ಮಹದಾಯಿ ನದಿ 
ರಾಜ್ಯ

ಕುಡಿಯುವ ಉದ್ದೇಶಕ್ಕೆ ನೀರು ಬೇಕು ಎಂದು ಕರ್ನಾಟಕ ಸುಳ್ಳು ಹೇಳುತ್ತಿದೆ: ಗೋವಾ ಸರ್ಕಾರ

ಕರ್ನಾಟಕ ಮತ್ತು ಗೋವಾ ನಡುವಿನ ಮಹದಾಯಿ ಬಿಕ್ಕಟ್ಟು ನ್ಯಾಯಾಧಿಕರಣದ ಹೊರಗೆ ಬಗೆಹರಿಯುವ ಸಾಧ್ಯತೆ ಕ್ಷೀಣಿಸಿದ್ದು, ಕರ್ನಾಟಕ ಮಹದಾಯಿ ನೀರು ಕೇಳುತ್ತಿರುವುದು ಕುಡಿಯುವ ಉದ್ದೇಶಕ್ಕಾಗಿ ಅಲ್ಲ....

ಪಣಜಿ: ಕರ್ನಾಟಕ ಮತ್ತು ಗೋವಾ ನಡುವಿನ ಮಹದಾಯಿ ಬಿಕ್ಕಟ್ಟು ನ್ಯಾಯಾಧಿಕರಣದ ಹೊರಗೆ ಬಗೆಹರಿಯುವ ಸಾಧ್ಯತೆ ಕ್ಷೀಣಿಸಿದ್ದು, ಕರ್ನಾಟಕ ಮಹದಾಯಿ ನೀರು ಕೇಳುತ್ತಿರುವುದು ಕುಡಿಯುವ ಉದ್ದೇಶಕ್ಕಾಗಿ ಅಲ್ಲ. ಬದಲಾಗಿ ಕಬ್ಬು ಬೆಳೆಗೆ ಕೇಳುತ್ತಿದೆ ಎಂದು ಗೋವಾ ಸರ್ಕಾರ ಮಹದಾಯಿ ನ್ಯಾಯಾಧಿಕರಣಕ್ಕೆ ತಿಳಿಸಿದೆ.
ಕಳೆದ ವಾರ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು, ಮಹದಾಯಿ ನದಿ ನೀರನ್ನು ಕುಡಿಯು ಉದ್ದೇಶಕ್ಕಾಗಿ ನೆರೆಯ ಕರ್ನಾಟಕದೊಂದಿಗೆ ಹಂಚಿಕೊಳ್ಳಲು ತಾವು ಸಿದ್ಧ ಮತ್ತು ಈ ಸಂಬಂಧ ಮಾತುಕತೆಗೂ ಸಿದ್ಧ ಎಂದಿದ್ದರು.
ಇದರ ಬೆನ್ನಲ್ಲೇ ಗೋವಾ ಪರ ವಕೀಲ ಆತ್ಮಾರಾಮ್‌ ನಾಡಕರ್ಣಿ ಅವರು ಸೋಮವಾರ ಮಹದಾಯಿ ನ್ಯಾಯಾಧಿಕರಣಕ್ಕೆ 531 ಪುಟಗಳ ನಿವೇದನೆಯನ್ನು ಸಲ್ಲಿಸಿದ್ದು, ಕರ್ನಾಟಕದ ಮಹದಾಯಿ ನೀರಿನ ಬೇಡಿಕೆಯು ಕಬ್ಬು ಬೆಳೆಯ ನೀರಾವರಿ ಉದ್ದೇಶಕ್ಕಾಗಿದೆಯೇ ವಿನಾ ಕುಡಿಯುವ ಉದ್ದೇಶಕ್ಕಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ ಮಹದಾಯಿ ನೀರನ್ನು ಕೇಳುತ್ತಿರುವುದು ಕುಡಿಯುವ ಉದ್ದೇಶಕ್ಕಾಗಿ ಅಲ್ಲ. ಬದಲು ಅತ್ಯಧಿಕ ನೀರನ್ನು ಬೇಡುವ ಕಬ್ಬಿನ ಬೆಳೆಗಾಗಿ. ಹೀಗಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಮಹದಾಯಿ ನದಿ ನೀರನ್ನು ತಿರುಗಿಸಲು ಬಿಡಬಾರದು ಎಂದು ನಾಡಕರ್ಣಿ ಅವರು ಮಹದಾಯಿ ನ್ಯಾಯಾಧಿಕರಣಕ್ಕೆ ಮನವಿ ಮಾಡಿದ್ದಾರೆ. 
ಮಲಪ್ರಭಾ ಜಲಾಶಯದ ನೀರು ಹುಬ್ಬಳ್ಳಿ - ಧಾರವಾಡ ಅವಳಿ ನಗರಗಳ ಕುಡಿಯುವ ನೀರಿಗೆ ಅಗತ್ಯವಾಗಿರುವುದೆಂಬ ಕರ್ನಾಟಕದ ಹೇಳಿಕೆ ಕೂಡ ಸಂಪೂರ್ಣ ಸುಳ್ಳು ಎಂದು ನಾಡಕರ್ಣಿ ತಮ್ಮ ನಿವೇದನೆಯಲ್ಲಿ ವಾದಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

SCROLL FOR NEXT