ರಾಜ್ಯ

ಸಿದ್ದರಾಮಯ್ಯ ಈಗಲೂ ನಮ್ಮ ಮುಖ್ಯಮಂತ್ರಿ- ಸಚಿವ ಪುಟ್ಟರಂಗಶೆಟ್ಟಿ

Nagaraja AB
ಚಾಮರಾಜನಗರ : ರಾಜ್ಯಕ್ಕೆ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ್ದರೆ ನಮ್ಮಗೆ ಈಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು  ಹಿಂದುಳಿದ ವರ್ಗಗಳ ಖಾತೆ ಸಚಿವ ಪುಟ್ಟರಂಗಶೆಟ್ಟಿ  ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ  ಸ್ವೀಕರಿಸದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರದ ವೇಳೆಯಲ್ಲಿ ತಮ್ಮನ್ನು ಸಚಿವನ್ನಾಗಿ ಮಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅವರ ಭರವಸೆಯಂತೆ ಸಚಿವನ್ನಾಗಿದ್ದು, ಸಿದ್ದರಾಮಯ್ಯ ಕರ್ನಾಟಕದ ಮತ್ತೊಬ್ಬ  ದೇವರಾಜ ಅರಸು ಎಂದು ಬಣ್ಣಿಸಿದರು.
ಹಿಂದುಳಿದ ಖಾತೆ ಸಚಿವ ಸ್ಥಾನ ದೊರೆತಿರುವುದು ತಮ್ಮಗೆ ಸಂತಸವನ್ನುಂಟುಮಾಡಿದೆ.  ತಮ್ಮಗೆ ದೊರೆತ್ತಿರುವ ಖಾತೆ ಮುಖ್ಯವಲ್ಲಾ, ಹೊಸ ಕಾರ್ಯಕ್ರಮಗಳೊಂದಿಗೆ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಜನತೆಯ ಸೇವೆ ಮಾಡುವುದಾಗಿ ತಿಳಿಸಿದರು.
SCROLL FOR NEXT