ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದ ದಿನವೇ ನಗರದಲ್ಲಿ ಆರು ಜನರ ಹತ್ಯೆ 
ರಾಜ್ಯ

ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದ ದಿನವೇ ನಗರದಲ್ಲಿ ಆರು ಜನರ ಹತ್ಯೆ

ಹೊಸ ವರ್ಷದ ಪ್ರಾರಂಭದ ದಿನ ಬೆಂಗಳೂರು ನಗರ ಬರೋಬ್ಬರಿ ಆರು ಕೊಲೆ ಪ್ರಕರಣಗಳಿಗೆ ಸಾಕ್ಷಿಯಾಗಿದೆ.

ಬೆಂಗಳೂರು: ಹೊಸ ವರ್ಷದ ಪ್ರಾರಂಭದ ದಿನ ಬೆಂಗಳೂರು ನಗರ ಬರೋಬ್ಬರಿ ಆರು ಕೊಲೆ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ಮೂರು ಪ್ರಕರಣಗಳು ಹೊಸ ವರ್ಷಾಚರಣೆ ಸಂಭ್ರಮ ನಡೆಯುತ್ತಿದ್ದ ಸ್ಥಳದಲ್ಲೇ ನಡೆದಿದೆ. ಇನ್ನು ಆರರಲ್ಲಿ ಒಂದು ಪ್ರಕರಣಕ್ಕೆ ಹಣದ ವ್ಯವಹಾರ ಕಾರಣವೆನ್ನಲಾಗಿದ್ದು ಉಳಿದ ಐದು ಹತ್ಯೆ ನಡೆಯುವ ಹಿಂದಿನ ಕಾರಣವನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ.
ಸೋಮವಾರ ಬೆಳ್ಳಂದೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಓರ್ವ ವ್ಯಕ್ತಿಯನ್ನು ಆತನ ಏಳು ಜನ ಸ್ನೇಹಿತರು ಸೇರಿ ಈ ಕೃತ್ಯ ಎಸಗಿದ್ದಾರೆ. ಮೃತನನ್ನು ಶಿವರಾಮ್ (25) ಎನ್ನಲಾಗಿದ್ದು ಅವರೊಬ್ಬ ವರ್ಣ ಚಿತ್ರಕಾರನಾಗಿದ್ದರು. ಸೋಮವಾರ ಮುಂಜಾನೆ ಕಸವರಹಳ್ಳಿ ಸ್ಲಂ ಕ್ವಾರ್ಟರ್ಸ್ ನಲ್ಲಿರುವ ಅವರ ನಿವಾಸದಲ್ಲಿ ಸ್ನೇಹಿತರೊಡನೆ ಮದ್ಯಪಾನ ನಡೆಸಿದ್ದರು.
ಈ ವೇಳೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ರಘು ಎನ್ನುವವ ಶಿವರಾಂ ಅವರಿಗೆ ಚಾಕುವಿನಿಂದ ಇರಿದಿದ್ದು ಆ ಬಳಿಕ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ. ಘಟನೆ ಸಂಬಂಧ ಪ್ರಮುಖ ಆರೋಪಿ ರಘು ಸೇರಿ ಆರು ಜನರನ್ನು ಪೋಲೀಸರು ಬಂಧಿಸಿದ್ದಾರೆ. 
ಕಾಟನ್ ಪೇಟೆಯಲ್ಲಿ ಅಂಜನಪ್ಪ ಗಾರ್ಡನ್ ನಿವಾಸಿಯಾದ ವಿನಿತ್ (22) ಹತ್ಯೆ ನಡೆದಿದೆ. ವಿನಿತ್ ಹೊಸ ವರ್ಷಾಚರಣೆಗಾಗಿ ತೆರಳುವಾಗ ಆತನನ್ನು ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಲಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮೃತ ವ್ಯಕ್ತಿ ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ.
ಜೆಪಿ ನಗರದ ಬಾಲಾಜಿ ವೈನ್ಸ್ ನ ಎದುರು ಜಗಳ ಬಿಡಿಸಿಅಲು ಹೋದ ಕ್ಯಾಬ್ ಚಾಲಕ ಹೇಮಂತ್ ಕುಮಾರ್ (25) ಕೊಲೆಯಾಗಿದ್ದಾರೆ.ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಘಟನೆ ಸಂಬಂಧ ಅಮೃತ್‌  ಎನ್ನುವವನನ್ನು ಪೋಲೀಸರು ಬಂಧಿಸಿದ್ದಾರೆ.
ಹೀಗೆ ನಗರದ ನಾನಾ ಕಡೆ ಒಟ್ತು ಆರು ಮಂದಿ ಜೀವ ತೆತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ: ಸಿಎಂ ಆಪ್ತ ಗುಂಪಿನಿಂದ ಸ್ಪೋಟಕ ಸಂದೇಶ, ಡಾ. ಜಿ. ಪರಮೇಶ್ವರ್ ಹೇಳಿದ್ದೇನು?

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

SCROLL FOR NEXT