ಸಂಗ್ರಹ ಚಿತ್ರ 
ರಾಜ್ಯ

ಬಳ್ಳಾರಿ: ಪೇದೆ ಪತ್ನಿಯೊಡನೆ ಅಕ್ರಮ ಸಂಬಂಧ ಹೊಂದಿದ್ದ ಪಿಎಸ್‌ಐನಿಂದ ಕ್ವಾರ್ಟಸ್‌ಗೆ ಬೆಂಕಿ

ಪೇದೆಯೊಬ್ಬರ ಪತ್ನಿಯೊಡನೆ ಅಕ್ರಮ ಸಂಬಂಧ ಹೊಂದಿದ್ದ ಪಿಎಸ್‌ಐವೊಬ್ಬರು ಪೋಲೀಸ್ ಕ್ವಾರ್ಟಸ್‌ಗೆ ಬೆಂಕಿ ಹಚ್ಚಿರುವ ಘಟನೆ ಬೆಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ: ಪೇದೆಯೊಬ್ಬರ ಪತ್ನಿಯೊಡನೆ ಅಕ್ರಮ ಸಂಬಂಧ ಹೊಂದಿದ್ದ ಪಿಎಸ್‌ಐವೊಬ್ಬರು ಪೋಲೀಸ್ ಕ್ವಾರ್ಟಸ್‌ಗೆ ಬೆಂಕಿ ಹಚ್ಚಿರುವ ಘಟನೆ ಬೆಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ಪೋಲೀಸ್ ಇಲಾಖೆ ವೈರ್ ಲೆಸ್ ವಿಭಾಗದ ಪಿಎಸ್‌ಐ ಕಿರಣ್ ಸಾಮ್ರಾಟ್ ಪೇದೆಯೊಬ್ಬರ ಪತ್ನಿಯೊಂದಿಗೆ  5 ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು.ಪೇದೆ ಕೆಲಸಕ್ಕೆ ತೆರಳಿದಾಗ ಅವನ ಪತ್ನಿ ಕಿರಣ್ ಅವರ ಮನೆಗೆ ಆಗಮಿಸುತ್ತಿದ್ದರು. 
ಆದರೆ ಇತ್ತೀಚೆಗೆ ಇವರ ನಡುವೆ ಸಣ್ಣ ಪ್ರಮಾಣದ ಮನಸ್ತಾಪ ಕಾಣಿಸಿತ್ತು.ಇದರಿಂದಾಗಿ ಪೇದೆಯ ಪತ್ನಿಯನ್ನು ತನ್ನ ಬಳಿಯೇ ಇರಿಸಿಕೊಂಡಿದ್ದ ಪಿಎಸ್ಐ  ಎರಡು ದಿನಗಳಿಂದ ಆಕೆಯನ್ನು ಸಮಾಧಾನಪಡಿಸಲು ಯತ್ನಿಸಿದ್ದರು. ಹೀಗೆ ಸಮಾಧಾನ ಪಡಿಸುವ ವೇಳೆ  ಪಿಎಸ್‌ಐ ಆಕೆಯೊಂದಿಗೆ ಮದ್ಯ ಸೇವಿಸಿದ್ದಾರೆ, ಸಿಗರೇಟ್ ಸೇದಿ ಮನೆ ತುಂಬಾ ಎಸೆದಿದ್ದಾರೆ.
ಆಗ ಮತ್ತೆ ಜಗಳ ತಾರಕಕ್ಕೇರಿದ್ದು ಅದು ವಿಕೋಪಕ್ಕೆ ತಿರುಗಿ ಕ್ವಾರ್ಟರ್ಸ್‌ಗೆ ಬೆಂಕಿ ಹಚ್ಚುವ ಮಟ್ಟ ತಲುಪಿದೆ. ಬೆಂಕಿಗೆ ಕ್ವಾರ್ಟರ್ಸ್ ನಲ್ಲಿದ್ದ ಪೀಠೋಪಕರಣಗಳು ಆಹುತಿಯಾಗಿದೆ. ಇದನ್ನು ಗಮನಿಸಿದ ಬೇರೆ ಪೋಲೀಸ್ ಸಿಬ್ಬಂದಿಗಳು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪಿಸಿದ್ದಾರೆ. ಅವರು ಮೇಲಧಿಕಾರಿಗಳಿಗೆ ಕಿರಣ್‌ ವಿರುದ್ದ ದೂರನ್ನೂ ಕೊಟ್ಟಿದ್ದಾರೆ.
ಇನ್ನು ಕಿರಣ್ ಸಹ ವಿವಾಹಿತನಾಗಿದ್ದು ಘಟನೆ ನಡೆದ ವೇಳೆ ಆತನ ಪತ್ನಿ ಮನೆಯಲ್ಲಿರಲಿಲ್ಲ ಎನ್ನಲಾಗಿದೆ.
ಸಧ್ಯ ಪೇದೆಯ ಪತ್ನಿ ಹಾಗೂ ಕಿರಣ್ ಸಾಮ್ರಾಟ್‌ ಅವರುಗಳನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಿರಣ್ ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಸರ್ಕಾರಿ ಸ್ವತ್ತು ಹಾನಿ ಮಾಡಿದ ಪ್ರಕರಣದಲ್ಲಿ ಬಳ್ಳಾರಿ ಗಾಂಧಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT