ಬೆಂಗಳೂರು: ರಾಜ್ಯಕ್ಕೆ ಈ ವರ್ಷ ಮುಂಗಾರು ಆರಂಭದಲ್ಲೇ ವರುಣನ ಕೃಪೆಯಾಗಿದ್ದು, ನಿರಂತರ ಮಳೆಯಿಂದ ರಾಜ್ಯದ ಜಲಾಶಯಗಳು ಕಳೆಗಟ್ಟತೊಡಗಿವೆ.
ಕಾವೇರಿ ಹಾಗೂ ಕಬಿನಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆ.ಆರ್.ಸಾಗರ ಸೇರಿ ಕಾವೇರಿ ಕಣಿವೆ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಏರುತ್ತಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಳೆದ 10 ದಿನದಿಂದ ಕೆಆರ್ಎಸ್ ನೀರಿನ ಮಟ್ಟ 80 ಅಡಿ ತಲುಪಿದೆ.
ಕೆಆರ್ ಎಸ್ ನ ಒಳಹರಿವು 8 ಸಾವಿರ ಕ್ಯೂಸೆಕ್ಸ್ ಇತ್ತು, ಕೊಡಗು ಮತ್ತು ಕಾವೇರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಒಳಹರಿವು 15 ಸಾವಿರ ಕ್ಯೂಸೆಕ್ಸ್ ತಲುಪಿದೆ,
ಪ್ರಸಕ್ತ ನೀರಿನ ಮಟ್ಟ-80 ಅಡಿ
ಒಳಹರಿವು- 8ಸಾವಿರ ಕ್ಯೂಸೆಕ್ಸ್
ಪ್ರಸಕ್ತ ನೀರಿನ ಮಟ್ಟ-2,267 ಅಡಿ
ಗರಿಷ್ಟ ನೀರಿನ ಮಟ್ಟ-2,284 ಅಡಿ
ಒಳಹರಿವು- 23ಸಾವಿರ ಕ್ಯೂಸೆಕ್ಸ್
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos