ಎಚ್.ಆಂಜನೇಯ 
ರಾಜ್ಯ

ಭಾರತ ಮಕ್ಕಳನ್ನು ಹುಟ್ಟಿಸುವುದರಲ್ಲಿ ನಂಬರ್ ಒನ್: ಮಾಜಿ ಸಚಿವ ಎಚ್.ಆಂಜನೇಯ

"ನಮ್ಮ ದೇಶದಲ್ಲಿ ಜಾತಿ, ಧರ್ಮದ ಜಗಳ ನಿಂತಿಲ್ಲ. ಸಮಾನತೆ ಇಲ್ಲ. ಆದರೆ ಮಕ್ಕಳನ್ನು ಹುಟ್ಟಿಸುವುದರಲ್ಲಿ ನಂಬರ್ ಒನ್" ಮಾಜಿ ಸಚಿವ ಆಂಜನೇಯ ಹೇಳಿದ್ದಾರೆ.

ಕೊಪ್ಪಳ: "ನಮ್ಮ ದೇಶದಲ್ಲಿ ಜಾತಿ, ಧರ್ಮದ ಜಗಳ ನಿಂತಿಲ್ಲ. ಸಮಾನತೆ ಇಲ್ಲ. ಆದರೆ ಮಕ್ಕಳನ್ನು ಹುಟ್ಟಿಸುವುದರಲ್ಲಿ ನಂಬರ್ ಒನ್" ಮಾಜಿ ಸಚಿವ ಆಂಜನೇಯ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ನಡೆದ ದೇವದಾಸಿ ತಾಯಂದಿರ ಮಕ್ಕಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಆಂಜನೇಯ ಮಕ್ಕಳನ್ನು ಹುಟ್ಟಿಸಲು ಭಾರತ ನಂಬರ್ ಒನ್, ಇದಕ್ಕೆ ಯಾವ ಅಡೆ ತಡೆ ಇಲ್ಲ. ಈ ವಿಷಯದಲ್ಲಿ ಯಾರಾದರೂ ಸ್ಪರ್ಧೆ ಇಟ್ಟರೆ ನಮ್ಮವರು ಗೆಲ್ಲುವುದು ಖಚಿತ ಎಂದಿದ್ದಾರೆ.
"ನನಗೆ ಎರಡು ಮಕ್ಕಳು. ಇಬ್ಬರೂ ಹೆಣ್ಣು ಮಕ್ಕಳು.ನನ್ನ ಅಪ್ಪ ಕೂಡ ಇನ್ನೊಂದು ಮಗು ಬೇಕು ಅಂದರು. ಆದರೆ ನಾನು ಒಪ್ಪಲಿಲ್ಲ. ನೀವೂ ಸಹ ಮಕ್ಕಳ ಜನನಕ್ಕೆ ಬ್ರೇಕ್ ಹಾಕಿ." ನವ ಜೋಡಿಗಳಿಗೆ ಮಾಜಿ ಸಚಿವರು ಸಲಹೆ ಮಾಡಿದ್ದಾರೆ.
"ಕಾಯಕವೇ ಕೈಲಾಸ ಎನ್ನುವ ಬಸವಣ್ಣನ ತತ್ವ ಪಾಲಿಸಿ. ದೇವರನ್ನು ಹೆಚ್ಚು ಪೂಜೆ ಮಾಡಬೇಡಿ. ಇಷ್ಟು ದಿನ ಪೂಜೆ ಮಾಡಿ ಹಾಳಾಗಿದ್ದು ಸಾಕು. ಬೇರೆಯವರೆಲ್ಲಾ ಹೋಳಿಗೆ ಪೂಜೆ ಮಾಡಿಸಿಕೊಂಡು ಸುಖವಾಗಿದ್ದಾರೆ.ನೀವು ಮಾತ್ರ ಕುರಿ, ಕೋಣಗಳನ್ನು ಬಲಿ ನೀಡಿ ಹಾಳಾಗುತ್ತಿದ್ದೀರಿ. ಸಾಲ ಮಾಡಿ ಜಾತ್ರೆ, ಹಬ್ಬಗಳನ್ನು ಆಚರಿಸಿ ಕೈಸುಟ್ಟುಕೊಳ್ಳಬೇಡಿ, ದುಷ್ಚಟಗಳಿಗೆ ದಾಸರಾಗಬೇಡಿ" ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT