ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಬ್ಯಾಟರಿ ಚಾಲಿತ ಗಾಡ್, ಬಾಟಲಿ ಪುಡಿ ಮಾಡುವ ಯಂತ್ರ ಸೇವೆಗೆ ಚಾಲನೆ 
ರಾಜ್ಯ

ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಬ್ಯಾಟರಿ ಚಾಲಿತ ಗಾಡ್, ಬಾಟಲಿ ಪುಡಿ ಮಾಡುವ ಯಂತ್ರ ಸೇವೆಗೆ ಚಾಲನೆ

ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಹಿರಿಯ ನಾಗರಿಕರು ಹಾಗು ಅಂಗವಿಕಲರಿಗಾಗಿ ವಿಶೇಷ ಬ್ಯಾಟರಿ ಚಾಲಿತ ಗಾಡಿಗಳನ್ನು ವ್ಯವಸ್ಥೆ ಮಾಡಲಾಗಿದೆ

ಬೆಂಗಳೂರು: ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಹಿರಿಯ ನಾಗರಿಕರು ಹಾಗು ಅಂಗವಿಕಲರಿಗಾಗಿ ವಿಶೇಷ ಬ್ಯಾಟರಿ ಚಾಲಿತ ಗಾಡಿಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು  ವಿಭಾಗೀಯ ರೈಲ್ವೆ ಅಧಿಕಾರಿ ಆರ್.ಎಸ್. ಸಕ್ಸೇನಾ ಹೇಳಿದ್ದಾರೆ. ಈ ಸೌಕರ್ಯ ಇದಾಗಲೇ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಇದಾಗಲೇ ಲಭ್ಯವಿದೆ.
ಪರಿಸರ ದಿನಾಚರಣೆ ಭಾಗವಾಗಿ ಕೆಎಸ್ಆರ್ ನಿಲ್ದಾಣದ ಒಂದು ಪ್ಲಾಟ್ ಫಾರಮ್ ನಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಪುಡಿ ಮಾಡುವ ಯಂತ್ರವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಸಕ್ಸೇನಾ  ಕಳೆದ ತಿಂಗಳಿನಿಂದ ಬೆಂಗಳೂರು ವಿಭಾಗದಲ್ಲಿ ಇಂತಹಾ ನಾಲ್ಕು ಯಂತ್ರಗಳು ಕಾರ್ಯಾಚರಿಸುತ್ತಿದೆ ಎಂದಿದ್ದಾರೆ.
8105777772 ಈ ಸಂಖ್ಯೆಗೆ ಕರೆ ಮಾಡುವ ಮೂಲಕ ದಿನ ಪೂರ್ತಿ ಈ ಸೇವೆಯನ್ನು ಯಾರೊಬ್ಬರೂ ಪಡೆಯಬಹುದಾಗಿದ್ದು ಬೆಂಗಳೂರು ಸಿಟಿ ನಿಲ್ದಾಣದಲ್ಲಿ ಇಂತಹಾ ಏಳು ಗಾಡಿಗಳು ಕಾರ್ಯಾಚರಿಸುತ್ತಿದೆ. ಈ ಸೇವೆಗಾಗಿ ಸಾರ್ವಜನಿಕರು ರೈಡ್ ಒಂದಕ್ಕೆ 20 ರೂ. ನೀಡಬೇಕಾಗುತ್ತದೆ. ಈ ಗಾಡಿಯೊಂದಕ್ಕೆ ಒಟ್ಟು ವೆಚ್ಚ 4.5 ಲಕ್ಷ ರೂ. ತಗುಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದರಂತೆಯೇ ಬಾಟಲ್ ಪುಡಿ ಮಾಡುವ ಯಂತ್ರವನ್ನು ಬೆಂಗಳೂರಿನ ಕಂಟೋನ್ಮೆಂಟ್, ಕೆಆರ್ ಪುರಂ, ಯಶವಂತಪುರದಲ್ಲಿ ಸ್ಥಾಪಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT