ರಾಜ್ಯ

ಹೆಂಡ ಕೊಳ್ಳಲು ಹಣ ನೀಡದಕ್ಕೆ ಹೆಂಡತಿಯನ್ನೇ ಇಟ್ಟಿಗೆಯಿಂದ ಜಜ್ಜಿ ಕೊಂದ ಪತಿ!

Vishwanath S
ಬೆಂಗಳೂರು: ಹೆಂಡ ಕೊಳ್ಳಲು 30 ರುಪಾಯಿ ಕೊಡಲಿಲ್ಲ ಎಂಬ ಕಾರಣಕ್ಕೆ ಇಟ್ಟಿಗೆಯಿಂದ ತಲೆಯನ್ನು ಜಜ್ಜಿ ಪತ್ನಿಯನ್ನೇ ಹತ್ಯೆ ಮಾಡಿರುವ ಘಟನೆ ನಗರದ ಸೋಲದೇವನಹಳ್ಳಿಯಲ್ಲಿ ನಡೆದಿದೆ. 
ಮಧ್ಯಪ್ರದೇಶ ಮೂಲದ ದಂಪತಿಗಳಾದ ಕಸ್ತೂರಿ ಮತ್ತು ರಾಜಾ ಸಿಂಗ್ ಚಿಕ್ಕಸಂದ್ರ ಲೇಔಟ್ ನಲ್ಲಿನ ನಿರ್ಮಾಣ ಹಂತದ ಅಪಾರ್ಟ್ ಮೆಂಟ್ ನಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. 
ರಾಜಾ ಸಿಂಗ್ ಕಳೆದ ಮೂರು ದಿನಗಳಿಂದ ಕೆಲಸಕ್ಕೆ ಹೋಗದಿದ್ದರಿಂದ ಮಧ್ಯ ಸೇವಿಸಲು 30 ರುಪಾಯಿ ನೀಡುವಂತೆ ಕೇಳಿದ್ದಾನೆ. ಆಗ ಪತ್ನಿ 20 ರುಪಾಯಿ ನೀಡಿದ್ದಕ್ಕೆ ಕೋಪಗೊಂಡ ರಾಜಾ ಸಿಂಗ್ ಪತ್ನಿ ಜೊತೆ ಜಗಳವಾಡಿ ನಂತರ ಅಲ್ಲೇ ಇದ್ದ ಇಟ್ಟಿಗೆಯನ್ನು ತೆಗೆದುಕೊಂಡು ಆಕೆಯ ತಲೆಯನ್ನು ಜಜ್ಜಿ ಹತ್ಯೆ ಮಾಡಿದ್ದಾನೆ. 
ಇದನ್ನು ಗಮನಿಸಿದ ಕಸ್ತೂರಿ ನಾದಿನಿ ರಾಜಾ ಸಿಂಗ್ ನನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಕಸ್ತೂರಿ ಮೃತಪಟ್ಟಿದ್ದು ಈ ಸಂಬಂಧ ಆರೋಪಿ ರಾಜಾ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.
SCROLL FOR NEXT