ಅವಳಿ ನಗರದ ಪೊಲೀಸರೀಗ ಹೈಟೆಕ್; ಶಾಂತಿ ಕದಡುವವರ ಮೇಲೆ ಕಣ್ಣಿಡಲಿದೆ ಕಮಾಂಡ್ ವಾಹನ 
ರಾಜ್ಯ

ಅವಳಿ ನಗರದ ಪೊಲೀಸರೀಗ ಹೈಟೆಕ್; ಶಾಂತಿ ಕದಡುವವರ ಮೇಲೆ ಕಣ್ಣಿಡಲಿದೆ ಕಮಾಂಡ್ ವಾಹನ

ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿರುವ ಕಮಾಂಡ್ ವಾಹನಗಳು ಅವಳಿ ನಗರ ಹುಬ್ಭಳ್ಳಿ-ಧಾರವಾಡ ಮಹಾನಗರದ ರಸ್ತೆಗಿಳಿಯಲು ಸಜ್ಜಾಗಿದ್ದು, ಈ ಮೂಲಕ ಕಮಾಂಡ್ ವಾಹನಗಳನ್ನು ಹೊಂದಿದ ಮಹಾನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ...

ಹುಬ್ಬಳ್ಳಿ: ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿರುವ ಕಮಾಂಡ್ ವಾಹನಗಳು ಅವಳಿ ನಗರ ಹುಬ್ಭಳ್ಳಿ-ಧಾರವಾಡ ಮಹಾನಗರದ ರಸ್ತೆಗಿಳಿಯಲು ಸಜ್ಜಾಗಿದ್ದು, ಈ ಮೂಲಕ ಕಮಾಂಡ್ ವಾಹನಗಳನ್ನು ಹೊಂದಿದ ಮಹಾನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 
ಬೆಂಗಳೂರು ನಗರದಲ್ಲಿರುವ ಗಸ್ತು ವಾಹನಗಳಿಗೆ ಹೋಲಿಸಿದರೆ, ಹುಬ್ಬಳ್ಳಿ ಹಾಗೂ ಧಾರವಾಡದ ಕಮಾಂಡ್ ವಾಹನಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ವಾಹನಗಳಾಗಿವೆ. ಕಮಾಂಡ್ ವಾಹಗಳು ನಗರದ ರಸ್ತೆಗಳ ಮೇಲೆ ನಿರಂತರವಾಗಿ ಕಣ್ಗಾವಲಿರಿಸಲಿದ್ದು, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಂದರ್ಭಗಳಲ್ಲಿ ಕಮಾಂಡ್ ವಾಹನಗಳು ಪ್ರಮುಖ ಪಾತ್ರ ವಹಿಸುತ್ತವೆ. 
ಕಮಾಂಡ್ ವಾಹನಗಳಲ್ಲಿ ಒಟ್ಟು 19 ಕ್ಯಾಮೆರಾಗಳಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾದಾಗ 19 ಪೊಲೀಸ್ ಸಿಬ್ಬಂದಿಗಳು ಮಾಡುವಂತಹ ಕೆಲಸದ ಸಾಮರ್ಥ್ಯ ಈ ವಾಹನ ಹೊಂದಿರುತ್ತದೆ ಎಂದು ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ರೇಣುಕಾ ಸುಕುಮಾರ್ ಅವರು ಹೇಳಿದ್ದಾರೆ. 
ಕಮಾಂಡ್ ವಾಹನ ಮೊಬೈಲ್ ಪೊಲೀಸ್ ಠಾಣೆಯಂತಿದ್ದು, ಇದರಲ್ಲಿ ವಿಡಿಯೋ ವಾಲ್, ಪಾಲ್-ಟಿಲ್ಟ್-ಝೂಮ್ ಕ್ಯಾಮೆರಾಗಳು ಸೇರಿದಂತೆ ಎಲ್ಲಾ ರೀತಿಯ ಸಂವಹನ ವ್ಯವಸ್ಥೆಯನ್ನು ಅಳವಡಿಸಲಾಗಿದೆ. 
ಮೆರವಣಿಗೆ, ಅಹಿತಕರ ಘಟನೆ, ಚುನಾವಣಾ ರ್ಯಾಲಿ ಸಂದರ್ಭಗಳಲ್ಲಿ ಸಮಾಜ ವಿರೋಧಿ ಚಟುವಟಿಕೆ ನಡೆಸುತ್ತಿರುವ ಗುಂಪಿನಲ್ಲಿರುವವರನ್ನು ಗುಪ್ತ ಕ್ಯಾಮೆರಾಗಳನ್ನು ಧರಿಸಿರುವ ಸಿಬ್ಬಂದಿ ಮೂಲಕ ಫೋಟೋಗಳನ್ನು ಸೆರೆ ಹಿಡಿಯಲಾಗುತ್ತದೆ. ಕಮಾಂಡ್ ವಾಹನದಲ್ಲಿ ಸೆರೆ ಹಿಡಿಯಲಾದ ಫೋಟೋಗಳು ಹಾಗೂ ಸಂದೇಶಗಳು ನೇರವಾಗಿ ಸಂಚಾರ ನಿರ್ವಹಣಾ ಕೇಂದ್ರಕ್ಕೆ ತಲುಪುತ್ತವೆ. ಅಲ್ಲಿಂದಲೇ ಮೇಲಾಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿದೆ ಎಂದು ಹೇಳಿದ್ದಾರೆ. 
ಇಂಟರ್ನೆಟ್ ಸಂಪರ್ಕ ಕೂಡ ಇದ್ದು, ಇದರಿಂದ ಸಂಚಾರ ನಿರ್ವಹಣಾ ಕೊಠಡಿಯನ್ನು ಸಂಪರ್ಕಿಸಬಹುದಾಗಿದೆ. ವಾಹನದಲ್ಲಿ ಯುಪಿಎಸ್ ವ್ಯವಸ್ಥೆಯಿದ್ದು, ಇದರಿಂದ ಗುಗ್ರಾಮಗಳಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. 
ವಾಹನದಲ್ಲಿರುವ ವೈಯರ್ ಲೆಸ್ ವ್ಯವಸ್ಥೆ ಮತ್ತು ಕಂಪ್ಯೂಟ್ ವಿಭಾಗಕ್ಕಾಗಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

ಮೊದಲು ಪರಮೇಶ್ವರ್ ಕೂಲಿ ಚುಕ್ತಾ ಮಾಡಲಿ: ನಂತರ ವಿಧಾನಸಭೆ ವಿಸರ್ಜಿಸಿ ಡಿಕೆಶಿ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ!

ನಾವು ಬಿಟ್ಟರು ಧರ್ಮ, ಜಾತಿ ನಮ್ಮನ್ನು ಬಿಡುವುದಿಲ್ಲ: ಒಕ್ಕಲಿಗನಾಗಿ ಹುಟ್ಟಿದ್ದೇನೆ; ಅಶೋಕಣ್ಣನಿಗೆ ಬ್ಯಾಡ್ಜ್ ಕಳಿಸುತ್ತೇನೆ ಹಾಕಿಕೊಳ್ಳಲಿ; DKS

ಅಮೆರಿಕ ಶಕ್ತಿ ಕೇಂದ್ರ ಶ್ವೇತಭವನ ಬಳಿ ಇಬ್ಬರು ಯುಎಸ್ ರಾಷ್ಟ್ರೀಯ ಗಾರ್ಡ್ ಗಳ ಮೇಲೆ ಗುಂಡಿನ ದಾಳಿ: ಶಂಕಿತನ ಗುರುತು ಪತ್ತೆ

SCROLL FOR NEXT