ಸಂಗ್ರಹ ಚಿತ್ರ 
ರಾಜ್ಯ

ರೂ.3ಕ್ಕೆ ಕುಸಿದ ಟೊಮೆಟೋ ಬೆಲೆ: ಬೆಳೆಗಾರರಿಗೆ ಸಿಗದ ಪ್ರೋತ್ಸಾಹ

ರಾಜ್ಯದಾದ್ಯಂತ ಮುಂಗಾರು ಪ್ರವೇಶ ಮಾಡಿರುವ ಹಿನ್ನಲೆಯಲ್ಲಿ ಭಾರೀ ಮಳೆ ಒಂದೆಡೆ ರೈತರಲ್ಲಿ ಹರ್ಷವನ್ನುಂಟು ಮಾಡಿದ್ದಾರೆ, ಮತ್ತೊಂದೆಡೆ ಟೊಮೆಟೋ ಬೆಳಗಾರರಿಗೆ ಮಾತ್ರ ಪ್ರೋತ್ಸಾಹ ಸಿಗದೆ ಸಮಸ್ಯೆ ಎದುರಿಸುವಂತಾಗಿದೆ...

ಕೋಲಾರ: ರಾಜ್ಯದಾದ್ಯಂತ ಮುಂಗಾರು ಪ್ರವೇಶ ಮಾಡಿರುವ ಹಿನ್ನಲೆಯಲ್ಲಿ ಭಾರೀ ಮಳೆ ಒಂದೆಡೆ ರೈತರಲ್ಲಿ ಹರ್ಷವನ್ನುಂಟು ಮಾಡಿದ್ದಾರೆ, ಮತ್ತೊಂದೆಡೆ ಟೊಮೆಟೋ ಬೆಳಗಾರರಿಗೆ ಮಾತ್ರ ಪ್ರೋತ್ಸಾಹ ಸಿಗದೆ ಸಮಸ್ಯೆ ಎದುರಿಸುವಂತಾಗಿದೆ. 
ಟೊಮೆಟೋ ಬೆಲೆಯಲ್ಲಿ ಭಾರೀ ಕುಸಿತ ಉಂಟಾಗಿದ್ದು, ರೂ.3ಕ್ಕೆ ಟೊಮೆಟೋ ಬೆಲೆ ಇಳಿದಿದೆ. ಇನ್ನು 2-3 ದಿನಗಳಲ್ಲಿ ಬೆಲೆಯಲ್ಲಿ ಮತ್ತಷ್ಟು ಕುಸಿತವಾಗಲಿದ್ದು, ರೂ.2 ಅಥವಾ ರೂ.1ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
ದಕ್ಷಿಣ ಭಾರತದಲ್ಲಿಯೇ ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ರಾಯಚೂರು, ತಿಪಟೂರು ಮತ್ತು ಬಳ್ಳಾರಿ ಅತೀ ಹೆಚ್ಚು ಟೊಮೆಟೋ ಬೆಳೆಯುವ ಜಿಲ್ಲೆಗಳಾಗಿವೆ. ಒಮ್ಮೆ ಟೊಮೆಟೋ ಬೆಳೆಯನ್ನು ಹಾಕಿದರೆ, ಬೆಳೆ ಬೆಳೆಯಲು ಒಂದೂವರೆ ತಿಂಗಳು ಬೇಕಾಗುತ್ತವೆ. ಏಪ್ರಿಲ್ ತಿಂಗಳಿನಲ್ಲಿ ಉತ್ತಮ ಮಳೆಯಾಗಿದ್ದರಿಂದಾಗಿ, ಬೆಳೆಗಳು ಉತ್ತಮವಾಗಿ ಬಂದಿವೆ. ಇತರೆ ರಾಜ್ಯಗಳಲ್ಲೂ ಉತ್ತಮ ಮಳೆಯಾಗಿರುವುದರಿಂದಾಗಿ ರಾಜ್ಯ ಟೊಮೆಟೋಗಳಿಗೆ ಇರುತ್ತಿದ್ದ ಬೇಡಿಕೆ ಕಡಿಮೆಯಾಗಿರುವುದೇ ಟೊಮೆಟೋ ಬೆಲೆ ಕುಸಿತಕ್ಕೆ ಕಾರಣವಾಗಿದೆ. 
ಕೋಲಾರದ ಟೊಮೆಟೋ ಬೆಳೆಗಾರ ಹರೀಶ್ ಅವರು ಮಾತನಾಡಿ, ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ, ಛತ್ತೀಸ್ಗಢ ರಾಜ್ಯಗಳು ಅತ್ಯಂತ ಹೆಚ್ಚಿನ ತಾಪಮಾನವನ್ನು ಹೊಂದಿರುವ ರಾಜ್ಯಗಳಾಗಿದ್ದು, ಈ ರಾಜ್ಯಗಳಲ್ಲಿ ಟೊಮೆಟೋ ಬೆಳೆಯುವುದು ಕಷ್ಟಕರವಾಗಿರುತ್ತದೆ. ಹೀಗಾಗಿ ಈ ರಾಜ್ಯಗಳು ಕರ್ನಾಟಕದಿಂದಲೇ ಟೊಮೆಟೋಗಳನ್ನು ಖರೀದಿ ಮಾಡುತ್ತಿತ್ತು. ಆದರೆ, ಪ್ರಸಕ್ತ ವರ್ಷ ಈ ರಾಜ್ಯಗಳ ಉಷ್ಣಾಂಶ 38 ಡಿಗ್ರಿಗಿಂತಲೂ ಹೆಚ್ಚು ಹೋಗಿಲ್ಲ. ಹೀಗಾಗಿ ತಮ್ಮ ತಮ್ಮ ರಾಜ್ಯಗಳಲ್ಲಿಯೇ ಟೊಮೆಟೋ ಬೆಳೆಗಳನ್ನು ಬೆಳೆದುಕೊಳ್ಳುತ್ತಿರುವುದಿಂದ ರಾಜ್ಯದ ಟೊಮೆಟೋಗಳಿಗೆ ಇರುತ್ತಿದ್ದ ಬೇಡಿಕೆಗಳು ಕಡಿಮೆಯಾಗಿವೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ರೈತರು ತಮ್ಮ ಬೆಳೆಗಳಿಗೆ ಹಾಕಿದ್ದ ಹಣ ಕೂಡ ಬರುತ್ತಿಲ್ಲ. ಇಲ್ಲಿನ ಟೊಮೆಟೋ ಬೆಳೆಗಾರರು ಒಂದು ಎಕರೆ ಬೆಳೆಗೆ ರೂ.50,000 ದಿಂದ 70,000ದವರೆಗೂ ಖರ್ಚು ಮಾಡಿದ್ದಾರೆಂದು ಹೇಳಿದ್ದಾರೆ. 
ಶ್ರೀನಿವಾಸಪುರ ತಾಲೂಕು ರೈತ ಚೌಡ ರೆಡ್ಡಿಯವರು ಮಾತನಾಡಿ, ನಾಲ್ಕೂವರೆ ತಿಂಗಳುಗಳ ಕಾಲ ಬೆಳೆಗಳನ್ನು ಬೆಳೆದಿದ್ದು, ಪ್ರತೀ ಎಕರೆಗೆ ರೂ2.5 ಲಕ್ಷ ಖರ್ಚು ಮಾಡಿದ್ದೇವೆ. ಪ್ರತೀ ಎಕರೆಯಲ್ಲಿಯೂ 30 ಟನ್ ಗಳನ್ನು ಟೊಮೆಟೋಗಳನ್ನು ಬೆಳೆಯಲಾಗಿದೆ. ಈ ವರ್ಷ ಪ್ರತೀ ಎಕರೆಯಲ್ಲಿಯೂ ರೂ.50,000 ನಷ್ಟವುಂಟಾಗಿದೆ. ಉತ್ತರ ಭಾರತದಲ್ಲಿ ಟೊಮೆಟೋಗೆ ಯಾವುದೇ ರೀತಿಯ ಬೇಡಿಕೆಗಳು ಕಂಡು ಬಂದಿಲ್ಲ ಎಂದು ಹೇಳಿದ್ದಾರೆ. 
