ರಾಜ್ಯ

ಕಾನೂನು ಹೋರಾಟದಲ್ಲಿ ಜಯ, ರೋಹಿಣಿ ಮತ್ತೆ ಹಾಸನ ಜಿಲ್ಲಾಧಿಕಾರಿ

Nagaraja AB
ಬೆಂಗಳೂರು: ಕೊನೆಗೂ ರಾಜ್ಯಸರ್ಕಾರದ ವಿರುದ್ಧದ ಹೋರಾಟದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂದೂರಿಗೆ ಜಯ ಸಿಕ್ಕಿದೆ. ಅವರನ್ನು ಮತ್ತೆ  ಹಾಸನ ಜಿಲ್ಲಾಧಿಕಾರಿಯಾಗಿ  ರಾಜ್ಯಸರ್ಕಾರ ವರ್ಗಾವಣೆ ಮಾಡಿದೆ.
ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಚುನಾವಣೆ ಸಂದರ್ಭದಲ್ಲಿ ಮಾರ್ಚ್ 7 , 2018ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಿತ್ತು.ಅವಧಿ ಪೂರ್ವ ವರ್ಗಾವಣೆ ವಿರೋಧಿಸಿ ರೋಹಿಣಿ ಸಿಂದೂರಿ ಸಿಎಟಿ ಹಾಗೂ ಹೈಕೋರ್ಟ್  ಮೊರೆ ಹೋಗಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್  ವಿಭಾಗೀಯ ಪೀಠದ  ನ್ಯಾಯಾಧೀಶರಾದ ಹೆಚ್. ಜಿ. ರಮೇಶ್ ಹಾಗೂ  ಮೊಹಮ್ಮದ್ ನವಾಜ್  ಅವರಿದ್ದ ಪೀಠದ ಮುಂದೆ ರೋಹಿಣಿ ಸಿಂದೂರಿ ಅವರನ್ನು ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ನೇಮಿಸುವುದಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ  ಹೇಳಿಕೆ ನೀಡಿದ್ದರು.
ಅದರಂತೆ ಅವರನ್ನು ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಅಧಿಕೃತ ಆದೇಶ ಪ್ರಕಟಿಸಿದೆ.
SCROLL FOR NEXT