ಕಬ್ಬನ್ ಪಾರ್ಕ್ 
ರಾಜ್ಯ

ಕಬ್ಬನ್ ಪಾರ್ಕಿಗೆ ಸಿಸಿಟಿವಿ ಅಳವಡಿಕೆ, ಕಾಗದ ಮೇಲೆಯೇ ಉಳಿದ ಪ್ರಸ್ತಾವ

ಕಬ್ಬನ್ ಪಾರ್ಕಿನಲ್ಲಿ ಸಿಸಿಟಿವಿ ಅಳವಡಿಸುವ ಪ್ರಸ್ತಾವ 2013ರಿಂದಲೂ ಇದ್ದು, 2015ರ ಸಾಮೂಹಿಕ ಅತ್ಯಾಚಾರ ಘಟನೆ ನಂತರ ತೀವ್ರಗೊಂಡಿದೆ. ಆದರೆ, ಈವರೆಗೂ ಅದನ್ನು ಅಳವಡಿಸಲು ಸಾಧ್ಯವಾಗಿಲ್ಲ

ಬೆಂಗಳೂರು : 2015 ರ ಸೆಪ್ಟೆಂಬರ್ ತಿಂಗಳಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳು  ಒಂಟಿಯಾಗಿ ಕಬ್ಬನ್ ಪಾರ್ಕಿನಲ್ಲಿ ವಾಯು ವಿಹಾರ ಮಾಡುತ್ತಿದ್ದ 30 ವರ್ಷದ  ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಬಳಿಕ  ಪಾರ್ಕಿನಲ್ಲಿ ಸಿಸಿಟಿವಿ ಅಳವಡಿಸಬೇಕೆಂಬ ಬೇಡಿಕೆ ತೀವ್ರಗೊಂಡಿತ್ತು. ಆದರೆ, ಇಂದು ಕೂಡಾ ಸಿಸಿಟಿವಿ ಅಳವಡಿಕೆ ಪ್ರಸ್ತಾವ  ಕಾಗದ ಮೇಲೆಯೇ ಉಳಿದಿದೆ. 
ಸಿಸಿಟಿವಿ ಅಳವಡಿಕೆ ಯಾರ ಜವಾಬ್ದಾರಿ ಎಂಬ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್  ಹಲವರನ್ನು ವಿಚಾರಿಸಲು ಮುಂದಾದ್ದಾಗ ಒಬ್ಬರು ಮತ್ತೊಬ್ಬರ  ಕಡೆಗೆ ಕೈ ತೋರಿಸುತ್ತಾರೆ.  ಪೊಲೀಸರು ತೋಟಗಾರಿಕೆ ಇಲಾಖೆಗೆ ಹೇಳಿದ್ದರೆ, ತೋಟಗಾರಿಕೆ ಇಲಾಖೆ, ಬೆಸ್ಕಾಂ, ಬೆಸ್ಕಾಂ ಬಿಬಿಎಂಪಿಗೆ ಕಡೆಗೆ ಬಿಬಿಎಂಪಿ ತೋಟಗಾರಿಕೆ ಇಲಾಖೆಯದ್ದೇ ಜವಾಬ್ದಾರಿ ಎನ್ನುತ್ತದೆ.
 ಈ ಮಧ್ಯೆ 300 ಎಕರೆ ವಿಸ್ತೀರ್ಣದ ಕಬ್ಬನ್ ಪಾರ್ಕಿಗೆ 8 ಕಡೆ ಪ್ರವೇಶದ್ವಾರವಿದೆ. ಇವುಗಳಲ್ಲಿ ಎಂ. ಜಿ. ರಸ್ತೆ, ಕಸ್ತೂರಿ ಬಾ ರಸ್ತೆ. ಹಡ್ಸನ್ ಸರ್ಕಲ್,  ಅಂಬೇಡ್ಕರ್  ವಿಧಿ ಬಿಟ್ಟರೆ ಉಳಿದ ಪ್ರವೇಶದ್ವಾರಗಳು ಅಸುರಕ್ಷಿತವಾಗಿವೆ.
ಪ್ರಸ್ತುತ ಇಲ್ಲಿ  ಕೆಲವೇ ಪೊಲೀಸರು ಹಾಗೂ 22 ತೋಟಗಾರಿಕೆ ಇಲಾಖೆಯ ಭದ್ರತಾ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, ವಾಹನ ಕಳ್ಳತನ, ಸರಗಳ್ಳತನ ತಡೆಗಟ್ಟುವಲ್ಲಿ ಸಾಧ್ಯವಾಗುತ್ತಿಲ್ಲ. ಸಂಚಾರ ದಟ್ಟಣೆ ಸಂದರ್ಭದಲ್ಲಂತೂ ಇಲ್ಲಿ ಶೋಚನೀಯ ಪರಿಸ್ಥಿತಿ ಕಂಡಬರುತ್ತದೆ.
ಕಬ್ಬನ್ ಪಾರ್ಕಿನಲ್ಲಿ ಸಿಸಿಟಿವಿ ಅಳವಡಿಸುವ ಪ್ರಸ್ತಾವ 2013ರಿಂದಲೂ ಇದ್ದು, 2015ರ ಸಾಮೂಹಿಕ ಅತ್ಯಾಚಾರ ಘಟನೆ ನಂತರ ತೀವ್ರಗೊಂಡಿದೆ. ಆದರೆ, ಈವರೆಗೂ ಅದನ್ನು ಅಳವಡಿಸಲು ನಮ್ಮಿಂದ ಸಾಧ್ಯವಾಗಿಲ್ಲ ಎಂದು ತೋಟಗಾರಿಕೆ ಮೂಲಗಳು ಹೇಳಿವೆ.
ವಿಶಾಲ ವಿಸ್ತೀರ್ಣವುಳ್ಳ ಕಬ್ಬನ್ ಪಾರ್ಕಿನಲ್ಲಿ ಭದ್ರತೆ ಒದಗಿಸುವುದು ಕಷ್ಟಸಾಧ್ಯ. ಅದರಲ್ಲೂ  ವಾರಾಂತ್ಯ ಹಾಗೂ ಕ್ರಿಕೆಟ್ ಸಂದರ್ಭದಲ್ಲಂತೂ ಭಾರಿ ಕಷ್ಟ.  ಕ್ರಿಕೆಟ್ ವೀಕ್ಷಕರು ಪಾರ್ಕಿನೊಳಗೆ ವಾಹನಗಳ ಪಾರ್ಕಿಂಗ್ ಮಾಡುತ್ತಾರೆ.  ವಿಶೇಷ ಸಂದರ್ಭಗಳಲ್ಲಿ ಭದ್ರತೆ ಒದಗಿಸುತ್ತೇವೆ, ಆದರೆ, ವರ್ಷವೀಡಿ ಭದ್ರತೆ ಒದಗಿಸುವುದಕ್ಕೆ ಆಗುವುದಿಲ್ಲ ಎಂದು ಪೊಲೀಸರು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

ನಟ ದೇವರಾಜ್ 2ನೇ ಪುತ್ರ ನಟ ಪ್ರಣಮ್ ನಿಶ್ಚಿತಾರ್ಥ

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!

'Chhatron Ki Goonj' ಕಾರ್ಯಕ್ರಮದ ವೇಳೆ Rahul Gandhi ಮಾಡಿದ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್!