ಬಂಧಿಸಿದ್ದು ಅವರು ನೀಡಿದ ವಿವರಗಳ ಆಧಾರದಲ್ಲಿ ಈ ರೇಖಾಚಿತ್ರ ತಯಾರಾಗಿದೆ. 
ಆದರೆ ಈ ರೇಖಾಚಿತ್ರವು ಶಂಕಿತ ವ್ಯಕ್ತಿಗಳದೆ ಎನ್ನುವುದರ ಬಗೆಗೆ ಪೋಲೀಸರಿಗೆ ಇನ್ನೂ ಶಂಕೆ ಇದ್ದು ಬಂಧಿತರಾದ ಇಬ್ಬರು ಸಿಮ್ ಮಾರಾಟಗಾರರು ಒಬ್ಬನೇ ಶಂಕಿತ ವ್ಯಕ್ತಿಯ ಮುಖಚರ್ಯೆಯ ವಿವರಗಳನ್ನು ಬೇರೆ ಬೇರೆ ರೀತಿಯಲ್ಲಿ ವಿವರಿಸುತ್ತಿದ್ದಾರೆ. ಟೆಕ್ಕಿ ನಾಪತ್ತೆ ಪ್ರಕರಣಕ್ಕೆ ಕಾರಣವಾಗಿದ್ದ ಆರೋಪಿಗಳಿಗೆ ಸಿಮ್ ಕಾರ್ಡ್ ಮಾರಾಟ ಮಾಡಿದ್ದ ರಿಲಯನ್ಸ್ ಜಿಯೋ ಮಾರಾಟಗಾರ ಹಾಗೂ ಓರ್ವ ಏಜೆಂಟರನ್ನು ಬೆಂಗಳೂರು ವೈಟ್ ಫೀಲ್ಡ್ ಪೋಲೀಸರು ಬಂಧಿಸಿದ್ದಾರೆ. ಮಾರಾಟಗಾರ ಆನಂದ್ ಹಾಗೂ ಶಿವಕುಮಾರ್ ಎನ್ನುವ ಏಜೆಂಟ್ ನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಇದಲ್ಲದೆ ಸಿಮ್ ಕಾರ್ಡ್ ಖರೀದಿಸಿದಾತ ನಿಡಿದ್ದ ವಿವರದಂತೆ ಕೋಲಾರದ ರಹಮತ್ ನಗರ ನಿವಾಸಿ ಶಬಾನಾ ಅವರ ವಿರುದ್ಧ ಸಹ ಪೋಲೀಸರು ತನಿಖೆ ಕೈಗೊಂಡಿದ್ದಾರೆ.
ಶಬಾನಾ ಅವರನ್ನು ಪ್ರಶ್ನಿಸಿದಾಗ, ಆಕೆಗೆ ಈ ಪ್ರಕರಣದ ಕುರಿತಂತೆ ಯಾವುದೇ ವಿವರ ತಿಳಿದಿಲ್ಲ ಎಂದು ಅವರು ಹೇಳಿದರು. ಶಬಾನಾ ಶಿವಕುಮಾರ್ ನಿಂದ ಸಿಮ್ ಖರೀದಿ ಮಾಡಿದ ಕೆಲ ದಿನಗಳಲ್ಲಿ ಸಿಮ್ ಕಾರ್ಡ್ ನಿಷ್ಕ್ರಿಯವಾಗಿದೆ. ಶಿವಕುಮಾರ್ ನನ್ನು ಪತ್ತೆಹಚ್ಚಿದ ಪೋಲೀಸರು ಶಬಾನಾ ಹೆಸರಿನಲ್ಲಿಯೇ ಮತ್ತೊಂದು ಸಿಮ್ ಕಾರ್ಡ್ ನ್ನು ಆರೋಪಿಗಳಿಗೆ ಮಾರಾಟ ಮಾಡಿರುವುದು ತಿಳಿದಿದೆ. ಆನಂದ್ ಸಿಮ್ ಕಾರ್ಡ್ ಅನ್ನು ರೀಚಾರ್ಜ್ ಮಾಡಿ ಕೊಟ್ಟಿದ್ದಾರೆ. ಶಬಾನಾ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಈ ಇಬ್ಬರೂ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೋಲೀಸರು ಹೇಳಿದರು.
ಡಿ.18, 2017ರಿಂದ ಸಾಫ್ಟ್ ವೇರ್ ಇಂಜಿನಿಯರ್ ಕುಮಾರ್ ಅಜಿತಾಬ್ ಕಾಣೆಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT