ಮಗುವಿನ ಸಮಾಧಿಗಾಗಿ ತೋಡಿದ್ದ ಹಳ್ಳ 
ರಾಜ್ಯ

ನಮ್ಮ ರಕ್ತ-ಮಾಂಸ ಹಂಚಿಕೊಂಡು ಜನಿಸಿದ ಮಗುವನ್ನು ನಾವೇ ಏಕೆ ಕೊಲ್ಲುತ್ತೇವೆ'?

ನಮ್ಮ ಮಗುವನ್ನು ರಕ್ಷಿಸಿಕೊಳ್ಳಲು ನಾವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ರಕ್ತ,ಮಾಂಸ ಹಂಚಿಕೊಂಡ ಕಂದಮ್ಮನನ್ನು ನಾವು ಏಕೆ ಕೊಲ್ಲಲು...

ಬೆಳಗಾವಿ: ಹೆಣ್ಣು ಮಗುವನ್ನು ಜೀವಂತವಾಗಿ ಸಮಾಧಿ ಮಾಡಲು ಯತ್ನಿಸಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಮ್ಮ ಮಗುವನ್ನು ರಕ್ಷಿಸಿಕೊಳ್ಳಲು ನಾವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ರಕ್ತ, ಮಾಂಸ ಹಂಚಿಕೊಂಡ ಕಂದಮ್ಮನನ್ನು ನಾವು ಏಕೆ ಕೊಲ್ಲಲು ಬಯಸುತ್ತೇವೆ ಎಂದು ಮಗುವಿನ ತಂದೆ ಸಂದೀಪ್ ಜಾದರ್ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಬೆಳಗಾವಿಯ ಶಹಾಪೂರದ ಸ್ಮಶಾನದಲ್ಲಿ ಎರಡು ತಿಂಗಳ ಹೆಣ್ಣುಮಗುವನ್ನು ಜೀವಂತ ಸಮಾಧಿ ಮಾಡಲು ಯತ್ನಿಸಿದರು ಎಂಬ ವರದಿ ಪ್ರಕಟವಾಗಿತ್ತು. ಮಗು ಮಿದುಳಿನ ರಕ್ತ ಸ್ರಾವದಿಂದ ಬಳಲುತ್ತಿತ್ತು. ಗುರುವಾರ ಸಂಜೆ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಕೊನೆಯುಸಿರೆಳೆದಿತ್ತು , 
ಶಹಾಪೂರ ಸಮಾಧಿಯಲ್ಲಿ ಕೆಲಸ ಮಾಡುವ ವಾಚ್ ಮನ್ ರಾಜೇಶ್ ಬಂಚ್ ಗುಂಪೊಂದು ಹೆಣ್ಣು ಮಗುವನ್ನು ಜೀವಂತ ಸಮಾಧಿ ಮಾಡಲು ಬಂದಿದ್ದರು ಎಂದು ಹೇಳಿದ್ದರು. ಮಗುವನ್ನು ಗುಂಡಿಯೊಳಗೆ ಹಾಕುವ ವೇಳೆ ಅದು ಕೈಕಾಲು ಆಡಿಸುತ್ತಿತ್ತು. ಹೀಗಾಗಿ ಜೀವಂತ ಮಗುವನ್ನು ಸಮಾಧಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದ್ದರು. ಮಗು ಸಾವಿನ ಸಮೀಪದಲ್ಲಿದೆ, ಸತ್ತಂತೆಯೇ ಲೆಕ್ಕ ಹೀಗಾಗಿ ಸಮಾಧಿ ಮಾಡಬೇಕೆಂದು ಬಂದವರು ಹೇಳಿದ್ದರು.
ಆದರೆ ಮಗುವಿನ ತಂದೆ ಬೇರೆಯದ್ದೇ ಕಥೆ ಹೇಳುತ್ತಿದ್ದಾರೆ. 45 ದಿನಗಳ ನನ್ನ ಮಗು ಮಿದುಳಿನ ರಕ್ತ ಸ್ರಾವದಿಂದ ಬಳಲುತ್ತಿತ್ತು, ಚಿಂತಾಜನಕ ಸ್ಥಿತಿಯಲ್ಲಿದ್ದ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ಮಗುವಿನ ತಂದೆ ಜಾದರ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT