ಮಲ್ಪೆ ಬೀಚ್ 
ರಾಜ್ಯ

ಉಡುಪಿ: ದೈತ್ಯ ಅಲೆಯಲ್ಲಿ ಕೊಚ್ಚಿಹೋದ ಯುವಕರು, ಒಬ್ಬನ ಮೃತದೇಹ ಪತ್ತೆ

ಮಲ್ಪೆ ಪಡುಕೆರೆ ಬೀಚ್ ಬಳಿ ದೈತ್ಯ ನೀರಿನ ಅಲೆಗಳು ಮೀನುಗಾರಿಕೆ ದೋಣಿಗೆ ಅಪ್ಪಳಿಸಿದ್ದರಿಂದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಉಡುಪಿ: ಮಲ್ಪೆ ಪಡುಕೆರೆ ಬೀಚ್ ಬಳಿ  ದೈತ್ಯ ನೀರಿನ ಅಲೆಗಳು ಮೀನುಗಾರಿಕೆ ದೋಣಿಗೆ ಅಪ್ಪಳಿಸಿದ್ದರಿಂದ  ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಮೃತರನ್ನು ನಿತೀಶ್ (29)  ಮತ್ತು ನಿಶಾಂತ್ (22)  ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ.  ಮೀನುಗಾರಿಕೆಗೆ ಹೋಗಿದ್ದ ಐವರು ತೀರ ಪ್ರದೇಶಕ್ಕೆ ವಾಪಾಸ್ ಬರುತ್ತಿರುವಾಗ ಈ ದುರಂತ ಉಂಟಾಗಿದ್ದು,  ಐವರ ಪೈಕಿ ಮೂವರು ಸುರಕ್ಷಿತವಾಗಿದ್ದಾರೆ.
ನಿತೀಶ್  ಮೃತದೇಹವನ್ನು  ಪತ್ತೆಯಾಗಿದ್ದು,   ಉಡುಪಿಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.  ನಿಶಾಂತ್ ಮೃತದೇಹ ಇನ್ನೂ ಪತ್ತೆಯಾಗಿಲ್ಲ.  ಸ್ಥಳೀಯ ಜನರು,  ಅಗ್ನಿಶಾಮಕ ಸಿಬ್ಬಂದಿ ಹಾಗೂ  ಭದ್ರತಾ ಸಿಬ್ಬಂದಿ ನಾಪತ್ತೆಯಾಗಿರುವ ವ್ಯಕ್ತಿಯ ಹುಡುಕಾಟ ನಡೆಸುತ್ತಿದ್ದಾರೆ.
ನಿತೀಶ್  ಉಡುಪಿಯ ಪಿತ್ರೊಡಿಯ ನಿವಾಸಿಯಾಗಿದ್ದು, ಕಳೆದ ಏಳು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಈ ಸುದ್ದಿಕೇಳಿ  ಕುಟುಂಬ ಸದಸ್ಯರ ರೋಧನ ಮುಗಿಲು ಮಟ್ಟಿತು.  ಸಮುದ್ರ ತೀರ ಪ್ರದೇಶದಿಂದ ಕೇವಲ 200 ಮೀಟರ್ ದೂರದಲ್ಲಿ ದೋಣಿ ಇರುವಂತೆಯೇ ಈ ದುರ್ಘಟನೆ ನಡೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

SCROLL FOR NEXT