ರಾಜ್ಯ

ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಗುಡ್ಡ ಕುಸಿತ, ಪ್ರಯಾಣಿಕರು ಕಂಗಾಲು

Raghavendra Adiga
ಬೆಂಗಳೂರು:  ಮಂಗಳೂರು- ಹಾಸನ ರೈಲು ಮಾರ್ಗದಲ್ಲಿ ಮತ್ತೆ ಗುಡ್ಡ ಕುಸಿದಿದ್ದು ರೈಲು ಪ್ರಯಾಣಿಕರು ಪರದಾಡುವಂತಾಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ರೈಲು ಸಕಲೇಶಪುರದ ಸಮೀಪ ಯೆಡಕುಮರಿ ಎಂಬಲ್ಲಿ ಗುಡ್ಡ ಕುಸಿತವಾಗಿರುವ ಕಾರಣ ಮಾರ್ಗದ ನಡುವೆಯೇ ಸ್ಥಗಿತವಾಗಿದೆ. ಮಧ್ಯಾಹ್ನ 2.45 ಗಂಟೆ ವೇಳೆಗೆ ಈ ಅವಘಡ ಸಂಭವಿಸಿದೆ.
ಕಾರವಾರ-ಯಶವಂತಪುರ ರೈಲು ಗುಡ್ಡ ಕುಸಿತದ ಕಾರಣ ಪುನಃ ಮಂಗಳೂರಿಗೆ ಹಿಂತಿರುಗಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಪ್ರಯಾಣಿಕರಿಗೆ ಟಿಕೆಟ್ ಶುಲ್ಕವನ್ನು ಮರುಪಾವತಿಸಲಾಗುತ್ತದೆ ಎಂದು ಇಲಾಖೆ ಮಾಹಿತಿ ಹೇಳಿದೆ.
ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಿಂದ ರೈಲ್ವೆ ಹಳಿ ಹಾನಿಗೊಳಗಾಗಿದ್ದು ಇಂದು ಮಧ್ಯ ರಾತ್ರಿಯ ವೇಳೆಗೆ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ, ದೀರ್ಘ ಪ್ರಯಾಣದ ರೈಲು ಸೇವೆಗಳು ಪುನರಾರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
SCROLL FOR NEXT