ಮೊಹಮದ್ ನಲಪಾಡ್ 
ರಾಜ್ಯ

ಇದು ಗೆಸ್ಟ್ ಹೌಸ್ ಅಲ್ಲ, ಜೈಲು: ಹಾಸಿಗೆ ಕೇಳಿದ ಹ್ಯಾರಿಸ್ ಪುತ್ರನಿಗೆ ಪೊಲೀಸ್ ಅಧಿಕಾರಿ ತಪರಾಕಿ!

ವಿದ್ವತ್ ಮೇಲೆ ಹಲ್ಲೆ ನಡೆಸಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮದ್ ನಳಪಾಡ ...

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮದ್ ನಳಪಾಡ ಜೈಲಿನಲ್ಲಿಯೂ ಐಷಾರಾಮಿ ಜೀವನ ನಡೆಸಲು ಬಯಸುತ್ತಿದ್ದಾನೆ.
ಫರ್ಜಿ ಕೆಫೆಯಲ್ಲಿ ನಡೆದ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಮಹಮದ್ ಮತ್ತು ಆತನ ಆರು ಸ್ನೇಹಿತರನ್ನು ಮೂರು ಸೆಲ್ ಗಳಲ್ಲಿ ಇರಿಸಲಾಗಿದೆ. ಮೂವರು ಒಂದು ಕೊಠಡಿಯಲ್ಲಿ ಇನ್ನು ಮೂವರು ಇನ್ನೆರಡು ಕೊಠಡಿಯಲ್ಲಿದ್ದಾರೆ, ಕೇವಲ ಊಟ ತಿಂಡಿಗಾಗಿ ಮಾತ್ರ ಈ ಆರು ಮಂದಿ ಹೊರಗೆ ಬರುತ್ತಾರೆ, ಉಳಿದಂತೆ ಸೆಲ್ ಒಳಗೆ ಇರುತ್ತಾರೆ, ಜೈಲು ಸಿಬ್ಬಂದಿ ಸೇರಿದಂತೆ ಯಾರೊಂದಿಗೂ ಹೆಚ್ಚು ಮಾತನಾಡುತ್ತಿಲ್ಲ ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಧವಾರ ರಾತ್ರಿ ಮೊಹಮದ್ ಜೈಲಿನ ಹಿರಿಯ ಪೊಲೀಸ್ ಅಧಿಕಾರಿಯೊರ್ವರ ಬಳಿ ಮಲಗಲು ಹಾಸಿಗೆ ನೀಡುವಂತೆ ಕೇಳಿದ್ದಾನೆ, ಇದರಿಂದ ಕೆರಳಿದ ಅಧಿಕಾರಿ ಇದು ಗೆಸ್ಟ್ ಹೌಸ್ ಅಲ್ಲ, ಜೈಲು ಎಂದು ಮೊಹಮದ್ ನೇರವಾಗಿ ಹೇಳಿದ್ದಾರೆ.ಮೊಹಮದ್ ಇದಕ್ಕೆ ಯಾವುದೇ ಪ್ರತಿಕ್ರಿಯಿ ನೀಡಿಲ್ಲ, ಸುಮ್ಮನೆ ಸದ್ದಿಲ್ಲದೇ ಇರು ಎಂದು ಅಧಿಕಾರಿ ಗದರಿದ್ದಾರೆ.,
ಇನ್ನು ನಟ ಶಿವರಾಜ್ ಕುಮಾರ್ ವಿದ್ವತ್ ಚಿಕಿತ್ಸೆ ಪಡೆಯುತ್ತಿರುವ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ವಿಶೇಷ ದಿನಗಳಲ್ಲಿ ವಿದ್ವತ್ ನಮ್ಮ ಮನೆಗೆ ಬರುತ್ತಿದ್ದ ಎಂದು ಶಿವಣ್ಣ ಹೇಳಿದ್ದಾರೆ, ಬೆಂಗಳೂರು ಶಾಂತಿಯುತ ನಗರ ಎಂದು ಪ್ರಸಿದ್ದಿಯಾಗಿತ್ತು, ಆದರೆ ಈಗ ಏನಾಗುತ್ತಿದೆ ಎಂದು ಪ್ರಶ್ನಿಸಿರುವ ಅವರು, ಆರೋಪಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.
ಬಿಜೆಪಿ ಮುಖಂಡ ಸಿಟಿ ರವಿ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಆಸ್ಪತ್ರೆಗೆ ಭೇಟಿ ನೀಡಿದ್ದರು, ಆದರೆ ವೈದ್ಯರು ವಿದ್ವತ್ ನೋಡಲು ಬಿಡಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

SCROLL FOR NEXT