ಸಾಂದರ್ಭಿಕ ಚಿತ್ರ 
ರಾಜ್ಯ

ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿದ್ದ ಸುಮಾರು 100 ಮಕ್ಕಳು ಮರು ಸೇರ್ಪಡೆ

ಯಲಹಂಕ ಹತ್ತಿರ ಆವಲಹಳ್ಳಿಯಲ್ಲಿ ಕೂಲಿ ಕಾರ್ಮಿಕರ ಮಗಳಾಗಿರುವ ಪ್ರಿಯಾ(10 ವರ್ಷ) 3ನೇ ತರಗತಿ ...

ಬೆಂಗಳೂರು: ಯಲಹಂಕ ಹತ್ತಿರ ಆವಲಹಳ್ಳಿಯಲ್ಲಿ ಕೂಲಿ ಕಾರ್ಮಿಕರ ಮಗಳಾಗಿರುವ ಪ್ರಿಯಾ(10 ವರ್ಷ) 3ನೇ ತರಗತಿ ಕಳೆದ ನಂತರ ಶಾಲೆ ಬಿಟ್ಟಿದ್ದಳು. ನನ್ನ ತಾಯಿ ಮತ್ತು ನಾನು ಶಿಕ್ಷಣ ಮುಂದುವರಿಸಬೇಕಂದಿದ್ದೆವು. ಆದರೆ ತಂದೆ ಶಾಲೆ ಬಿಡಿಸಿಬಿಟ್ಟರು ಎನ್ನುತ್ತಾಳೆ.

ಕೆಲಸ ಹುಡುಕಿಕೊಂಡು ಕಲಬುರಗಿಯಿಂದ ಬೆಂಗಳೂರಿಗೆ ಬಂದ 10 ವರ್ಷದ ಭಾಗೇಶ್ ಅನಿವಾರ್ಯವಾಗಿ ಶಾಲೆ ಬಿಡಬೇಕಾಗಿ ಬಂತು. 3 ವರ್ಷ ಶಾಲೆಗೆ ಹೋಗಿರಲಿಲ್ಲ. ಆತನ ಪೋಷಕರು ಕೂಡ ಕೂಲಿ ಕಾರ್ಮಿಕರು.

ಇದೀಗ ಪ್ರಿಯಾ ಮತ್ತು ಭಾಗೇಶ್ ಮತ್ತೆ ಶಾಲೆಗೆ ಸೇರಿದ್ದಾರೆ. ಅದಕ್ಕೆ ಕಾರಣ ಸರ್ಕಾರೇತರ ಸಂಘಟನೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೆಂಬಲಿತ ಸಂಘಟನೆಯೊಂದರ ಸದಸ್ಯರು ಬಂದು ಈ ಮಕ್ಕಳ ಪೋಷಕರ ಮನವೊಲಿಸಿದ್ದಾರೆ. ಈ ಮಕ್ಕಳಿಗೆ ಸ್ಪರ್ಷ ಎಂಬ ಸರ್ಕಾರೇತರ ಸಂಘಟನೆಯ ಆಶ್ರಯದಲ್ಲಿ 9 ತಿಂಗಳು ಅನೌಪಚಾರಿಕ ಶಿಕ್ಷಣ ನೀಡಲಾಗುತ್ತದೆ.

ಈ ಆಶ್ರಯ ನಿಲಯವನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯುಕ್ತ ವೈ ಮರಿಸ್ವಾಮಿ ಉದ್ಘಾಟಿಸಿದರು. ನಮ್ಮ ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು ಅವರನ್ನು ಮತ್ತೆ ಶಾಲೆಗೆ ಕರೆತರಬೇಕಾದ ಕೆಲಸ ಆಗಬೇಕಿದೆ ಎನ್ನುತ್ತಾರೆ.
ಸರ್ಕಾರೇತರ ಸಂಘಟನೆ ರಕ್ಷಿಸಿ ಕರೆದುಕೊಂಡು ಬಂದ ಮಕ್ಕಳು ಭಿಕ್ಷೆ ಬೇಡುವುದು, ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನುತ್ತಾರೆ ಸಂಘಟನೆಯ ಕಾರ್ಯಕ್ರಮ ಸಮನ್ವಯಕ ಮಂಜುನಾಥ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT