ಬೆಳಗಾವಿ: ಸೊಸೈಟಿಯಲ್ಲಿ ಕಳುವಾಗಿದ್ದ 1.1 ಕೋಟಿ ರೂ. ಮೌಲ್ಯದ ಆಭರಣ ವಶ, ಮೂವರ ಬಂಧನ 
ರಾಜ್ಯ

ಬೆಳಗಾವಿ: ಸೊಸೈಟಿಯಲ್ಲಿ ಕಳುವಾಗಿದ್ದ 1.1 ಕೋಟಿ ರೂ. ಮೌಲ್ಯದ ಆಭರಣ ವಶ, ಮೂವರ ಬಂಧನ

ಸ್ಥಳೀಯ ಸಹಕಾರ ಸಂಘದ ಖಜಾನೆಯಿಂದ 4 ಕೆಜಿ ಚಿನ್ನದ ಆಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿರುವ ಪೋಲೀಸರು 1.1 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ: ಸ್ಥಳೀಯ ಸಹಕಾರ ಸಂಘದ ಖಜಾನೆಯಿಂದ 4 ಕೆಜಿ ಚಿನ್ನದ ಆಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿರುವ ಬೆಳಗಾವಿ ಪೋಲೀಸರು 1.1 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಪೋಲೀಸರು ಕಳ್ಳರು ದೋಚಿದ್ದ ಎಲ್ಲಾ ಆಭರಣಗಳನ್ನು ಮರುವಶಪಡಿಸಿಕೊಂಡಿದ್ದಾರೆ
ಮಂಗೇಶ್ ಶಶಿಕಾಂತ್ ಶಿರೋದ್ಕರ್ (45), ಶ್ರೀ ಶೈಲ್ ಯಮನಪ್ಪ ತರಿಹಾಳ್ ( (35)  ಮತ್ತು ಮಾರುತಿ ಮಹಾಬಲೇಶ್ವರ ರಾಯ್ಕರ್ (45) ಬಂಧಿತ ಆರೋಪಿಗಳು.
ಈ ಮೂವರು ಕಲಿಕಾ ದೈವದ್ಯ ಸೌಹಾರ್ದ ಕೋಆಪರೇಟಿವ್  ಸೊಸೈಟಿಯ (ಕೆಡಿಎಸ್ಸಿಎಸ್) ಯಲ್ಲಿ ಕೆಲಸ ಮಾಡುತ್ತಿದ್ದರು.ಹಾಗೆಯೇ ತಾವು ಕೆಲಸ ಮಾಡುತ್ತಿದ್ದ ಸೊಸೈಟಿಯ ಚಿನ್ನಾಭರಣವನ್ನೇ ದೋಚುವ ಕೃತ್ಯ ನಡೆಸಿದ್ದರು.ಸೊಸೈಟಿಯು ಜನರಿಗೆ ಸಾಲವನ್ನು ನೀಡಿದ್ದು ಸಾಲದ ಭದ್ರತೆಗಾಗಿ ಚಿನ್ನವನ್ನು ಇರಿಸಿಕೊಂಡಿತ್ತು ಎನ್ನಲಾಗಿದೆ. ಸೊಸೈಟಿಯ ಮ್ಯಾನೇಜರ್ ಆಗಿದ್ದ ಶಿರೋದ್ಕರ್ ಈ ಕೃತ್ಯದ ಪ್ರಮುಖ ರೂವಾರಿಯಾಗಿದ್ದ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಒಪ್ಪಂದ ಬೆನ್ನಲ್ಲೇ ಹಾರ್ಮುಜ್‌ನಲ್ಲಿ ತೈಲ ಸಾಗಣೆ ಪುನರಾರಂಭ: ಲೆಬನಾನ್ ಮುಂದುವರೆದ ಉದ್ವಿಗ್ನತೆ, ಮಧ್ಯಪ್ರಾಚ್ಯ ಶಾಂತಿಗೆ ಕಂಟಕ..!

ವರ್ತನೆ ಬದಲಿಸಿಕೊಳ್ಳಿ, ಒಪ್ಪಂದ ಸಂಪೂರ್ಣವಾಗಿ ಪಾಲಿಸಬೇಕು: ಇರಾನ್‌ಗೆ JD ವ್ಯಾನ್ಸ್ ಎಚ್ಚರಿಕೆ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: 7ರಲ್ಲಿ 5 ಸ್ಥಾನ ಕಾಂಗ್ರೆಸ್ ಪಾಲು, ಬಿಜೆಪಿಗೆ 2, ಜೆಡಿಎಸ್‌ಗೆ ಅಡ್ಡ ಮತದಾನದ ಆಘಾತ

ಪರಿಷತ್ ಚುನಾವಣೆ: ಬಿಜೆಪಿಯ 3 ಶಾಸಕರಿಂದ ಅಡ್ಡಮತದಾನ, ಸಿಕ್ಕೇ ಸಿಗ್ತಾರೆ.. ಶಿಸ್ತುಕ್ರಮ ಗ್ಯಾರಂಟಿ: R Ashok

BJP-JDS ಅಡ್ಡ ಮತದಾನದಿಂದ Congress 5ನೇ ಅಭ್ಯರ್ಥಿ ಜಯ; ಇದು ಪ್ರಜಾಪ್ರಭುತ್ವದ ಗೆಲುವು: ಸುರ್ಜೇವಾಲಾ

SCROLL FOR NEXT