ಎಪಿಎಂಸಿ ಸೂಪರಿಂಟೆಂಡೆಂಟ್ ಮುನಿರಾಜು ಅವರು ಮಾತನಾಡಿ, ಕೋಲಾರದಲ್ಲಿ ಅತ್ಯಂತ ದೊಡ್ಡ ಟೊಮೆಟೋ ಮಾರುಕಟ್ಟೆಯಿದೆ. ಪ್ರಸಕ್ತ ವರ್ಷ ಟೊಮೆಟೋ ಬೆಲೆಯಲ್ಲಿ ಭಾರೀ ಕುಸಿತವುಂಟಾಗಿದೆ. ಒಂದು ಕೆಜಿ ಟೊಮೆಟೋ ಬೆಲೆ ರೂ.3ಕ್ಕೆ ಕುಸಿದಿದೆ. ಕಳೆದ ವರ್ಷ ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ, ಛತ್ತೀಸ್ಗಢ ಮತ್ತು ಇತರೆ ರಾಜ್ಯಗಳಿಗೆ ಟೊಮೆಟೋಗಳನ್ನು ಮಾರಾಟ ಮಾಡಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಇತರೆ ರಾಜ್ಯಗಳಲ್ಲೂ ಉತ್ತಮ ಮಳೆಯಾಗಿರುವುದರಿಂದ ರಾಜ್ಯ ಟೊಮೆಟೋಗಳನ್ನು ಖರೀದಿ ಮಾಡುತ್ತಿಲ್ಲ. ಪ್ರಸ್ತುತ ನಮ್ಮ ರಾಜ್ಯದಲ್ಲಿ ಭಾರೀ ಪ್ರಮಾಣ ಟೊಮೆಟೋಗಳಿದ್ದು, ಹೀಗಾಗಿಯೇ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಬೇಡಿಕೆ ಕಡಿಮೆಯಾಗಿರುವುದರಿಂದ ಬೆಲೆ ಕುಸಿದಿದೆ ಎಂದು ತಿಳಿಸಿದ್ದಾರೆ. 
ಹಾಪ್'ಕಾಮ್ಸ್ ನಿರ್ವಾಹಕ ಎಸ್'ಹೆಚ್ ಕೇಶವ್ ಅವರು ಮಾತನಾಡಿ, ಬೇಸಿಗೆ ಕಾಲದಲ್ಲಿ ಮಳೆ ಕಡಿಮೆ ಹಾಗೂ ನೀರು ಕಡಿಮೆಯಿರುವುದರಿಂದಾಗಿ ಟೊಮೆಟೋಗಳ ಬೇಡಿಕೆ ಹೆಚ್ಚಾಗಿರುತ್ತದೆ. ಜೂನ್ ತಿಂಗಳಲ್ಲಿ ಬೆಲೆ ಏರಿಕೆಯಾಗಿರುತ್ತಿತ್ತು. ಆದರೆ, ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಬೇಡಿಕೆ ಕಡಿಮೆಯಾಗಿದೆ. ಪ್ರತೀ ದಿನ ಬೆಂಗಳೂರಿಗೆ 500 ಟನ್ ಗಳ ಟೊಮೆಟೋಗಳನ್ನು ನೀಡಲಾಗುತ್ತದೆ. ಆದರೆ, ಈ ವರ್ಷ ನಗರದ ಮಾರುಕಟ್ಟೆಗಳಿಗೆ 1,000ಟನ್ ಗಳಷ್ಟು ನೀಡಲಾಗಿದೆ. ಟೊಮೆಟೋಗಳು ಹೆಚ್ಚು ಮಾರಾಟವಾಗದ ಕಾರಣ, ಬೆಲೆ ಕುಸಿತ ಕಂಡಿದೆ ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT