ಹಿರಿಯರ ಪಾಲಿಗೆ ಮಂಗಳೂರು ದೇಶದಲ್ಲೇ ಕೆಟ್ಟ ನಗರ: ಅಧ್ಯಯನ ವರದಿ
ಬೆಂಗಳೂರು: ಹಿರಿಯ ನಾಗರಿಕರ ಪಾಲಿಗೆ ಭಾರತದಲ್ಲೇ ಮಂಗಳೂರು ಅತ್ಯಂತ ಕೆಟ್ಟ ಪ್ರದೇಶ ಇಲ್ಲಿನ ಮನೆಗಳಲ್ಲಿ ಹಿರಿಯರ ಮೇಲೆ ಅತಿ ಹೆಚ್ಚು ದೌರ್ಜನ್ಯ ನಡೆಯುತ್ತಿದೆ ಎಂದು ಹೆಲ್ತ್ ಕೇರ್ ಇಂಡಿಯಾ ನಡೆಸಿದ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಶೇ.47ರಷ್ಟು ಹಿರಿಯರು ಮನೆಯಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂದು ವರದಿ ಹೇಳಿದ್ದು ಭಾರತದಲ್ಲಿ ಸಾಮಾಜಿಕ ತಾಣಗಳ ಪ್ರಭಾವದಿಂಡಾಗಿ ಸೊಸೆಯಂದಿರು ಮನೆ ಹಿರಿಯರನ್ನು ನಿರ್ಲಕ್ಷಿಸುತ್ತಾರೆ, ಹಿರಿಯರ ಪಾಲಿಗೆ ಮಕ್ಕಳು, ಸೊಸೆಯಂದಿರೇ ಖಳನಾಯಕರಾಗುತ್ತಾರೆ ಎಂದು ಅಧ್ಯಯನ ತಿಳಿಸಿದೆ.
‘Elder Abuse in India 2018 — Changing Cultural Ethos and Impact of Technology” ಎನ್ನುವ ಅಧ್ಯಯನ ವರದಿಯೊಂದು ಹಿರಿಯರ ಮೇಲಿನ ದೌರ್ಜನ್ಯ ವಿರುದ್ಧ ಜಾಗೃತಿಯ ಜಾಗತಿಕ ದಿನದ ಅಂಗವಾಗಿ ಗುರುವಾರ ಪ್ರಕಟವಾಗಿದೆ. ಭಾರತದ 23 ನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಒಟ್ಟಾರೆ 52% ನಷ್ಟು ಪ್ರಕರಣಗಳಲ್ಲಿ ಹಿರಿಯರ ದೌರ್ಜನ್ಯಕ್ಕೆ ಮಗನು ಕಾರಣ ಎಂದು ಕಂಡುಬಂದರೆ ಇನ್ನು 34%ದಷ್ಟು ಪ್ರಕರಣಗಳಲ್ಲಿ ಸೊಸೆ ಕಾರಣಕರ್ತಳಾಗಿದ್ದಾಳೆ. ಹಿರಿಯರಿಗೆ ಅಗೌರವ ತೋರುವವರ ಪ್ರಮಾಣ 56% ಇದ್ದರೆ .49% ಪ್ರಕರಣಗಳಲ್ಲಿ ಅವರಿಗೆ ತುಚ್ಚ ಮಾತುಗಳನ್ನು ಆಡಿ ನಿರ್ಲಕ್ಷಿಸಲಾಗುತ್ತದೆ.
ಸಾಮಾಜಿಕ ತಾಣಗಳು ಕುಟುಂಬ ಸದಸ್ಯರ ಸಮಯವನ್ನು ಕಸಿದುಕೊಳ್ಳುತ್ತಿದೆ ಎಂದು 78% ರಷ್ಟು ಮಂದಿ ಭಾವಿಸಿದ್ದಾರೆ. ಇನ್ನು 73%ರಷ್ಟು ಮಂದಿ ತಮ್ಮ ಮಕ್ಕಳು ಮನೆಯಲ್ಲೇ ಇದ್ದರೂ ಫೋನ್ ನಲ್ಲಿಯೇ ಬ್ಯುಸಿಯಾಗಿರುತ್ತಾರೆ ಎಂದಿದ್ದಾರೆ. ಇದಾಗಿ ಈ ಅಧ್ಯಯನ ವರದಿಯು ಒಟ್ಟು 5,014 ಮಂದಿಯ ಅಭಿಪ್ರಾಯ ದಾಖಲಿಸಿದೆ.
"ಹಿರಿಯರ ಮೇಲಿನ ದೌರ್ಜನ್ಯವು ಬೆಂಗಳೂರಿನಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ, ಉದಾಸೀನತೆ ಮತ್ತು ದೈಹಿಕ ಹಿಂಸೆ ನೀಡುವ ಮೂಲಕ ಅವರ ಮೇಲೆ ದೌಯ್ರ್ಜನ್ಯ ನಡೆಸಲಾಗುತ್ತಿದೆ"ಎಲ್ಡರ್ಸ್ ಹೆಲ್ಪ್ ಲೈನ್ ಸಂಚಾಲಕರಾದ ಅಡ್ವೋಕೇಟ್ ಶಿವಕುಮಾರ್ ಹೇಳಿದ್ದಾರೆ.
"ಯುವಜನತೆ ಹಿರಿಯರಿಗೆ ದೈಹಿಕವಾಗಿ ಹಿಂಸೆ ನಿಡುತ್ತಾರೆ, ಅವರನ್ನು ಮನೆಯಿಂದ ಹೊರಹಾಕುತ್ತಾರೆ.ಬೆಂಗಳೂರು ವಿಶ್ವವಿದ್ಯಾನಿಲಯದ "ಮನೋವಿಜ್ಞಾನ ಪ್ರಾದ್ಯಾಪಕಿಯಾಗಿದ್ದ ಇಂದಿರಾ ಜೈ ಪ್ರಕಾಶ್ ಹೇಳಿದ್ದಾರೆ. "ಪೋಷಕರು ಹಾಗೂ ಹಿರಿಯನಾಗರಿಕ ನಿರ್ವಹಣೆ, ಕಲ್ಯಾಣ ಕಾಯ್ದೆಯ ಅನುಸಾರ ಮಕ್ಕಳು ಯಾರು ಹಿರಿಯರನ್ನು ಪೋಷಿಸುವ ಸಾಮರ್ಥ್ಯ ಹೊಂದಿದ್ದು ಅವರನ್ನು ದೂರ ಮಾಡಿದರೆ ಆಗ ಹಿರಿಯ ನಾಗರಿಕರು ಟ್ರಿಬ್ಯೂನಲ್ ಗೆ ದೂರು ಸಲ್ಲಿಸಬಹುದು. ಈ ಸಮಸ್ಯೆಯ ಪರಿಹಾರಕ್ಕಾಗಿ ಕುಟುಂಬ ಸದಸ್ಯರು ಹೆಚ್ಚು ಸಂವಹನ ನಡೆಸುವ ಅಗತ್ಯವಿದೆ ಎಂದು ಹೆಲ್ತ್ ಏಜ್ ಇಂಡಿಯಾದ ರಾಜ್ಯ ಘಟಕದ ಮುಖ್ಯಸ್ಥೆ ರೇಖಾ ಮೂರ್ತಿ ಹೇಳಿದ್ದಾರೆ." ನಾವು ಹೆಲ್ಪ್ಏಜ್ ಇಂಡಿಯಾ ಎಸ್ ಒ ಎಸ್ ಮೂಲಕ ಹೆಲ್ಪ್ ಲೈನ್ ಸಂಖ್ಯೆ, ವೃದ್ದಾಶ್ರಮ, ಗಳ ಮೂಲಕ ಅವರಿಗೆ ನೆರವಾಗಲು ಬಯಸುತ್ತೇವೆ" ಅವರು ವಿವರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos