ಮೈಸೂರು: ಹಸೆಮಣೆ ಏರಬೇಕಿದ್ದ ವಧು ಪ್ರಿಯಕರನೊಡನೆ ಕಲ್ಯಾಣ ಮಂಟಪದಿಂದ ಪರಾರಿ! 
ರಾಜ್ಯ

ಮೈಸೂರು: ಹಸೆಮಣೆ ಏರಬೇಕಿದ್ದ ವಧು ಪ್ರಿಯಕರನೊಡನೆ ಕಲ್ಯಾಣ ಮಂಟಪದಿಂದ ಪರಾರಿ!

ಹಸೆಮಣೆ ಏರಬೇಕಾಗಿದ್ದ ವಧು ಕಲ್ಯಾಣ ಮಂಟಪದಿಂದ ತನ್ನ ಪ್ರಿಯಕರನೊಡನೆ ಸಿನಿಮೀಯ ಮಾದರಿಯಲ್ಲಿ ಪರಾರಿಯಾದ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.

ಮೈಸೂರು: ಹಸೆಮಣೆ ಏರಬೇಕಾಗಿದ್ದ ವಧು ಕಲ್ಯಾಣ ಮಂಟಪದಿಂದ ತನ್ನ ಪ್ರಿಯಕರನೊಡನೆ ಸಿನಿಮೀಯ ಮಾದರಿಯಲ್ಲಿ ಪರಾರಿಯಾದ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಶ್ರೀಕಂಠೇಶ್ವರ ಕಲ್ಯಾಣ ಮಂಟಪದಿಂದ ಮಧುಮಗಳು ಪರಾರಿಯಾಗಿದ್ದು ಎಚ್.ಡಿ ಕೋಟೆ ತಾಲೂಕಿನ ಹೊಸಹಳ್ಳಿ ಗ್ರಾಮದ ಕೃಷ್ಣ ನಾಯಕ್ ಮತ್ತು ತಾಯಮ್ಮ ಎಂಬುವವರ ಪುತ್ರಿ ಕಲ್ಯಾಣ ಮಂಟಪದಿಂದ ತಪ್ಪಿಸಿಕೊಂಡಿದ್ದಾಳೆ.
ತನ್ನ ಪ್ರಿಯಕರನೊಡನೆ ಆಕೆ ಹೊರಟು ಹೋಗಿದ್ದಾಳೆ ಎನ್ನಲಾಗಿದ್ದು  ಭಾನುವಾರ ನೆರವೇರಬೇಕಿದ್ದ ವಿವಾಹ ಕಾರ್ಯಕ್ಕೆ ಕೆಲ ಕ್ಷಣಗಳ ಮುನ್ನ ಈ ಘಟನೆ ನಡೆದಿದೆ.
ಎಚ್.ಡಿ.ಕೋಟೆ ಹೊಸಹಳ್ಳಿಯ ದಂಪತಿಯ ಪುತ್ರಿ ವಿವಾಹವನ್ನು ಮೈಸೂರು ತಾಲೂಕಿನ ಮಾರ್ಬಳ್ಳಿ ಗ್ರಾಮದ ನಾರಾಯಣ ಎನ್ನುವವನೊಂದಿಗೆ ನಿಶ್ಚಯಿಸಲಾಗಿತ್ತು.
ಮನೆಯವರು ಎಲ್ಲಿ ಹುಡುಕಿದರೂ ವಧು ಸಿಗದೆ ಹೋಗಿದ್ದು ವಧುವಿನ ಮನೆಯವರಿಗೆ ಆಕೆ ತನ್ನ ಪ್ರೀತಿಯ ವಿಚಾರ ತಿಳಿಸಿದ್ದಳು ಆದರೂ ಅವಳ ಪೋಷಕರು ಆಕೆಗೆ ಬಲವಂತದಿಂದ ಬೇರೆ ಮದುವೆ ಮಾಡ ಹೊರಟಿದ್ದರೆಂದು ತಿಳಿದುಬಂದಿದೆ.
ಮಗಳು ನಾಪತ್ತೆಯಾದ ಕಾರಣ ಯುವತಿಯ ಪೋಷಕರು ಕಂಗಾ;ಲಾಗಿದ್ದಾರೆ.
ಇದೇ ವೇಳೆ ವಧು ನಾಪತ್ತೆಯಾದ ಕಾರಣ ನಾರಾಯಣ್ ಪೋಷಕರು ಅವರ್ದೇ ಸಂಬಂಧದ ಬೇರೊಬ್ಬ ಯುವತಿಯೊಂದಿಗೆ ಆತನ ವಿವಾಹ ನೆರವೇರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT