ದಾವಣಗೆರೆ: ಇತ್ತೀಚಿಗೆ ರಾಜಸ್ಥಾನದ ಪೊಕ್ರಾಣ್ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದ ಯೋಧ ಜಾವಿದ್ ಅವರು ಹುತಾತ್ಮರಾಗಿದ್ದಾರೆ.
ಹುತಾತ್ಮ ಯೋಧ ಹರಿಹರ ಪಟ್ಟಣದ ಪಿ.ಬಿ.ರಸ್ತೆ ನಿವಾಸಿ ಜಾವಿದ್( 32) ಎಂದು ಗುರುತಿಸಲಾಗಿದೆ.
ಜಾವಿದ್ 14 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜಾವಿದ್ ಅವರು ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.