ಚಾಮರಾಜನಗರ: ಬೆಂಗಳೂರಿನ ಫರ್ಜಿ ಕೆಫೆಯಲ್ಲಿ ಕಾಂಗ್ರೆಸ್ ಶಾಸಕ ನಲಪಾಡ್ ಹ್ಯಾರಿಸ್ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ, ಚಾಮರಾಜನಗರದಲ್ಲಿ ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ್ ಮೇಲೆ ಕಾಂಗ್ರೆಸ್ ಮುಖಂಡನೊಬ್ಬ ಹಲ್ಲೆ ನಡೆಸಿದ್ದಾನೆ.
ಬಸ್ ನಲ್ಲಿ ಕಂಡಕ್ಟರ್ ಪ್ರಯಾಣಿಕರೊಬ್ಬರನ್ನು ಮುಂದೆ ಕಳುಹಿಸಲು ಪ್ರಯತ್ನಿಸುತ್ತಿರುವಾಗ, ಕಾಂಗ್ರೆಸ್ ಮುಖಂಡ ಮಹಾದೇವ ಸ್ವಾಮಿ ಎಂಬುವರ ಫೋನ್ ಆಕಸ್ಮಿಕವಾಗಿ ಕೆಳಗೆ ಬಿದ್ದಿತು. ಕಂಡಕ್ಟರ್ ರಾಜು ಮೇಲೆ ಹಲ್ಲೆ ಮಾಡಲು ಮಹಾದೇವಸ್ವಾಮಿ ಮತ್ತವರ ಸಹಚರರು ಇದಿಷ್ಟೇ ಕಾರಣ ಸಾಕಿತ್ತು, ಫೋನ್ ಸರಿಪಡಿಸಿಕೊಡು ಇಲ್ಲವೇ ಬೇರೆ ಫೋನ್ ಕೊಡು ಎಂದು ಜಗಳ ತೆಗೆದಿದ್ದಾನೆ,
ಚಾಮರಾಜನಗರ-ಬಿಆರ್ ಹಿಲ್ಸ್ ಬಸ್ ಕಂಡಕ್ಟರ್ ರಾಜುವಿನ ಮೇಲೆ ಯಳಂದೂರು ಬಳಿ ಹಾಡಹಗಲೇ ಹಲ್ಲೆ ನಡೆಸಿದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ,.ಯಳಂದೂರು ಕಾಂದ್ರೆಸ್ ಘಟಕದ ಸಾಮಾಜಿಕ ಮಾಧ್ಯಮ ಘಟಕದ ಮುಖ್ಯಸ್ಥ ಮಹಾದೇವಸ್ವಾಮಿ ಈ ರಂಪಾಟ ನಡೆಸಿದ್ದಾರೆ. ಬಸ್ ಕಂಡಕ್ಟರ್ ರಾಜು ಡ್ರೈವರ್ ಜೊತೆಗೂಡಿ ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತೆರಳಿದ್ದಾರೆ, ಒಂದು ವೇಳೆ ದೂರು ದಾಖಲಿಸಿದರೇ ಈ ಮಾರ್ಗದಲ್ಲಿ ಓಡಾಡಲು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ, ಹೀಗಾಗಿ ರಾಜು ದೂರು ದಾಖಲಿಸಿಲ್ಲ,
ನಳಪಾಡ್ ಮತ್ತವರ ಸ್ನೇಹಿತರು ಮಾಡಿದಂತೆ ಮಹಾದೇವ ಸ್ವಾಮಿ ಮತ್ತವರ ಸ್ನೇಹಿತರು ಮಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos