ಮಹಾತ್ಮ ಗಾಂಧಿ ಮತ್ತು ಪ್ರಧಾನಿ ಮೋದಿಯಂತೆ ಡ್ರೆಸ್ ಮಾಡಿಕೊಂಡಿರುವ ವ್ಯಕ್ತಿಗಳು 
ರಾಜ್ಯ

ಶ್ರವಣಬೆಳಗೊಳದಲ್ಲಿ ಮೋದಿ ಮೇನಿಯಾ: ಮೋದಿ ತದ್ರೂಪಿಯಿಂದಾಗಿ ಗುಂಪು ಚದುರಿಸಿದ ಭದ್ರತಾ ಸಿಬ್ಬಂದಿ

ಶ್ರವಣ ಬೆಳಗೊಳದ ಮಹಾ ಮಸ್ತಾಭಿಷೇಕಕ್ಕೆ ಆಗಮಿಸಿ ಕೆಲವೇ ಗಂಟೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಪಸ್ ತೆರಳಿದ್ದರು, ಹೀಗಾಗಿ ಮೋದಿಯನ್ನು ...

ಶ್ರವಣಬೆಳಗೊಳ: ಕಳೆದ ವಾರ ಶ್ರವಣ ಬೆಳಗೊಳದ ಮಹಾ ಮಸ್ತಾಭಿಷೇಕಕ್ಕೆ ಆಗಮಿಸಿ ಕೆಲವೇ ಗಂಟೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಪಸ್ ತೆರಳಿದ್ದರು, ಹೀಗಾಗಿ ಮೋದಿಯನ್ನು ನೋಡಬೇಕೆಂದಿದ್ದ ಭಕ್ತರಲ್ಲಿ ನಿರಾಸೆ ಮೂಡಿಸಿತ್ತು.
ಆದರೆ ಶುಕ್ರವಾರ ಮೋದಿ ಅಭಿಮಾನಿಗಳು  ವಿಂದ್ಯಾಗಿರಿ ಬೆಟ್ಟದಲ್ಲಿ ಮತ್ತೆ ಮೋದಿಯನ್ನು ನೋಡಿ ಖುಷಿಯಾದರು. ಉಡುಪಿ ಮೂಲದ ಸದಾನಂದ ನಾಯಕ್ ಶ್ರವಣಬೆಳಗೊಳದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾದರು.ಥೇಟ್ ಮೋದಿಯಂತೆ ಕಾಣುವ ಸದಾನಂದ್ ನಾಯಕ್ ನೋಡಲು ಜನರು ಮುಗಿ ಬಿದ್ದರು.ಸ್ಥಳಕ್ಕೆ ಬಂದ ಪೊಲೀಸರು ಗುಂಪನ್ನು ಚದುರಿಸಿ ಭಕ್ತರು ವಿಂದ್ಯಾಗಿರಿ ಬೆಟ್ಟ ಹತ್ತಲು ಅನುವು ಮಾಡಿಕೊಟ್ಟರು.
ಬಿಜೆಪಿ ಸಮಾವೇಶ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿಯಂತೆ ಕಾಣುವ ಸದಾನಂದ ನಾಯಕ್  ಜನಪ್ರಿಯರಾಗಿದ್ದಾರೆ,ಕಳೆದ 25 ವರ್ಷಗಳಿಂದ ನಾನು ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದೇನೆ, ಒಮ್ಮೆ ನಾನು ಹರಿದ್ವಾರಕ್ಕೆ ರೈಲಿನಲ್ಲಿ ತೆರಳುತ್ತಿದ್ದೆ, ರೈಲಿನಲ್ಲಿ ನನ್ನನ್ನು ಭೇಟಿ ಮಾಡಿದ ಹಲವರು ನಾನು ಮೋದಿಯಂತೆ ಕಾಣಿಸುತ್ತೇನೆ ಎಂದು ಹೇಳಿದರು. 
ನಂತರ ಉಜಿರೆಯಲ್ಲಿ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದ ವೇಳೆ ನಾನು ಮೋದಿ ಅವರಂತೆ ಡ್ರೆಸ್ ಮಾಡಿಕೊಂಡೆ, ಅಲ್ಲಿಂದ ನಾನು ಹಿಂದಿರುಗಿ ನೋಡಲೇ ಇಲ್ಲ, ಇತ್ತೀಚೆಗೆ ನಡೆದ ಗುಜರಾತ್ ವಿಧಾನ ಸಭೆ ಚುನಾವಣೆ ಪ್ರಚಾರದಲ್ಲೂ ಕೂಡ ಪಾಲ್ಗೊಂಡಿದ್ದೆ, ಜೊತೆಗ ಮೋದಿ ಅವರ ಹಲವು ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದೇನೆ ಎಂದು ಹೇಳಿದ್ದಾರೆ.
ಇನ್ನೂ ಶ್ರವಣ ಬೆಳಗೊಳದಲ್ಲಿ ಜನ ಮೋದಿ ಮೇನಿಯಾದಲ್ಲಿರುವಾಗಲೇ ಮಹಾತ್ಮ ಗಾಂಧಿ ಕೂಡ ಎಲ್ಲರ ಗಮನ ಸೆಳೆದರು, ಗೋವಾ ಮೂಲದ ಅಗಸ್ಟೈನ್ ಡಿ ಅಲಮೈಡಾ ಬಾಪುವಂತೆ ಡ್ರೆಸ್ ಮಾಡಿಕೊಂಡಿದ್ದರು. ಹಲವು ಮಂದಿ ಅವರಜೊತೆ ಫೋಟೋ ಕ್ಲಿಕ್ಕಿಸಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT