ಸಿಎಂ ಭೇಟಿ ಮಾಡಿದ ದಾವಣಗೆರೆ ಮಹಿಳೆ 
ರಾಜ್ಯ

ಜನತಾ ದರ್ಶನ: ಅಪಘಾತದಲ್ಲಿ ಕೈ ಕತ್ತರಿಸಿ ಹೋಗಿದ್ದ ಮಹಿಳೆಗೆ ಉದ್ಯೋಗದ ನೆರವು ನೀಡಿದ ಸಿಎಂ

ದಾವಣಗೆರೆಯಿಂದ ಬಂದಿದ್ದ ಶೈಲಾ ಎಂಬಾಕೆಯ ಬಲಕೈ ಕತ್ತಿರಿಸಿದ್ದು, ಮತ್ತೊಂದು ಕೈಯ್ಯಲ್ಲಿ ಧೈರ್ಯವಾಗಿ ಮಗುವನ್ನು ಎತ್ತಿಕೊಂಡು...

ಬೆಂಗಳೂರು: ಮುಖ್ಯಮಂತ್ರಿ ಅವರ ಜೆಪಿನಗರದ ಮನೆಯಲ್ಲಿ ನಡೆದ ಜನತಾ ದರ್ಶನದಲ್ಲಿ ದಾವಣೆಗೆರೆ ಮಹಿಳೆಯೊಬ್ಬರು ಕುಮಾರ ಸ್ವಾಮಿ ಅವರನ್ನು ಭೇಟಿ ಮಾಡಿದ ನಂತರ ಆಕೆಯ ಸಂತೋಷ ಇಮ್ಮಡಿಯಾಗಿದೆ.
ದಾವಣಗೆರೆಯಿಂದ ಬಂದಿದ್ದ ಶೈಲಾ ಎಂಬಾಕೆಯ ಬಲಕೈ ಕತ್ತಿರಿಸಿದ್ದು, ಮತ್ತೊಂದು ಕೈಯ್ಯಲ್ಲಿ ಧೈರ್ಯವಾಗಿ ಮಗುವನ್ನು ಎತ್ತಿಕೊಂಡು ಬಂದು ಸಿಎಂ ಭೇಟಿ ಮಾಡಿದರು.
ಇಲ್ಲಿಗೆ ಏಕೆ ಬಂದಿರುವುದಾಗಿ ಆಕೆಯನ್ನು ಸಿಎಂ ಪ್ರಶ್ನಿಸಿದರು. ಅದಕ್ಕುತ್ತರಿಸಿದ ಆಕೆ, ರಸ್ತೆ ಅಪಘಾತದಲ್ಲಿ ತಾನು ಬಲ ಕೈ ಕಳೆದುಕೊಂಡಿದ್ದು, ತಾನು ಟಾಪ್ ರೈಟಿಂಗ್ ಕಲಿತಿರುವುದಾಗಿ ತಿಳಿಸಿದ್ದಾರೆ, ತನಗೆ ಎಲ್ಲೂ ಕೆಲಸ ಸಿಗುತ್ತಿಲ್ಲ, ಜೊತೆಗೆ ಸರ್ಕಾರದ ಅಂಗವಿಕಲ ಪಿಂಚಣಿಯೂ ಬರುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ನಂತರ ಆಕೆಯನ್ನು ವಿಧಾನ ಸೌಧಕ್ಕೆ ಬರುವಂತೆ ಸಿಎಂ ಕುಮಾರ ಸ್ವಾಮಿ ಹೇಳಿದ್ದಾರೆ. ಜೊತೆಗೆ ದಾವಣಗೆರೆಯ ಅಧಿಕಾರಿಗಳಿಗೆ ಕರೆ ಮಾಡಿ  ಆಕೆಗೆ ತಾತ್ಕಾಲಿಕ ನೌಕರಿ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಹಾಗೂ ಆಕೆಗೆ ಅಂಗವಿಕಲರ ಪಿಂಚಣಿ ನೀಡುವಂತೆಯೂ ಸೂಚಿಸಿದ್ದಾರೆ.
ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡಲು ವ್ಯವಸ್ಥೆಯಲ್ಲಿ ನಮಗೆ ಹಲವು ಅವಕಾಶಗಳಿವೆ, ಅಸಂಘಟನಾತ್ಮಕ ವಲಯದಲ್ಲಿಯೂ ಕೆಲಸದ ಅವಕಾಶಗಳಿವೆ, ನೀತಿ ನಿಯಮಗಳನ್ನು ವಿಸ್ತರಿಸಲು ಸರ್ಕಾರ ಸಿದ್ಧವಿರಬೇಕು. ರಾಜ್ಯದಲ್ಲಿ ಹಲವು ಮಂದಿ ಸದ್ದಿಲ್ಲದೇ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ, ಅಂತಹ ಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT