ಸಿಬಿಐ 
ರಾಜ್ಯ

ಬೆಂಗಳೂರು: ರೈಲ್ವೆ ಉದ್ಯೋಗಿಗಳ ಹೆಸರಲ್ಲಿ ನಕಲಿ ಬಿಲ್ ತಯಾರಿಸಿ 42 ಲಕ್ಷ ವಂಚನೆ

ನೈಋತ್ಯ ರೈಲ್ವೆ ನೌಕರರು ನಕಲಿ ದಾಖಲೆಗಳನ್ನು ಸೃಷ್ಟಿಸಿ 59 ಉದ್ಯೋಗಿಗಳ ಬಿಲ್ ಗಳನ್ನು ಪಡೆದು ವಂಚಿಸಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಹೇಳಿದೆ.

ಬೆಂಗಳೂರು: ನೈಋತ್ಯ ರೈಲ್ವೆ ನೌಕರರು ನಕಲಿ ದಾಖಲೆಗಳನ್ನು ಸೃಷ್ಟಿಸಿ 59 ಉದ್ಯೋಗಿಗಳ  ಬಿಲ್ ಗಳನ್ನು ಪಡೆದು ವಂಚಿಸಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಹೇಳಿದೆ. ಇದರಿಂದಾಗಿ ನೈಋತ್ಯ ರೈಲ್ವೆಗೆ 42.24 ನಷ್ಟವಾಗಿರುವುದಾಗಿ ಅದು ತಿಳಿಸಿದೆ 
ಈ ವಂಚನೆ ಪ್ರಕರಣವು 2013-2016ರ ನಡುವೆ ನಡೆದಿದ್ದು ಗೋವಿಂದರಾಜು, ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಕ್ಲರ್ಕ್ ಆಗಿದ್ದ ಗೋವಿಂದರಾಜು ಮತ್ತು ಚೀಫ್ ಯಾರ್ಡ್ ಮಾಸ್ಟರ್, ಎಸ್ ಜಿಟಿ, ವೈಟ್ ಫೀಲ್ಡ್ ನಲ್ಲಿ ತಾತ್ಕಾಲಿಕವಾಗಿ ಸರಕು ಸಾಗಣೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ.ಬಸವರಾಜು ಎನ್ನುವವರು ಆರೋಪಿಗಳಾಗಿದ್ದು ಅದರಲ್ಲಿ  ಬಸವರಾಜು ಪಿಯೋನ್ ಟ್ರಾಫಿಕ್ ಇನ್ಸ್ ಪೆಚ್ಟರ್ ಆಗಿ , ಧರ್ಮಪುರಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಸಿಬಿಐ ಹೇಳಿದೆ.
"ಗೋವಿಂದರಾಜು ಮತ್ತು ಬಸವರಾಜು ಬೆಂಗಳೂರು-ಸೇಲಂ ವಿಭಾಗದಲ್ಲಿ ನೈಋತ್ಯ ರೈಲ್ವೇಯ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 59 ಉದ್ಯೋಗಿಗಳ ಶೈಕ್ಷಣಿಕ ಸಹಾತಧನ, ಬೋಧನಾ ಶುಲ್ಕಗಳು ಮತ್ತು ಹಾಸ್ಟೆಲ್ ಸಬ್ಸಿಡಿ ಸಂಬಂಧ ನಕಲಿ ಬಿಲ್ ಗಳನ್ನು ಸೃಷ್ಟಿಸಿ ವಂಚಿಸಿದ್ದರು. ಅವರು 42.24 ಲಕ್ಷ ರೂ ರೈಲ್ವೆ ನಿಧಿಯನ್ನು  ದುರುಪಯೋಗ ಪಡಿಸಿಕೊಂಡಿದ್ದಾರೆ" ಸಿಬಿಐನ ಅಧಿಕೃತ ಮೂಲಗಳು ತಿಳಿಸಿದೆ
ಬಿಲ್ ಗಳಲ್ಲಿ ನಮೂದಾಗಿರುವ ಕೆಲವು ಶೈಕ್ಷಣಿಕ ಸಂಸ್ಥೆಗಳು ಅಸ್ತಿತ್ವದಲ್ಲಿಲ್ಲ ಎಂದು ಸಿಬಿಐ ತನಿಖೆ ವೇಳೆ ಬಯಲಾಗಿದ್ದು ಇನ್ನು ಕೆಲವಉ ಬಿಲ್ ಗಳಲ್ಲಿ ನಮೂದಾದ ವಿದ್ಯಾರ್ಥಿಗಳು ಆಯಾ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿಲ್ಲದಿರುವುದು ತಿಳಿದು ಬಂದಿದೆ. ಆರೋಪಿಗಳು ಈ 59 ಉದ್ಯೋಗಿಗಳ ಖಾತೆಗಳಿಂದ ಸಹಾಯಧನದ ಮಂಜೂರಾತಿ ಪಡೆದುಕೊಂಡಿದ್ದಾರೆ. ನಂತರ ಅಕ್ರಮವಾಗಿ ಹಣ ಸಂದಾಯಆಗಿದೆ ಎಂದು ನೌಕರರಿಗೆ ತಿಳಿಸಿದ ಆರೋಪಿಗಳು ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದಾರೆ. ಇದೀಗ ಸಿಬಿಐ ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್ ನ ನಾನಾ ವಿಭಾಗಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್