ಜು.02-08 ವರೆಗೆ ರಾಮಾಯಣ ಪ್ರವಚನ ಸಪ್ತಾಹ: ಡಾ.ಪಾವಗಡ ಪ್ರಕಾಶ್ ರಾವ್ ರಿಂದ ಉಪನ್ಯಾಸ
ಮನೋರಂಜನಿ ಸಾಂಸ್ಕೃತಿಕ ವೇದಿಕೆಯಿಂದ ನಗರದ ಚಿಕ್ಕಲಸಂದ್ರದಲ್ಲಿ ಜು.02 ರಿಂದ ರಾಮಾಯಣ ಸಂಪೂರ್ಣ ಸಮಗ್ರದರ್ಶನ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದ್ದು, ಸಿದ್ಧಿಗಣಪತಿ ದೇವಾಲಯ ಸಮಿತಿ ಉಪನ್ಯಾಸವನ್ನು ಆಯೋಜಿಸಿದೆ
ಖ್ಯಾತ ವಾಗ್ಮಿಗಳು, ಕನ್ನಡಪ್ರಭ.ಕಾಂ ನ ರಾಮಾಯಣ ಅವಲೋಕನ ಅಂಕಣಕಾರರಾದ ವಿದ್ವಾಂಸರಾದ ಡಾ.ಪಾವಗಡ ಪ್ರಕಾಶ್ ರಾವ್ ಅವರು ಮೊದಲ ಸಪ್ತಾಹದಲ್ಲಿ ರಾಮವಂಶ ಪರಿಚಯ (ಬ್ರಹ್ಮನಿಂದ ರಾಮನ ಜನನದ ವರೆಗೂ) ಉಪನ್ಯಾಸ ನೀಡಲಿದ್ದಾರೆ.
ಚಿಕ್ಕಲಸಂದ್ರ ಕೆ.ಎಸ್ ಆರ್ ಟಿಸಿ ಲೇಔಟ್ ನಲ್ಲಿರುವ ಮನೋರಂಜಿನಿ ಸಭಾಂಗಣದಲ್ಲಿ ಜು.02 ರಿಂದ ಜು.08 ವರೆಗೆ ಸಂಜೆ 6:30 ಯಿಂದ 8 ವರೆಗೆ ಉಪನ್ಯಾಸ ಕಾರ್ಯಕ್ರಮವಿರಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos