ಸಂಗ್ರಹ ಚಿತ್ರ 
ರಾಜ್ಯ

ಬಳ್ಳಾರಿ: ಪೇದೆ ಪತ್ನಿಯೊಡನೆ ಅಕ್ರಮ ಸಂಬಂಧ ಹೊಂದಿದ್ದ ಪಿಎಸ್‌ಐನಿಂದ ಕ್ವಾರ್ಟಸ್‌ಗೆ ಬೆಂಕಿ

ಪೇದೆಯೊಬ್ಬರ ಪತ್ನಿಯೊಡನೆ ಅಕ್ರಮ ಸಂಬಂಧ ಹೊಂದಿದ್ದ ಪಿಎಸ್‌ಐವೊಬ್ಬರು ಪೋಲೀಸ್ ಕ್ವಾರ್ಟಸ್‌ಗೆ ಬೆಂಕಿ ಹಚ್ಚಿರುವ ಘಟನೆ ಬೆಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ: ಪೇದೆಯೊಬ್ಬರ ಪತ್ನಿಯೊಡನೆ ಅಕ್ರಮ ಸಂಬಂಧ ಹೊಂದಿದ್ದ ಪಿಎಸ್‌ಐವೊಬ್ಬರು ಪೋಲೀಸ್ ಕ್ವಾರ್ಟಸ್‌ಗೆ ಬೆಂಕಿ ಹಚ್ಚಿರುವ ಘಟನೆ ಬೆಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ಪೋಲೀಸ್ ಇಲಾಖೆ ವೈರ್ ಲೆಸ್ ವಿಭಾಗದ ಪಿಎಸ್‌ಐ ಕಿರಣ್ ಸಾಮ್ರಾಟ್ ಪೇದೆಯೊಬ್ಬರ ಪತ್ನಿಯೊಂದಿಗೆ  5 ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು.ಪೇದೆ ಕೆಲಸಕ್ಕೆ ತೆರಳಿದಾಗ ಅವನ ಪತ್ನಿ ಕಿರಣ್ ಅವರ ಮನೆಗೆ ಆಗಮಿಸುತ್ತಿದ್ದರು. 
ಆದರೆ ಇತ್ತೀಚೆಗೆ ಇವರ ನಡುವೆ ಸಣ್ಣ ಪ್ರಮಾಣದ ಮನಸ್ತಾಪ ಕಾಣಿಸಿತ್ತು.ಇದರಿಂದಾಗಿ ಪೇದೆಯ ಪತ್ನಿಯನ್ನು ತನ್ನ ಬಳಿಯೇ ಇರಿಸಿಕೊಂಡಿದ್ದ ಪಿಎಸ್ಐ  ಎರಡು ದಿನಗಳಿಂದ ಆಕೆಯನ್ನು ಸಮಾಧಾನಪಡಿಸಲು ಯತ್ನಿಸಿದ್ದರು. ಹೀಗೆ ಸಮಾಧಾನ ಪಡಿಸುವ ವೇಳೆ  ಪಿಎಸ್‌ಐ ಆಕೆಯೊಂದಿಗೆ ಮದ್ಯ ಸೇವಿಸಿದ್ದಾರೆ, ಸಿಗರೇಟ್ ಸೇದಿ ಮನೆ ತುಂಬಾ ಎಸೆದಿದ್ದಾರೆ.
ಆಗ ಮತ್ತೆ ಜಗಳ ತಾರಕಕ್ಕೇರಿದ್ದು ಅದು ವಿಕೋಪಕ್ಕೆ ತಿರುಗಿ ಕ್ವಾರ್ಟರ್ಸ್‌ಗೆ ಬೆಂಕಿ ಹಚ್ಚುವ ಮಟ್ಟ ತಲುಪಿದೆ. ಬೆಂಕಿಗೆ ಕ್ವಾರ್ಟರ್ಸ್ ನಲ್ಲಿದ್ದ ಪೀಠೋಪಕರಣಗಳು ಆಹುತಿಯಾಗಿದೆ. ಇದನ್ನು ಗಮನಿಸಿದ ಬೇರೆ ಪೋಲೀಸ್ ಸಿಬ್ಬಂದಿಗಳು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪಿಸಿದ್ದಾರೆ. ಅವರು ಮೇಲಧಿಕಾರಿಗಳಿಗೆ ಕಿರಣ್‌ ವಿರುದ್ದ ದೂರನ್ನೂ ಕೊಟ್ಟಿದ್ದಾರೆ.
ಇನ್ನು ಕಿರಣ್ ಸಹ ವಿವಾಹಿತನಾಗಿದ್ದು ಘಟನೆ ನಡೆದ ವೇಳೆ ಆತನ ಪತ್ನಿ ಮನೆಯಲ್ಲಿರಲಿಲ್ಲ ಎನ್ನಲಾಗಿದೆ.
ಸಧ್ಯ ಪೇದೆಯ ಪತ್ನಿ ಹಾಗೂ ಕಿರಣ್ ಸಾಮ್ರಾಟ್‌ ಅವರುಗಳನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಿರಣ್ ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಸರ್ಕಾರಿ ಸ್ವತ್ತು ಹಾನಿ ಮಾಡಿದ ಪ್ರಕರಣದಲ್ಲಿ ಬಳ್ಳಾರಿ ಗಾಂಧಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT