ಗೌರಿ ಲಂಕೇಶ್ 
ರಾಜ್ಯ

3 ಮನೆಗಳಿಂದ ಗೌರಿ ಲಂಕೇಶ್ ಹತ್ಯೆಗೆ ಕಾರ್ಯಾಚರಣೆ: 21 ಮೊಬೈಲ್ ಬಳಸಿದ್ದ ಅಮೋಲ್ ಕಾಳೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಅಮೋಲ್ ಕಾಳೆ ಅಲಿಯಾಸ್ ಬಾಯ್ ಸಾಬ್, ಮತ್ತೊಬ್ಬ ಆಱೋಪಿ ಪರಶುರಾಮ್ ವಾಗ್ಮೋರೆ ಜೈಲಿಗೆ ಬಂದಾಗ ತಲೆ...

ಬೆಂಗಳೂರು:  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಅಮೋಲ್ ಕಾಳೆ ಅಲಿಯಾಸ್ ಬಾಯ್ ಸಾಬ್, ಮತ್ತೊಬ್ಬ ಆರೋಪಿ ಪರಶುರಾಮ್ ವಾಗ್ಮೋರೆ ಜೈಲಿಗೆ ಬಂದಾಗ ತಲೆ ಚಚ್ಚಿಕೊಂಡಿದ್ದಾನೆ ಎಂದು ಹೇಳಲಾಗಿದೆ.ಬಂಧಿತ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆಯನ್ನು ನೋಡಿದ ಕೂಡಲೇ ಜೋರಾಗಿ ಕಿರುಚಿಕೊಂಡು ಗೋಡೆಗೆ ಮತ್ತು ಬಾಗಿಲಿಗೆ ತಲೆ ಚಚ್ಚಿಕೊಂಡಿದ್ದಾನೆ.
ಜೂನ್ 12 ರಂದು ಕಾಳೆಯನ್ನು ಬೆಳಗಾವಿಯಯಲ್ಲಿ ಎಸ್ ಐಟಿ ಅಧಿಕಾರಿಗಳು ವಶಕ್ಕೆ ತೆಗದುಕೊಂಡಿದ್ದಾರೆ. ವಿಚಾರಣೆ ವೇಳೆ ಕಾಳೆ ಪೊಲೀಸರಿಗೆ ಮೂರು ಸ್ಥಳಗಳನ್ನು ತೋರಿಸಿದ್ದಾನೆ.  ಆ ಪ್ರದೇಶಗಳಲ್ಲಿ ತನ್ನ ಸಹಚರರು ಇದ್ದಿದ್ದಾಗಿ ಹೇಳಿದ್ದಾನೆ, ಕಾಳೆ ವರ್ತನೆ ನೋಡಿದರೇ ಆತನಿಗೆ ವಾಗ್ಮೋರೆ ಪರಿಚಯ ಚೆನ್ನಾಗಿಯೇ ಇದೆ ಎಂಬುದು ತಿಳಿಯುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂದು ಮನೆ ಸಾಯಿ ಲಕ್ಷ್ಮಿ ಲೇಔಟ್ ನ ಸರ್ಕಾರಿ ಶಾಲೆ ಹಿಂಭಾಗ ಮತ್ತೊಂದು ಮನೆ ಮಾಗಡಿ ಮೈನ್ ರೋಡ್ ನಲ್ಲಿದೆ. ಸಾಯಿ ಲಕ್ಷ್ಮಿ ಲೇಔಟ್ನ ಮನೆಯೊಂದರಲ್ಲಿ ಕೂದಲುಗಳು ಸಿಕ್ಕಿದ್ದು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ
ಕಾಳೆ, ಅಮಿತ್ ಮತ್ತು ಎಡ್ವೇ ಎಂಬುವರ ಜೊತೆ ಯಶವಂತಪುರ ಸರ್ಕಲ್ ನಲ್ಲಿರುವ ಮನೆಯಲ್ಲಿದ್ದುದ್ದಾಗಿ ಹೇಳಿದ್ದಾನೆ. ಆ ಮನೆಯಲ್ಲಿದ್ದುಕೊಂಡು ಗೌರಿ ಅವರ ಚಲನಲನಗಳನ್ನು ಗಮನಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸೀಜ್ ಮಾಡಿರುವ ಡೈರಿಯಲ್ಲಿ  ಕೋಡ್ ವರ್ಡ್ ಬರೆದಿಡಲಾಗಿದೆ.
ಆರೋಪಿ ಕಾಳೆ ಸುಮಾರು 21 ಮೊಬೈಲ್ ಹಾಗೂ ಸುಜಿತ್ 22 ಮೊಬೈಲ್ ಗಳನ್ನು ಬಳಸಿದ್ದಾರೆ.,ಈ ಮೊಬೈಲ್ ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲ.ಯಕ್ಕ ಕಳುಹಿಸಲಾಗಿದೆ.
ಅಧಿಕಾರಿಗಳು ಆರೋಪಿಗಳ ಪೋಷಕರ ವಿಚಾರಣೆ ನಡೆಸಿದ್ದಾರೆ,  ಬೆಂಗಳೂರಿಗೆ ಆಗಮಿಸಿದ್ದ  ಬಂಧಿತ ಪರಶುರಾಮ್ ವಾಗ್ಮೋರೆ ಅವರಿಗೆ ಪೋಷಕರ ಜೊತೆ ಫೋನ್ ನಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದರು.ತಮ್ಮ ಮಗ ಯಾವುದೇ ತಪ್ಪು ಮಾಜಿಲ್ಲ ಎಂದು ವಾಗ್ಮೋರೆ ತಂದೆ ಹೇಳಿದ್ದಾರೆ,

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT