ಮಸಣಿಕವ್ವ ದೇವಾಲಯ 
ರಾಜ್ಯ

ಬೆಳಗಾವಿ: ಕಳ್ಳತನವಾಗಿರುವ ಗಂಟೆ ಪತ್ತೆ ಹಚ್ಚಲು ದೇವರಿಗೆ ಗಡುವು ನೀಡಿದ ಗ್ರಾಮಸ್ಥರು!

ದೇವಾಲಯದ ಗಂಟೆ ಕಳುವಾಗಿದ್ದು ದೇವರು, ತನ್ನ ಶಕ್ತಿಯಿಂದ 9 ದಿನಗಳಲ್ಲಿ ನಾಪತ್ತೆಯಾಗಿರುವ ಗಂಟೆಯನ್ನು ಪತ್ತೆ ಹಚ್ಚಬೇಕೆಂದು ದೇವರಿಗೆ ಡೆಡ್ ಲೈನ್ ನೀಡಿರುವ ...

ಬೆಳಗಾವಿ: ದೇವಾಲಯದ ಗಂಟೆ ಕಳುವಾಗಿದ್ದು ದೇವರು, ತನ್ನ ಶಕ್ತಿಯಿಂದ 9 ದಿನಗಳಲ್ಲಿ ನಾಪತ್ತೆಯಾಗಿರುವ ಗಂಟೆಯನ್ನು ಪತ್ತೆ ಹಚ್ಚಬೇಕೆಂದು ದೇವರಿಗೆ ಡೆಡ್ ಲೈನ್ ನೀಡಿರುವ ಘಟನೆ ಬೆಳಗಾವಿಯ ಅಗಸಾಗ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿಯಿಂದ 12 ಕಿಮೀ ದೂರದಲ್ಲಿರುವ ಅಗಸಾಗ ಗ್ರಾಮದಲ್ಲಿ ಹಲವು ದಶಕಗಳಿಂದ ಯಾವುದೇ ಕಳ್ಳತನ ಅಥವಾ ದರೋಡೆ ನಡೆದಿರಲಿಲ್ಲ, ಹೀಗಾಗಿ ಗ್ರಾಮಸ್ಥರು ತಮ್ಮ ಮನೆಯ ಬಾಗಿಲುಗಳನ್ನು ಮುಚ್ಚುತ್ತಿರಲಿಲ್ಲ, 
ದೇವಿ ಮಸಣಿಕವ್ವ ತಮ್ಮ ಗ್ರಾಮವನ್ನು ಕಾಯುತ್ತಿದ್ದಾಳೆ ಎಂಬ ನಂಬಿಕೆಯಲ್ಲಿ ಮನೆಯ ಮುಂಭಾಗ ಅಥವಾ ಅವರರವ ಜಮೀನುಗಳಲ್ಲೇ ಕೃಷಿ ಯಂತ್ರೋಪಕರಣಗಳನ್ನು ಇಡುತ್ತಿದ್ದರು ಮತ್ತೊಂದು ಆಸಕ್ತಿದಾಯಕ ವಿಷಯವೆಂದರೇ ಇಲ್ಲಿರುವ ದೇವಾಲಯಕ್ಕೆ ಪೂಜಾರಿ ಕೂಡ ಇಲ್ಲ. 
ಹೀಗಿದ್ದ ಈ ಗ್ರಾಮದ ದೇವಾಲಯದಲ್ಲಿ ಕಳೆದ ಶನಿವಾರ ಗಂಟೆ ಕಳುವಾಗಿರುವುದು ಎಲ್ಲರೂ ಹೌಹಾರುವಂತೆ ಮಾಡಿದೆ. ಹೀಗಾಗಿ ಅವರೆಲ್ಲಾ ದೇವರ ಶಕ್ತಿಯನ್ನು ಪರೀಕ್ಷಿಸಲು ನಿರ್ಧರಿಸಿದ್ದಾರೆ, ದೇವಾಲಯದ ಮುಂದೆ ಸೇರಿದ ಊರಿನ ಗ್ರಾಮಸ್ಥರು, ದೊಡ್ಡ ಕಬ್ಬಿಣದ ಸರಪಳಿಯೊಂದನ್ನು ದೇವಾಲಯದ ಮುಂದಿನ ಬಾಗಿಲಲ್ಲಿ  ಕಟ್ಟಿ ದ್ದಾರೆ, ದೇವಿ ಕಳ್ಳನನ್ನು ಪತ್ತೆ ಹಚ್ಚಬೇಕೆಂದು ಆಗ್ರಹಿಸಿದ್ದಾರೆ. ತನ್ನ ನಿಜವಾದ ಶಕ್ತಿ ಉಪಯೋಗಿಸಿ ಕಳ್ಳನನ್ನು ಹಿಡಿದು ಗಂಟೆಯನ್ನು ವಾಪಸ್ ತರುವಂತೆ ಗಡುವು ನೀಡಿದ್ದಾರೆ.
ಜೊತೆಗೆ 9 ದಿನಗಳಲ್ಲಿ ಎಲ್ಲವನ್ನು ಸರಿಪಡಿಸಬೇಕು ಎಂದು ಡೆಡ್ ಲೈನ್ ನೀಡಿದ್ದಾರೆ. ಒಂದು ವೇಳೆ ಗಂಟೆಯನ್ನು ವಾಪಸ್ ತರದಿದ್ದರೇ ದೇವರಿಗೆ ಪೂಜೆ ಸಲ್ಲಿಸಬಾರದೆಂದು ನಿರ್ಣಯ ಹೊರಡಿಸಿದ್ದಾರೆ, ಇನ್ನೂ ಗಂಟೆ ಸಿಗುವವರಗೊ ಯಾರೋಬ್ಬರು ದೇವಲಾಯದೊಳಗೆ ಕಾಲಿಡದಂತೆ ಶಪಥ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT