ಕೊಡಗು : ಕಾಫಿನಾಡು ಕೊಡಗು ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದಲೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭಾಗಮಂಡಲ ಹಾಗೂ ತಲಕಾವೇರಿ ಜಲಾವೃತಗೊಂಡಿವೆ.
ಈ ಮಧ್ಯೆ ಅಯ್ಯನ್ ಗೇರಿಯಲ್ಲಿ ಬೋಟ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಭಾಗಮಂಡಲದಲ್ಲಿ ದೋಣಿ ವ್ಯವಸ್ಥೆ ಇಲ್ಲದೆ ಪ್ರವಾಸಿಗರು ಹಾಗೂ ಬೇರೆ ಕಡೆಗೆ ತೆರಳಬೇಕಾದವರು ತೀವ್ರ ತೊಂದರೆ ಎದುರಿಸುವಂತಾಗಿದೆ.